ಸುಗಮ ವಿದ್ಯುತ್ ಸರಬರಾಜಿಗೆ 175 ಕಿ. ಮೀ. ಹೊಸ ಲೈನ್ ನಿರ್ಮಾಣ- ಶಾಸಕ ಎಂ. ಬಿ. ಪಾಟೀಲ

ವಿಜಯಪುರ- ಬಬಲೇಶ್ವರ ವಿಧಾನಸಭೆ ಕ್ಷೇತ್ರದ ಹೆಸ್ಕಾಂ ಬಬಲೇಶ್ವರ ಉಪವಿಭಾಗ ವ್ಯಾಪ್ತಿಯಲ್ಲಿ, ಸಮರ್ಪಕ ವಿದ್ಯುತ್ ಪೂರೈಕೆ ನಿಟ್ಟಿನಲ್ಲಿ ರೂ. 7.33 ಕೋ. ವೆಚ್ಚದಲ್ಲಿ 174.34 ಕಿ.ಮೀ ಹೊಸ 11 ಕೆ. ವಿ. ಲೈನ್ ನಿರ್ಮಿಸುವ 28 ಕಾಮಗಾರಿಗಳನ್ನು ಆರಂಭಿಸಲಾಗಿದೆ ಎಂದು ಮಾಜಿ ಸಚಿವ, ಬಬಲೇಶ್ವರ ಶಾಸಕ ಎಂ. ಬಿ. ಪಾಟೀಲ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಬಲೇಶ್ವರ ವಿಧಾನಸಭೆ ಕ್ಷೇತ್ರವು ಸಂಪೂರ್ಣ ನೀರಾವರಿಗೆ ಒಳಪಟ್ಟಿದೆ. ನೀರಿನ ಬಳಕೆಗಾಗಿ ರೈತರಿಗೆ ವಿದ್ಯುತ್ ಅವಲಂಬನೆ ಅನಿವಾರ್ಯವಾಗಿದೆ. ಕೇಲವು ಫೀಡರಗಳು […]