ರಾಜ್ಯದ ಜನತೆಗೆ ಯುಗಾದಿ ಶುಭಾಶಯ ಕೋರಿದ ಡಿಸಿಎಂ ಗೋವಿಂದ ಕಾರಜೋಳ

ಬಸವ ನಾಡು ವಿಜಯಪುರ- ಡಿಸಿಎಂ ಗೋವಿಂದ ಕಾರಜೋಳ ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಷಯ ಕೋರಿದ್ದಾರೆ.ನೂತನ ಸಂವತ್ಸರವು ಎಲ್ಲರ ಬಾಳಿನಲ್ಲಿ ಹೊಸ ಚೇತನ, ಸುಖ- ಶಾಂತಿ, ನಿತ್ಯವೂ ನೆಮ್ಮದಿ- ಸಮೃದ್ದಿಯನ್ನು ತರಲಿ ಎಂದು ಡಿಸಿಎಂ ಹಾರೈಸಿದ್ದಾರೆ.ಆರೋಗ್ಯದ ವಿಷಯದಲ್ಲಿ ಜಾಗರೂಕರಾಗೋಣ. ನೆರೆಹೊರೆಯವರಿಗೆ ನೆರವಾಗೋಣ. ಎಲ್ಲರೂ ಸಾಧ್ಯವಾದಷ್ಟೂ ಮುಂಜಾಗ್ರತಾ ಕ್ರಮ, ಸರಕಾರದ ಮಾರ್ಗಸೂಚಿಗಳನ್ನು ಅನುಸರಿಸಿ, ಕರೊನಾ ಮುಕ್ತ ರಾಷ್ಟ್ರವಾಗಿಸಲು ಎಲ್ಲರೂ ಶ್ರಮಿಸೋಣ . ಯುಗಾದಿ ಹಬ್ಬವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸೋಣ ಎಂದು ಉಪಮುಖ್ಯ ಗೋವಿಂದ ಕಾರಜೋಳ […]

ಅಕ್ಕಮಹಾದೇವಿ ಮಹಿಳಾ ವಿವಿ ಹಿರಿಯ ಪ್ರಾಧ್ಯಾಪಕ ಪ್ರೊ. ಎಸ್. ಎ. ಖಾಜಿ ಸೇವಾ ನಿವೃತ್ತಿ- ವಿಶಿಷ್ಠ ಸನ್ಮಾನ

ಬಸವ ನಾಡು ವಿಜಯಪುರ- ವಿಜಯಪುರ ಜಿಲ್ಲೆಯ ತೊರವಿಯಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ಎಸ್. ಎ. ಖಾಜಿ ಸೇವಾ ನಿವೃತ್ತಿಯಾಗಿದ್ದಾರೆ.ಈ ಹಿನ್ನೆಲೆಯಲ್ಲಿ ಸಮಾಜ ಕಾರ್ಯ ವಿಭಾಗದ ಹಳೆಯ ವಿದ್ಯಾರ್ಥಿನಿಯರ ಸಂಘದ ವತಿಯಿಂದ ಅವರನ್ನು ವಿಶಿಷ್ಟ ರೀತಿಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹಲವಾರು ಸಂಘ ಸಂಸ್ಥೆಗಳಿಂದಲೂ ಸನ್ಮಾನಿಸಿ ಗೌರವಿಸಲಾಯಿತು.ವಿದ್ಯಾರ್ಥಿನಿಯರ ಸಂಘದ ಪರವಾಗಿ ಮಹಿಳಾ ವಿವಿ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲ, ವಿಶ್ರಾಂತ ಕುಲಪತಿ ಡಾ. ಮೀನಾ ಆರ್. ಚಂದಾವರಕರ, ತುಮಕೂರು ವಿವಿ […]

ಬಸವ ನಾಡಿನ ಅಂಕಿ-ಅಂಶಗಳ ನೋಟ ಪುಸ್ತಕ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ

ಬಸವ ನಾಡು ವಿಜಯಪುರ- ಬಸವ ನಾಡು ವಿಜಯಪುರ ಜಿಲ್ಲೆಯ 2019- 20 ನೇ ಆರ್ಥಿಕ ವರ್ಷದ ಅಂಕಿ-ಅಂಶಗಳ ನೋಟ ಎಂಬ ಪುಸ್ತಕವನ್ನು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಬಿಡುಗಡೆ ಮಾಡಿದರು.ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರ ಅಧ್ಯಕ್ಷತೆಯಲ್ಲಿ 7ನೇ ಆರ್ಥಿಕ ಗಣತಿಯ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ನಡೆಯಿತು.ಈ ಸಂದರ್ಭದಲ್ಲಿ ಅವರು ಜಿಲ್ಲೆಯ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಮತ್ತು ಇತರ ಚಟುವಟಿಕೆಗಳ ಬಗೆಗಿನ ಮಹತ್ವದ ಅಂಕಿ-ಅಂಶಗಳನ್ನು ಒಳಗೊಂಡ 2019-20 […]

ನಾಡಿನ ಜನತೆಗೆ ಯುಗಾದಿಯ ಶುಭಾಷಯ ಕೋರಿದ ಶಾಸಕ ಎಂ. ಬಿ. ಪಾಟೀಲ

ವಿಜಯಪುರ- ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ನಾಡಿನ ಜನತೆಗೆ ಹೊಸ ವರ್ಷ ಯುಗಾದಿಯ ಶುಭಾಷಯಗಳನ್ನು ಕೋರಿದ್ದಾರೆ. ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ನಿಮ್ಮೆಲ್ಲರ ಬಾಳಿನಲ್ಲಿ ಸಮೃದ್ಧಿ ಹಾಗೂ ಸಂತೋಷವಿರಲಿ ಎಂದು ಹಾರೈಸುತ್ತೇನೆ. ಕೊರೊನಾ ಸೋಂಕಿನ ಬಗ್ಗೆ ಎಚ್ಚರವಿರಲಿ. ಮಾಸ್ಕ್ ಧರಿಸಿ, ದೈಹಿಕ ಅಂತರ ಪಾಲಿಸಿ ಎಂದು ಟ್ವೀಟ್ ಮೂಲಕ ಯುಗಾದಿಯ ಶುಭ ಕೋರಿದ್ದಷ್ಟೇ ಅಲ್ಲದೇ, ಕೊರೊನಾ ಬಗ್ಗೆ ಎಚ್ಚರಿಗೆ ವಹಿಸಲೂ ಕರೆ ನೀಡಿದ್ದಾರೆ.