ರಾಜ್ಯದ ಜನತೆಗೆ ಯುಗಾದಿ ಶುಭಾಶಯ ಕೋರಿದ ಡಿಸಿಎಂ ಗೋವಿಂದ ಕಾರಜೋಳ

ಬಸವ ನಾಡು

ವಿಜಯಪುರ- ಡಿಸಿಎಂ ಗೋವಿಂದ ಕಾರಜೋಳ ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಷಯ ಕೋರಿದ್ದಾರೆ.
ನೂತನ ಸಂವತ್ಸರವು ಎಲ್ಲರ ಬಾಳಿನಲ್ಲಿ ಹೊಸ ಚೇತನ, ಸುಖ- ಶಾಂತಿ, ನಿತ್ಯವೂ ನೆಮ್ಮದಿ- ಸಮೃದ್ದಿಯನ್ನು ತರಲಿ ಎಂದು ಡಿಸಿಎಂ ಹಾರೈಸಿದ್ದಾರೆ.
ಆರೋಗ್ಯದ ವಿಷಯದಲ್ಲಿ ಜಾಗರೂಕರಾಗೋಣ. ನೆರೆಹೊರೆಯವರಿಗೆ ನೆರವಾಗೋಣ. ಎಲ್ಲರೂ ಸಾಧ್ಯವಾದಷ್ಟೂ ಮುಂಜಾಗ್ರತಾ ಕ್ರಮ, ಸರಕಾರದ ಮಾರ್ಗಸೂಚಿಗಳನ್ನು ಅನುಸರಿಸಿ, ಕರೊನಾ ಮುಕ್ತ ರಾಷ್ಟ್ರವಾಗಿಸಲು ಎಲ್ಲರೂ ಶ್ರಮಿಸೋಣ . ಯುಗಾದಿ ಹಬ್ಬವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸೋಣ ಎಂದು ಉಪಮುಖ್ಯ ಗೋವಿಂದ ಕಾರಜೋಳ ಶುಭಾಷಯ ಕೋರಿದ್ದಾರೆ.

Leave a Reply

ಹೊಸ ಪೋಸ್ಟ್‌