ವಿಜಯಪುರ ಎಂಸಿಎಚ್ ಆಸ್ಪತ್ರೆ ವೈದ್ಯರ ಅಧ್ವಾನ- ಬಿ ಎಲ್ ಡಿ ಇ ಆಸ್ಪತ್ರೆ ವೈದ್ಯರಿಂದ ಗರ್ಭಿಣಿ, ಮಗುವಿಗೆ ಜೀವದಾನ- ತಡವಾಗಿ ಬೆಳಕಿಗೆ ಬಂದ ಘಟನೆ

ಬಸವ ನಾಡು ವಿಜಯಪುರ- ಬಸವನಾಡು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ(ಎಂಸಿಎಚ್) ಅಧ್ವಾನದ ಕೇಂದ್ರವಾಗುತ್ತಿದೆ. ಇಲ್ಲಿಗೆ ಬರುವ ಗರ್ಭಿಣಿ ಮಹಿಳೆಯರಿಗೆ ಸೂಕ್ತ ಚಿಕಿತ್ಸೆ ನೀಡದೇ ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡಿದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.ಪೂಜಾ ಬಿಜ್ಜರಗಿ ಎಂಬ ಗರ್ಭಿಣಿ ಮಹಿಳೆ ಏ. 19 ರಂದು ಬೆಳಿಗ್ಗೆ 6 ಗಂಟೆಗೆ ಹೆರಿಗೆಗಾಗಿ ಜಿಲ್ಲಾಸ್ಪತ್ರೆಯ ಎಂಸಿಎಚ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ಯುವತಿಗೆ ಇದು ಎರಡನೇ ಹೆರಿಗಯಾಗಿತ್ತು. ಅದೇ ದಿನ ಬೆ. 11.30ರ ಸುಮಾರಿಗೆ ಹೆರಿಗೆ ನೋವಿದ್ದರೂ ನೆಲಮಹಡಿಯಿಂದ […]