ಕೊರೊನಾ ಹೆಮ್ಮಾರಿ ವಿರುದ್ಧ ಗೆದ್ದ ಶತಾಯುಷಿ ಸ್ವಾತಂತ್ರ್ಯ ಯೋಧ

ಬಸವ ನಾಡು

ವಿಜಯಪುರ- ಕೊರೊನಾ ಸೋಂಕಿತರಾಗಿದ್ದ ಶತಾಯುಷಿ‌ ಸ್ವಾತಂತ್ರ್ಯ ಹೋರಾಟಗಾರ ಗುಣಮುಖರಾಗುವ ಮೂಲಕ ಕೊರೊನಾ ಹೆಮ್ಮಾರಿ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಈ ಮೂಲಕ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ‌ ದೊರೆಸ್ವಾಮಿ ಕೊರಪನಾ ಸೊಂಕೀತರಿಗೆ ಮಾದರಿಯಾಗಿದ್ದಾರೆ. ಇವರನ್ನು ಕಂಡು ಕೊರೋನಾ ಓಡಿ ಹೋದಂತಾಗಿದೆ. ‌ದೇಶದಲ್ಲಿ ಕೊರೋನಾದಿಂದ ಜನ ಭಯ ಪಡುತ್ತಿರುವ ಈ ಸಮಯದಲ್ಲಿ ಶತಾಯುಷಿ ಎಚ್. ಎಸ್. ದೊರೆಸ್ವಾಮಿ ಕೊರೊನಾ ಸೊಂಕೀತರಿಗೆ ಸ್ಪೂರ್ತಿಯಾಗಿದ್ದಾರೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್. ದೊರೆಸ್ವಾಮಿ ವಾರಗಳ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಇದೀಗ ಗುಣಮುಖರಾಗಿ ಗಮನ ಸೆಳೆದಿದ್ದಾರೆ. ಬೆಂಗಳೂರಿನ ಜಯದೇವ ಹೃದ್ರೋಗ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಶತಾಯುಷಿ, ಕೊರೊನಾದಿಂದ ಗುಣಮುಖರಾದ ಹಿನ್ನೆಲೆಯಲ್ಲಿ ಅಸ್ಪತ್ರೆ ಡಿಸ್ಚಾರ್ಜ್ ಆಗಿದ್ದಾರೆ. ಅಸ್ಪತ್ರೆಯಿಂದ ಬಿಡುಗಡೆ ಅದ ಬಳಿಕ ಮಾತನಾಡಿರುವ ಅವರು, ಕೊರೊನಾ ಸೋಂಕಿತರು ಯಾರೂ ಧೃತಿಗೆಡದೆ ಚಿಕಿತ್ಸೆ ಪಡೆಯಬೇಕು. ಸೊಂಕು‌ ಕಾಣಿಸಿಕೊಂಡ ತಕ್ಷಣವೇ ಚಿಕಿತ್ಸೆ ಪಡೆದರೆ ಆತಂಕ ಪಡುವ ಅಗತ್ಯವಿಲ್ಲ.ಎಂದು ಹೇಳಿದ್ದಾರೆ.

Leave a Reply

ಹೊಸ ಪೋಸ್ಟ್‌