ರೆಡ್ ಕ್ರಾಸ್ ಸೊಸಾಯಿಟಿಯಿಂದ ವಿಜಯಪುರ ಜಿಲ್ಲಾಡಳಿತಕ್ಕೆ ವೆಂಟಿಲೇಟರ್, ಆಕ್ಸಿಜನ್ ಕಾನ್ಸಂಟ್ರೆಟರ್ ಹಸ್ತಾಂತರ

ವಿಜಯಪುರ: ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕರ್ನಾಟಕ ರಾಜ್ಯ ಶಾಖೆಯಿಂದ ಒಂದು ವೆಂಟಿಲೇಟರ್ ಮತ್ತು 2 ಆಕ್ಸಿಜನ್ ಕಾನ್ಸಂಟ್ರೆಟರ್ ಗಳನ್ನು ನೀಡಲಾಯಿತು.

ರಾಜ್ಯ ಘಟಕದಿಂದ ಬಂದ ಈ ಸಲಕರಣೆಗಳನ್ನು ವಿಜಯಪುರ ರೆಡ್ ಕ್ರಾಸ್ ಸೊಸಾಯಿಟಿ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು. ಕೊರೊನಾ ಪೀಡಿತ ರೋಗಿಗಳ ಚಿಕಿತ್ಸೆಗಾಗಿ ವೆಂಟಿಲೇಟರ್ ಮತ್ತು ಆಕ್ಸಿಜನ ಕಾನ್ಸಂಟ್ರೆಟರ್ ಗಳು ಪ್ರಮುಖ ಪಾತ್ರ ವಹಿಸುವುದರಿಂದ ಭಾರತೀಯ ರೆಡ್ ಕ್ರಾಸ್ ಸೊಸಾಯಿಟಿ ಈ ಸಲಕರಣೆಗಳನ್ನು ವಿಜಯಪುರ ಜಿಲ್ಲಾಡಳಿತಕ್ಕೆ ಕೊರೊನಾ ಸೋಂಕಿತರ ಉಪಚಾರಕ್ಕೆ ನೀಡಿದೆ.

ಸಲಕರಣೆಗಳನ್ನು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಜಿಲ್ಲಾ ಶಾಖೆ ಚೇರಮನ್ ಡಾ. ಎಲ್. ಎಚ್. ಬಿದರಿ, ವೈಸ್ ಚೇರಮನ್ ಶರದ ರೊಡಗಿ, ಕಾರ್ಯದರ್ಶಿ ಮುರನಾಳ ಇವರು ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಹಸ್ತಾಂತರಿಸಿದರು.

ಕೊರೊನಾ ಸಂದರ್ಭದಲ್ಲಿ ಟೀಕೆ ಮಾಡುವುದನ್ನು ಬಿಟ್ಟರೆ ಕಾಂಗ್ರೆಸ್ ಕೊಡುಗೆ ಏನು? ಆರ್. ಎಸ್. ಪಾಟೀಲ ಕೂಚಬಾಳ ಪ್ರಶ್ನೆ

Leave a Reply

ಹೊಸ ಪೋಸ್ಟ್‌