ವಿಜಯಪುರ ಎಪಿಎಂಸಿಯಲ್ಲಿ ಮಾವಿನ ಹಣ್ಣುಗಳ ಖರೀದಿಗೆ ಜನರ ನಿರಾಸಕ್ತಿ- ವ್ಯಾಪಾರಿಗಳು ಕಂಗಾಲು

ವಿಜಯಪುರ: ಒಂದೆಡೆ ಕೊರೊನಾ ಮತ್ತೋಂದೆಡೆ ಲಾಕಡೌನ್ ನಿಂದಾಗಿ ಹಣ್ಣುಗಳ ರಾಜ ಮಾವನ್ನು ಕೇಳುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ವಿಜಯಪುರ ನಗರದ ಎಪಿಎಂಸಿಯಲ್ಲಿ ಭರಪೂರ ಮಾವು ಮಾರಾಟಕ್ಕೆ ಬಂದಿದೆ. ಆದರೆ, ಕೇಳುವವರೇ ಇಲ್ಲದಾಗಿದೆ. ಬೇಸಿಗೆ ಬಂತೆಂದರೆ ಸಾಕು ತರಹೇವಾರಿ ತಳಿಯ ಮಾವುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ‌ಆದರೆ, ಈ ಬಾರಿಯೂ ಕೊರೊನಾ ಮತ್ತು ಲಾಕಡೌನ್ ನಿಂದಾಗಿ ಹಣ್ಣುಗಳ ರಾಜ ಮಾವಿನ ಹಣ್ಣುಗಳನ್ನು ಖರೀದಿಸುವವರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಈಗ ಬೆಲೆ ಕುಸಿತದಿಂದಾಗಿ ಮಾವು ಬೆಳೆದ ಬೆಳೆಗಾರರು ಪರದಾಡುವಂತಾಗಿದೆ. ವಿಜಯಪುರ […]