ಮಲೇರಿಯಾ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ- ಅಪರ ಜಿಲ್ಲಾಧಿಕಾರಿ ರಮೇಶ ಕಳಸದ

ವಿಜಯಪುರ: ಡೆಂಗ್ಯೂ ಜ್ವರ ಮಲೇರಿಯಾ ಹಾಗೂ ಚಿಕುನ್‌ ಗುನ್ಯಾದಂಥ ಇತರ ಸಾಂಕ್ರಾಮಿಕ ರೋಗಗಳ ತಡೆಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಲೇರಿಯಾ, ಡೆಂಗ್ಯೂ ವಿರೋಧಿ ಮಾಸಾಚರಣೆ ಜಿಲ್ಲಾಮಟ್ಟದ ಅಂತರ ಇಲಾಖೆಗಳ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಡೆಂಗ್ಯೂ, ಮಲೇರಿಯಾ, ಚಿಕೂನ್ ಗುನ್ಯಾ ರೋಗಗಳು ಹರಡದಂತೆ ಅವಶ್ಯಕ ಮುಂಜಾಗ್ರತೆ ಕ್ರಮಗಳನ್ನುಕೈಕೊಳ್ಳುವುದು ತುರ್ತು ಅವಶ್ಯಕತೆಯಾಗಿದೆ ಎಂದು […]

ಶಾಸಕ ಎಂ. ಬಿ. ಪಾಟೀಲ ಅವರಿಂದ ಜು. 1 ರಿಂದ ಮೂರು ದಿನ ವಿಜಯಪುರದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ

ವಿಜಯಪುರ: ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಅವರು ಮೂರು ದಿನ ವಿಜಯಪುರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜುಲೈ 1, 2 ಮತ್ತು 3 ರಂದು ವಿಜಯಪುರದಲ್ಲಿ ವಾಸ್ತವ್ಯ ಇರಲಿರುವ ಮಾಜಿ ಸಚಿವರು ಈ ಮೂರು ದಿನ ಬೆ.11 ರಿಂದ ಮ. 2ರ ವರೆಗೆ ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ. ವಿಜಯಪುರ ನಗರದ ಬಿ ಎಲ್ ಡಿ ಇ ಸಂಸ್ಥೆ ಆವರಣದಲ್ಲಿರುವ ಶಾಸಕರ ಕಚೇರಿಯಲ್ಲಿ ಎಂ. ಬಿ. ಪಾಟೀಲ ಅವರು ಸಾವರ್ಜನಿಕರ ಕುಂದು ಕೊರತೆಗಳನ್ನು […]

ವೇಸ್ಟ್ ಪೇಪರ್ ಗಳಿಂದ ಬೆಸ್ಟ್ ಕೆಲಸ ಮಾಡಿದ ಬಾಲಕ

ವಿಜಯಪುರ: ಇದು ಕೊರೊನಾ ಲಾಕಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡ ಬಾಲಕನ ಸ್ಟೋರಿ. ಕೊರೊನಾ ಹಿನ್ನಲೆಯಲ್ಲಿ ಲಾಕ್‌ಡೌನ್‌ ಸಮಯದಲ್ಲಿ ಬಹುತೇಕ ಮಕ್ಕಳು ಮೊಬೈಲ್ ಗೇಮ್ಸ್, ಟಿವಿ, ಆನಲೈನ್ ಕ್ಲಾಸ್ ಗಳಲ್ಲಿ ಸಮಯ ಕಳೆದಿದ್ದೆ ಹೆಚ್ಚು. ಆದರೆ, ಬಸವ ನಾಡು ವಿಜಯಪುರದ ಈ ಬಾಲಕ ಇತರ ಮಕ್ಕಳಂತೆ ಕಾಲಹರಣ ಮಾಡದೇ ಎಲ್ಲರನ್ನು ಆಕರ್ಷಿಸುವಂಥ ಕೆಲಸ ಮಾಡಿದ್ದಾನೆ. ತನ್ನ ಮನೆಯಲ್ಲಿ ಬಿದ್ದ ವೇಸ್ಟ್‌ ಪೇಪರ್‌ ಗಳನ್ನ ಬಳಸಿದ ಈ ಬಾಲಕ ಅಸಲಿ ಹೂವುಗಳಂತೆ ಬಣ್ಣ ಬಣ್ಣದ ತರಹೇವಾರಿ ಫ್ಲಾವರ್ ಗಳನ್ನು ತಯಾರಿಸುವ […]