ಕೊರೊನಾದಿಂದ ಮೃತಪಟ್ಟ ಪಕ್ಷದ ಶಿಸ್ತಿನ ಸಿಪಾಯಿ, ಬಡ ಕಾರ್ಯಕರ್ತನ ಮನೆಗೆ ತೆರಳಿ ಲಕ್ಷ ರೂಪಾಯಿ ನೆರವು ನೀಡಿದ ಶಾಸಕ ಎಂ. ಬಿ. ಪಾಟೀಲ

ವಿಜಯಪುರ: ಆತ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಸಾಮಾನ್ಯ ಕಾರ್ಯಕರ್ತ. ಕಳೆದ ಹಲವಾರು ವರ್ಷಗಳಿಂದ ಕಚೇರಿಗೆ ಯಾರು ಬರಲಿ, ಬಿಡಲಿ. ಪ್ರತಿದಿನ ಬೆಳಿಗ್ಗೆ ತಪ್ಪದೆ ಬಂದು ಕಚೇರಿಯಲ್ಲಿ ಕಸಗೂಡಿಸಿ ಸ್ವಚ್ಛ ಮಾಡಿ ಮಧ್ಯಾಹ್ನ ಮನೆಗೆ ತೆರಳುತ್ತಿದ್ದ. ಅಷ್ಟೇ ಅಲ್ಲ, ಮಾಜಿ ಸಚಿವ ಎಂ. ಬಿ. ಪಾಟೀಲ ಅವರ ಅಪ್ಪಟ ಬೆಂಬಲಿಗನಾಗಿದ್ದ. ಜಿಲ್ಲೆ ಎಲ್ಲ ಕಾಂಗ್ರೆಸ್ ನಾಯಕರಿಗೂ ಚಿರಪರಿಚಿತನಾಗಿದ್ದ ವ್ಯಕ್ತಿ. ಆದರೆ, ಇತ್ತೀಚೆಗೆ ಕೊರೊನಾ ಸೋಂಕಿಗೆ ಬಲಿಯಾಗಿದ್ದ. ಆತನ ಹೆಸರು ದಾವಲಸಾಬ ಬಾಗವಾನ(59). ವಿಜಯಪುರ ನಗರದ ಜುಮ್ಮಾ ಮಸೀದಿ […]