ವಿಜಯಪುರದಲ್ಲಿ ಆರೋಗ್ಯ ಅಧಿಕಾರಿಗಳ ಸಂಘದ ರಾಜ್ಯ ಮಟ್ಟದ ಎರಡನೇ ಕಾರ್ಯಕಾರಿಣಿ ಸಭೆ

ವಿಜಯಪುರ: ಬಸವ ನಾಡು ವಿಜಯಪುರದಲ್ಲಿ ಅಖಿಲ ಕರ್ನಾಟಕ ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘದ ರಾಜ್ಯ ಮಟ್ಟದ 2ನೇ ಕಾರ್ಯಕಾರಿಣಿ ಸಭೆ ನಡೆಯಿತು.

ಸಂಘದ ರಾಜ್ಯ ಮತ್ತು ವಿಜಯಪುರ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಈ ಕಾರ್ಯಕಾರಿಣಿ ಸಭೆಯಲ್ಲಿ ಆರೋಗ್ಯ ಅಧಿಕಾರಿಗಳ ಪದನಾಮ ಸಂಭ್ರಮಾಚರಣೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷ ಬೀರೇಂದ್ರ ಕೇಶವ, ಉಪಾಧ್ಯಕ್ಷ ಸಹದೇವ ಮತ್ತು ಮಮಿತ ಗಾಯಕವಾಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಚೆನ್ನಪ್ಪ ನಾಯಕ ಬಣಕರ, ರಾಜ್ಯ ಮಾಧ್ಯಮ ಕಾರ್ಯದರ್ಶಿ ಶಶಿಧರ ಸ್ವಾಮಿ ಹುಲಿಕಂತಿಮಠ ಹಾಗೂ ರಾಜ್ಯ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ವಿಯಪುರ ಜಿಲ್ಲೆಯ ಅಧ್ಯಕ್ಷ ಸಂತೋಷ ದಶವಂತ, ಉಪಾಧ್ಯಕ್ಷ ಗುರುರಾಜ ಅಥರ್ಗಾ, ಕಾರ್ಯದರ್ಶಿ ಪರಮಾನಂದ ಹಚ್ಚಡದ, ಖಜಾಂಚಿ ಶರಣಬಸು ಗುದ್ದಿ, ರಾಜ್ಯ ಕಾರ್ಯದರ್ಶಿ ಶ್ರೀಕಾಂತ ಪಾಟೀಲ ಸೇರಿದಂತೆ ನಾನಾ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌