ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ವರ್ಗಾವಣೆ, ಎಚ್. ಡಿ. ಆನಂದ ಕುಮಾರ ನೂತನ ಎಸ್ಪಿ

ವಿಜಯಪುರ: ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಕಳೆದ ಒಂದೂವರೆ ವರ್ಷದಿಂದ ಎಸ್ಪಿಯಾಗಿದ್ದ ಅನುಪಮ ಅಗ್ರವಾಲ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರು.

ಅನುಪಮ ಅಗ್ರವಾಲ ಅವರ ಜಾಗಕ್ಕೆ ಆಂತರಿಕ ಭದ್ರತೆ ವಿಭಾಗದ ಎಸ್ಪಿಯಾಗಿರುವ ಎಚ್. ಡಿ. ಆನಂದ ಕುಮಾರ ಅವರನ್ನು ವಿಜಯಪುರದ ನೂತನ ಎಸ್ಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ವಿಜಯಪುರದಿಂದ ವರ್ಗಾವಣೆ ಮಾಡಿರುವ ಅನುಪಮ ಅಗರವಾಲ ಅವರಿಗೆ ಯಾವುದೇ ಜಾಗವನ್ನು ತೋರಿಸಲಾಗಿಲ್ಲ. ಈ ಇಬ್ಬರೂ ಐಪಿಎಸ್ ಆಧಿಕಾರಿಗಳನ್ನು ವರ್ಗಾವಣೆ ಮಾಡಿ ಸರಕಾರದ ಅಧೀನ ಕಾರ್ಯದರ್ಶಿ ನಾಗಪ್ಪ ಎಸ್. ಪರೀಟ ಆದೇಶ ಹೊರಡಿಸಿದ್ದಾರೆ.

Leave a Reply

ಹೊಸ ಪೋಸ್ಟ್‌