ಸಚಿವ ನಿರಾಣಿ ಸಿಎಂ ಖುರ್ಚಿಗಾಗಿ ಬಹಳ ದೊಡ್ಡ ಲಾಬಿ ಮಾಡುತ್ತಿದ್ದಾರೆ- ಯತ್ನಾಳ ಆರೋಪ

ವಿಜಯಪುರ: ಸಿಎಂ ಖುರ್ಚಿಗಾಗಿ ನಿರಾಣಿ ಬಹಳ ದೊಡ್ಡ ಲಾಭಿ ಮಾಡುತ್ತಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರ ಆರೋಪ ಮಾಡಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ನಿರಾಣಿ ಬಳಿ ಸಿಕ್ಕಾಪಟ್ಟೆ ಹಣವಿದೆ. ಎಲ್ಲರನ್ನೂ ಖರೀದಿ ಮಾಡುತ್ತೇನೆ. ಎಲ್ಲರಿಗೂ ಏನು ಬೇಕಾದರೂ ಕೊಡುತ್ತೇನೆ ಎನ್ನುತ್ತಾರೆ. ಯುವರಾಜ ಎಂವ ವ್ಯಕ್ತಿ ಈಗಾ ಜೈಲಲ್ಲಿದ್ದಾನೆ. ಅದೇ ಯುವರಾಜನ ಮೂಲಕ ಅನೇಕ ಸಿನೆಮಾ ತಾರೆಯರನ್ನು ದೆಹಲಿಗೆ ಕರೆದುಕೊಂಡು ಹೋಗಿದ್ದರು. ಜಿಲ್ಲೆಯಲ್ಲಿ ಓರ್ವಳು ಮಹಿಳೆ ಇದ್ದಳು. ಆಕೆ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದರು. ಆಕೆ ಕೊಲೆಯಾಗಿ ಹೋಗಿದ್ದಾಳೆ. ಅವಳ ಜೊತೆಗೆ ನಿರಾಣಿ ಗಂಟೆಗಟ್ಟಲೆ ಮಾತನಾಡುತ್ತಿದ್ದರು. ಅವರ ಮೊಬೈಲ್ ಕಾಲ್ ಡಿಟೇಲ್ಸ್ ಕುರಿತು ತನಿಖೆಯಾದರೆ ಸತ್ಯ ಗೊತ್ತಾಗುತ್ತದೆ ಎಂದು ಯತ್ನಾಳ ಗಂಭೀರ ಆರೋಪ ಮಾಡಿದರು.

ಆಲಂ ಪಾಷಾ ಮಾಡಿರುವ ಆರೋಪ ಕುರಿತು ತನಿಖೆಯಾಗಬೇಕು. ತನಿಖೆ ಮೂಲಕ ನಿರಾಣಿ ಪ್ರಾಮಾಣಿಕ, ಕ್ರಿಯಾಶೀಲ, ಪಂಚಮಸಾಲಿ ಅಜಾತಶತ್ರು ನಾಯಕ ಎಂಬುದರ ಸತ್ಯ ಗೊತ್ತಾಗಲಿ. ಸದ್ಯದ ರಾಜಕಾರಣ ಕಲುಷಿತವಾಗಿದೆ. ಈ ಹಿಂದೆ ಸಿಡಿ ಕೋಟಾ ಎಂದು ಹೇಳಿದ್ದೆ ಸಿಡಿ ಇರೋದು ಸತ್ಯವಿದೆ. ಇಂಥ ಸಿಡಿಗಳನ್ನು ಅನೇಕ ಮಠಾದೀಶರು ನೋಡುವಾಗ ಕಣ್ಣು ಮುಚ್ಚಿಕೊಂಡಿದ್ದಾರೆ. ಅನೇಕ ಮಠಾಧೀಶರು ಸಂತೋಷದಿಂದ ನೋಡಿದ್ದಾರೆ. ಅಂಥವರು ಈಗ ಸಿಎಂ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಯತ್ನಾಳ ಆರೋಪಿಸಿದರು.

Leave a Reply

ಹೊಸ ಪೋಸ್ಟ್‌