ಬಿಜೆಪಿ ಟ್ವೀಟ್ ಗೆ ಪ್ರತಿಯಾಗಿ ಖಾರವಾಗಿ ಟ್ವೀಟ್ ಮಾಡಿದ ಎಂ. ಬಿ. ಪಾಟೀಲ ಹೇಳಿದ್ದೇನು ಗೊತ್ತಾ?

ವಿಜಯಪುರ: ಬಿಜೆಪಿ ಕರ್ನಾಟಕ ತಮ್ಮ ವಿರುದ್ಧ ಮಾಡಿರುವ ಟ್ವೀಟ್ ಗೆ ಪ್ರತಿಯಾಗಿ ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಖಾರವಾಗಿ ಟ್ವೀಟ್ ಮಾಡುವ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.

ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ್ದ ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ವಿರುದ್ಧ ಬಿಜೆಪಿ ಕರ್ನಾಟಕ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿತ್ತು.

ಬಿಜೆಪಿ ಕರ್ನಾಟಕ ಮಾಡಿರುವ ಟ್ವೀಟ್

ಎಂ. ಬಿ. ಪಾಟೀಲ ಮತ್ತು ಅವರ ಗುರು ಶ್ರೀ ಸಿದ್ಧರಾಮಯ್ಯ ವೀರಶೈವ ಮತ್ತು ಲಿಂಗಾಯಿತರನ್ನು ಒಡೆಯಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ.

ಇಂದು ಎಂ. ಬಿ. ಪಾಟೀಲ ಅವರು, ಲಿಂಗಾಯಿತ ನಾಯಕರಾಗಿ ಹೊರ ಹೊಮ್ಮಲು ಲಿಂಗಾಯಿತರ ಬಗ್ಗೆ ತೋರಿಕೆಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಇವರ ಮಾತನ್ನು ನಂಬಲು ಜನತೆ ರಾಹುಲ್ ಅವರ ಸ್ವರ್ಗದಲ್ಲಿಲ್ಲ ಎಂದು ಟೀಕೆ ಮಾಡಿತ್ತು.

ಬಿಜೆಪಿ ಟೀಕೆಗೆ ಎಂ. ಬಿ. ಪಾಟೀಲ ಕೂಡ ಖಾರವಾಗಿ ಟ್ವೀಟ್ ಮೂಲಕವೇ ಪ್ರತಿಕ್ರಿಯೆ ನೀಡಿದ್ದಾರೆ.

ಮೊನ್ನೆ ಫೋನಿನಲ್ಲಿ ಓರ್ವ ಮೀರ ಸಾಧಕರು ಹೊಟ್ಟೆ ಉರಿದು ಮಾತಾಡಿ ಆಡಿಯೋ ಲೀಕ್ ಮಾಡಿಸಿ ಗೊಂದಲ ಸೃಷ್ಠಿಸಿದರು.

ಅದೇ ಮೀರ ಸಾಧಕರು ಈಗ ಕೆಳಮಟ್ಟದ ಟ್ವೀಟ್ ಮಾಡಿಸುತ್ತಿದ್ದಾರಾ?

ನಾನು ನನ್ನ ಹೇಳಿಕೆಗೆ ಬದ್ಧನಿದ್ದೇನೆ. ಸಮಸ್ತ VL ಸಮಾಜ ಮತ್ತು ಯಡಿಯೂರಪ್ಪ ಅವರ ಶ್ರಮದ ವಾಸ್ತವವನ್ನು ತಿಳಿದಿರುವ ಸಾಮಾನ್ಯ ಜನತೆ ನನ್ನ ಮಾತಿಗೆ ಬೆಂಬಲ ನೀಡಿದ್ದಾರೆ.

ಎಂದು ಟ್ವೀಟ್ ಮಾಡುವ ಮೂಲಕ ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಕಾಲೆಳೆಯಲು ಪ್ರಯತ್ನಿಸುತ್ತಿರುವ ಮುಖಂಡರ ವಿರುದ್ಧ ಹೆಸರು ಹೇಳದೇ ಚಾಟಿ ಬೀಸಿದ್ದಾರೆ.

Leave a Reply

ಹೊಸ ಪೋಸ್ಟ್‌