ಸಿಎಂ ಯಡಿಯೂರಪ್ಪ ಪರ 1000ಕ್ಕೂ ಹೆಚ್ಚು ಸ್ವಾಮೀಜಿಗಳು ಬೆಂಬಲಿಕ್ಕಿದ್ದಾರೆ- ಮುಖ್ಯಮಂತ್ರಿ ಬದಲಾವಣೆ ಬೇಡ ಎಂದ ಬಸವ ನಾಡು ಮನಗೂಳಿ ಅಭಿನವ ಸಂಗನ ಬಸವ ಶಿವಾಚಾರ್ಯ ಸ್ವಾಮೀಜಿ

ವಿಜಯಪುರ: ರಾಜ್ಯದ 1000 ಕ್ಕೂ ಹೆಚ್ಚು ಜನ ನಾನಾ ಸ್ವಾಮೀಜಿಗಳು ಸಿಎಂ ಬಿ. ಎಸ್. ಯಡಿಯೂರಪ್ಪ ಪರ ಬೆಂಬಲಕ್ಕಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಮಾಡಬಾರದು. ಒಳ್ಳೆಯ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಪೂರ್ಣಾವಧಿಗೆ ಮುಂದುವರೆಸಬೇಕು ಎಂದು ಬಸವ ನಾಡು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಹಿರೇಮಠದ ಶ್ರೀ ಅಭಿನವ ಸಂಗನ ಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಮನಗೂಳಿಯಲ್ಲಿ ಮಾತನಾಡಿದ ಅವರು, ಒಳ್ಳೆಯ ಕೆಲಸ ಮಾಡುತ್ತಿರುವ ಬಿ ಎಸ್ ವೈ ಅವರನ್ನೇ ಮುಂದುವರೆಸಬೇಕು. ಯಡಿಯೂರಪ್ಪ ಅವರು ಕೊರೊನಾ, ಪ್ರವಾಹ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಬಡವರಿ ಸಂಕಷ್ಟಗಳಿಗೆ ಮಿಡಿದಿದ್ದಾರೆ. ಮುಂದಿನ ಪೂರ್ಣಾವಧಿಗೂ ಅವರನ್ನೇ ಸಿಎಂ ಆಗಿ ಮುಂದುವರೆಸಬೇಕು ಎಂದು ಆಗ್ರಹಿಸಿದ್ದಾರೆ.

ಯಡಿಯೂರಪ್ಪ ಅವರು ಮಾಡಬೇಕಿರುವ ಕೆಲಸಗಳು ಪೂರ್ಣವಾಗಿಲ್ಲ. ಹೀಗಾಗಿ ಆ ಕೆಲಸಗಳು ಮುಗಿಯುವವರೆಗೂ ಅವರಿಗೆ ನೆಮ್ಮದಿಯಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೇ ಪೂರ್ಣ ಅವಕಾಶ ಕೊಡಬೇಕು. ವೀರಶೈವ ಲಿಂಗಾಯತ ನಾಯಕರಾಗಿರುವ ಅವರನ್ನು ಬಿಜೆಪಿ ಹೈಕಮಾಂಡ್ ಬದಲಾಯಿಸಬಾರದು. ಸಿಎಂ ಬಿ ಎಸ್ ವೈ ಗೆ 700 ರಿಂದ 1000 ಮಠಾಧೀಶರು ಬೆಂಬಲವಾಗಿದ್ದಾರೆ ಎಂದು ಅಭಿನವ ಸಂಗನ ಬಸವ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌