ಬೆ. 11 ರಿಂದ 11.30ರೊಳಗೆ ರಾಜಭವನದಿಂದ ಪಟ್ಟಿ ಪ್ರಕಟ- ಮ. 2.15ಕ್ಕೆ ನೂತನ ಸಚಿವ ಸಂಪುಟ ರಚನೆ- ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಮಯ ನಿಗದಿಯಾಗಿದ್ದರೂ ನೂತನ ಸಚಿವರ ಪಟ್ಟಿ ಮಾತ್ರ ಬೆ. 11 ರಿಂದ 11.30 ರೊಳಗೆ ನೂತನ ಸಚಿವ ಪಟ್ಟಿ ರಾಜಭವನದಿಂದಲೇ ಪ್ರಕಟವಾಗಲಿದೆ.

ದೆಹಲಿಯಿಂದ ಬೆಂಗಳೂರಿಗೆ ಬಂದಿಳಿದ ಸಿಎಂ ಬಸವರಾಜ ಬೊಮ್ಮಾಯಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಎರಡು ದಿನ ದೆಹಲಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತು ಬಿಜೆಪಿ ಹೈಕಮಾಂಡ್ ಜೊತೆ ಚರ್ಚೆ ನಡೆಸಿದ್ದೇನೆ. ಇಂದು ಬೆ. 11 ರಿಂದ 11.30 ರೊಳಗೆ ನೂತನ ಸಚಿವರ ಪಟ್ಟಿ ರಾಜ ಭವನದಿಂದಲೇ ಅಧಿಕೃತವಾಗಿ ಪ್ರಕಟವಾಗಲಿದೆ ಎಂದು ತಿಳಿಸಿದರು

ಅಲ್ಲದೇ, ಇಂದು ಮ. 2.15ಕ್ಕೆ ರಾಜ ಭವನದಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಇದನ್ನು ಬಿಟ್ಟು ಬೇರೆ ವಿಚಾರವನ್ನು ಮಾತನಾಡುವುದಿಲ್ಲ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

 

Leave a Reply

ಹೊಸ ಪೋಸ್ಟ್‌