ಬಸವ ನಾಡಿನಲ್ಲಿ ಸಹೋದರ-ಸಹೋದರಿಯರ ಸಂಬಂಧ ಬೆಸೆಯುವ ರಕ್ಷಾ ಬಂಧನ ಆಚರಣೆ

ವಿಜಯಪುರ- ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ನೂಲ ಹುಣ್ಣಿಮೆ ಅಂದರೆ ರಕ್ಷಾ ಬಂಧನ ಹಬ್ಬವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಣ್ಣ-ತಂಗಿ, ಅಕ್ಕ-ತಮ್ಮಂದಿರ ಬಾಂಧವ್ಯವನ್ನು ಬೆಸೆಯುವ ಹಬ್ಬ ಇದಾಗಿದ್ದು, ಎಲ್ಲ ಮನೆಗಳಲ್ಲಿ ಸಂಭ್ರಮ ಮನೆ ಮಾಡಿದೆ. ಬೆಳಿಗ್ಗೆ ಎದ್ದು ಹೊಸ ಬಟ್ಟೆ ತೊಟ್ಟ ಬಾಲಕಿಯರು, ಯುವತಿಯರು ಮತ್ತು ವನಿತೆಯರು ತಮ್ಮ ಅಣ್ಣಂದಿರು ಮತ್ತು ತಮ್ಮಂದಿರ ಕೈಗಳಿಗೆ ರಾಖಿಯನ್ನು ಕಟ್ಟಿ ಸಂಭ್ರಮಿಸಿದರು. ಬಾಲಕರು, ಯುವಕರು, ಪುರುಷರೂ ಕೂಡ ಹೊಸ ಬಟ್ಟೆ ಧರಿಸಿದ್ದರು. ಅಲ್ಲದೇ, ತಮ್ಮ ತಂಗಿ ಮತ್ತು ಅಕ್ಕಂದಿರಿಂದ […]

ಆಲಮಟ್ಟಿ ಜಲಾಷಯದ ಎತ್ತರ ಹೆಚ್ಚಳ, ಸಂತ್ರಸ್ತರ ಪುನರ್ವಸತಿ, ಪುನರ್ ನಿರ್ನಾಣಕ್ಕೆ ಸರಕಾರ ಮುಂದಾಗಲಿ- ಎಂ. ಬಿ. ಪಾಟೀಲ

ವಿಜಯಪುರ: ಆಲಮಟ್ಟಿ ಜಲಾಷಯದ ಎತ್ತರ ಹೆಚ್ಚಳ ಮತ್ತು ಇದರಿಂದ ಸಂತ್ರಸ್ತರಾಗುವ ಜನರಿಗೆ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಸೌಲಭ್ಯಗಳನ್ನು ಒದಗಿಸಲು ಸರಕಾರ ಕೂಡಲೇ ಮುಂದಾಗಬೇಕು ಎಂದು ಮಾಜಿ ಸಚಿವ, ಶಾಸಕ ಎಂ. ಬಿ. ಪಾಟೀಲ ಆಗ್ರಹಿಸಿದ್ದಾರೆ‌. ವಿಜಯಪುರ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ತಿಡಗುಂದಿ ಅಕ್ವಾಡೆಕ್ಟ್ ಮೂಲಕ ತುಂಬಿದ ಕೆರೆಗೆ ಬಾಗೀನ ಅರ್ಪಿಸಿ, ಗ್ರಾಮಸ್ಥರನ್ನು ಉದ್ದೇಶಿಸಿ ಅವರು ಮಾತನಾಡಿದರು. 2013ರಲ್ಲಿ ತಾವು ಸಚಿವನಾದಾಗ ಗೆಜೆಟ್ ಅಧಿಸೂಚನೆಗೆ ಕಾಯದೇ ಮುಂಚಿತವಾಗಿಯೇ ನೀರಾವರಿ ಯೋಜನೆಗಳ ಹೆಡ್‍ವರ್ಕ್ಸ್ ಕಾಲುವೆ ನೆಟವರ್ಕ್, ವಿದ್ಯುತ್ ಸ್ಥಾವರ ಸೇರಿದಂತೆ […]

ನೆಹರು, ನಕಲಿ ಗಾಂಧಿ ಮನೆತನದಿಂದ ದೇಶ ನರಳುತ್ತಿದೆ- ಜ್ಯಾತ್ಯತೀತ ಎಂಬುದು ನಮ್ಮ ದೇಶದಲ್ಲಿ ಕೆಟ್ಟ- ಬುದ್ದಿಜೀವಿಗಳು, ಸಿನೇಮಾ ನಟರ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಯತ್ನಾಳ

ವಿಜಯಪುರ: ಬುದ್ದಿ ಜೀವಿಗಳು, ನೆಹರು, ರಾಹುಲ್ ಗಾಂಧಿ, ಸ್ವಾಮೀಜಿಗಳು ಮತ್ತು ಸಿನೇಮಾ ನಟರಾದ ಖಾನ್ ತ್ರಯರ ವಿರುದ್ಧ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಅಫ್ಘಾನಿಸ್ತಾನ ವಿಚಾರದಲ್ಲಿ ಮೌನ ವಹಿಸಿರುವ ಬುದ್ದಿಜೀವಿಗಳು, ಚಿತ್ರನಟರಾದ ಅಮಿರಖಾನ, ಶಾರುಕಖಾನ, ಸಲ್ಮಾನಖಾನ್, ರಾಹುಲ್ ಗಾಂಧಿ ಮತ್ತು ಸ್ವಾಮೀಜಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಅಪ್ಘಾನಿಸ್ತಾನ್ ವಿಚಾರದಲ್ಲಿ ಮಾತನಾಡದ ಬುದ್ಧಿ ಜೀವಿಗಳು ಬುದ್ಧಿ ಜೀವಿಗಳು ತಾಲಿಬಾನ್‌ಗೆ ಹುಟ್ಟಿದ್ದಾರೆ. ಬುದ್ಧಿ ಜೀವಿಗಳು ಲದ್ದಿ ತಿಂದಿದ್ದಾರೆ. ಬುದ್ಧಿ […]

ಆಯುಷ್ ಆಸ್ಪತ್ರೆ ವೈದ್ಯರ ಆರೈಕೆ- 2 ತಿಂಗಳ ಬಳಿಕ ಕೊರೊನಾದಿಂದ ಗುಣಮುಖರಾದ ಮಹಾರಾಷ್ಟ್ರದ ವ್ಯಕ್ತಿ- ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ ರೋಗಿಯ ಸಂಬಂಧಿಕರು

ವಿಜಯಪುರ: ಒಂದು ತಿಂಗಳುಗಳ ಕಾಲ ವೆಂಟಿಲೇಟ್ ಮೇಲೆ ಚಿಕಿತ್ಸೆ ಸೇರಿದಂತೆ ಸತತ ಎರಡು ತಿಂಗಳ ಚಿಕಿತ್ಸೆಯ ಬಳಿಕ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಗುಣಮುಖರಾಗಿ ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ವಿಜಯಪುರ ನಗರದ ಪ್ರತಿಷ್ಠಿತ ಆಯುಷ್ ಆಸ್ಪತ್ರೆಯ ವೈದ್ಯ ಡಾ. ನಿತೀನ ಅಗರವಾಲ ಉಸ್ತುವಾರಿಯಲ್ಲಿ ವೈದ್ಯರಾದ ಡಾ. ಸೀಮಾ, ಡಾ. ರಶ್ಮಿ ಬಿರಾದಾರ, ಡಾ. ಆರತಿ, ಸುನೀಲ ದೇವೂರ ಮತ್ತು ಸಿಬ್ಬಂದಿ ನೀಡಿದ ಚಿಕಿತ್ಸೆಯಿಂದಾಗಿ ಈ ವ್ಯಕ್ತಿ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ತಿಕ್ಕುಂಡಿ ಗ್ರಾಮದ […]

ಗಣೇಶೋತ್ಸವಕ್ಕಾಗಿ ಗುಂಡೇಟು ತಿನ್ನಲೂ ಸಿದ್ಧ- ಕೊರೊನಾ ಹೆಸರಲ್ಲಿ ನಿರ್ಬಂಧಿಗೆ ಹೆದರಲ್ಲ- ಯತ್ನಾಳ

ವಿಜಯಪುರ: ಗಣೇಶೋತ್ಸವಕ್ಜಾಗಿ ಗುಂಡೇಟು ತಿನ್ನಲೂ ಸಿದ್ಧ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಕೊರೊನಾ ಹೆಸರಿನಲ್ಲಿ ನಿರ್ಬಂಧ ಹೇರಬೇಡಿ ಎಂದು ಆಲಮಟ್ಟಿಯಲ್ಲಿ ಮುಖ್ಯಮಂತ್ರಿಗಳಿಗೂ ಹೇಳಿದ್ದೇನೆ ಎಂದು ತಿಳಿಸಿದರು. ಕೊರೊನಾ ಲಸಿಕೆ ಹಾಕುವುದರಲ್ಲಿ ವಿಜಯಪುರ ನಗರ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಕೊರೊನಾ 3ನೇ ಅಲೆ ನಮ್ಮ ಮೇಲೆ ಹೆಚ್ಚಿಗೆ ಪರಿಣಾಮ ಬೀರುವುದಿಲ್ಲ. ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಆದರೂ, ಇಲ್ಲಿ ಶನಿವಾರ ಮತ್ತು […]