ಸಾರ್ವಜನಿಕ ಗಣೇಶೋತ್ಸವಕ್ಕೆ ವೈಯಕ್ತಿಕ ದೇಣಿಗೆ ಘೋಷಣೆ ಮಾಡಿದ ಶಾಸಕ ಯತ್ನಾಳ

ವಿಜಯಪುರ: ವಿಜಯಪುರ ನಗರದಲ್ಲಿ ಸಾರ್ವಜನಿಕ ಗಣಪತಿ ಪ್ರತಿಷ್ಟಾಪಿಸುವವರಿಗೆ ವೈಯುಕ್ತಿಕ ಹಣ ನೀಡುವುದಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಘೋಷಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಯತ್ಬಾಳ, ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಟಾಪಿಸಿದರೆ ರೂ. 5000 ಬೇರೆ ಬೇರೆ ಗಣೇಶ ಪೂರ್ತಿ ಪ್ರತಿಷ್ಟಾಪನೆ ಮಾಡಿದರೆ ರೂ. 2500 ವೈಯಕ್ತಿಕ ದೇಣಿಗೆ ನೀಡುವುದಾಗಿ ಯತ್ನಾಳ ತಮ್ಮ ಆಪ್ತ ಸಹಾಯಕರ ಮೂಲಕ ಪ್ರಕಟನೆ ಹೊರಡಿಸಿದ್ದಾರೆ.

ಇದಕ್ಕಾಗಿಯೇ ವಿಜಯಪುರ ನಗರದ
ಶ್ರೀ ಸಿದ್ದೇಶ್ವರ ಸಂಸ್ಥೆಯಲ್ಲಿ ತೆರೆಯಲಾದ ಕೌಂಟರ್ ನಲ್ಲಿ ಮನವಿ ಸಲ್ಲಿಸಿ ಹಣ ಪಡೆಯಲು ಸೂಚನೆ ನೀಡಿದ್ದಾರೆ ಸಾರ್ವಜನಿಕ ಗಣಪತಿ ಇಡಲು ಪೊಲೀಸರ ಪರವಾನಗಿ, ಹೆಸ್ಕಾಂ ಪರವಾನಗಿ ಸೇರಿದಂತೆ ಇತರೆ ಇಲಾಖೆಗಳ ಅನುಮತಿ ಸುರಳಿತವಾಗಿ ಸಿಗುವಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಇದೇ ವಿಚಾರವಾಗಿ ಸಿಎಂ ಜೊತೆಗೆ ಮಾತನಾಡಲಾಗಿದೆ. ಯಾರೂ ವಿಚಲಿತರಾಗದೇ ಶಾಂತಿಯುತ ಹಾಗೂ ಸಾಮಾಜಿಕ ಅಂತರದ ಮೂಲಕ ಗಣೇಶೋತ್ಸವ ಆಚರಣೆ ಮಾಡಬೇಕು ಎಂದು ಯತ್ನಾಳ ಮಾಡಿರುವ ಕುರಿತು ಯತ್ನಾಳ ಅವರ ಆಪ್ತ ಸಹಾಯಕರ ಮೂಲಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌