ಬಸವ ನಾಡಿನಲ್ಲಿ ನಡೆಯಿತು ಕೃಷ್ಣ-ರಾಧೆಯರ ಫ್ಯಾನ್ಸಿ ಡ್ರೆಸ್ ಸ್ಪರ್ಧೆ- ಗಮನ ಸೆಳೆದ ಪುಟಾಣಿಗಳು

ವಿಜಯಪುರ: ಇಂದು ಗೋಕುಲಾಷ್ಠಮಿ. ಕೃಷ್ಣಜನ್ಮಾಷ್ಠಮಿ ಹಿನ್ನೆಲೆಯಲ್ಲಿ ಬಸವ ನಾಡು ವಿಜಯಪುರದಲ್ಲಿ ಮಕ್ಕಳಿಗಾಗಿ ಕೃಷ್ಣ-ರಾಧೆಯರ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಆಯೋಜಿಸಲಾಗಿತ್ತು.

ಲಯನ್ಸ್ ಕ್ಲಬ್ ಆಫ್ ಬಿಜಾಪುರ ವತಿಯಿಂದ ವಿಜಯಪುರ ನಗರದ ಅಪ್ಸರಾ ಚಿತ್ರಮಂದಿರದಲ್ಲಿ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ ಈ ಸ್ಪರ್ಧೆಯಲ್ಲಿ ಪುಟಾಣಿ ಮಕ್ಕಳು ಕೃಷ್ಣ-ರಾಧೆಯರ ವೇಷ ಧರಿಸಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು.

ವಿಜಯಪುರದಲ್ಲಿ ನಡೆದ ಕೃಷ್ಣ-ರಾಧೆಯರ ಫ್ಯಾನ್ಸಿಡ್ರ್ಸೆಸ್ ಸ್ಪರ್ಧೆಯಲ್ಲಿ ಪಾಲ್ಗೋಂಡ ಬಾಲಕ.

3 ರಿಂದ 13 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರು ಈ ಮುಕ್ತ ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಂಡರು. ವಿಜಯಪುರ ನಗರದ ಶ್ರೀಕೃಷ್ಣನ ಭಕ್ತರು ಶ್ರದ್ಧಾಭಕ್ತಿಯಿಂದ ಮತ್ತು ವೈಭವದಿಂದ ಈ ಕಾರ್ಯಕ್ರಮ ಆಚರಿಸಿದರು.

ಈ ಸ್ಪರ್ಧೆಯಲ್ಲಿ ಪುಟ್ಟ ಮಕ್ಕಳಿಗೆ ರಾಧಾಕೃಷ್ಣ ವೇಷ ಭೂಷಣ ತೊಡಿಸಿದ್ದ ಪೋಷಕರು ಕೃಷ್ಣನ ಬಾಲಲೀಲೆಗಳನ್ನು ನೆನಪಿಸುವಂತೆ ಮಾಡಿದರು. ಪುಟ್ಟ ಮಕ್ಕಳು ಕಳ್ಳ ಕೃಷ್ಣ, ಮುದ್ದು ಕೃಷ್ಣ, ಬೆಣ್ಣೆ ಕೃಷ್ಣ ಮತ್ತು ಕೊಳಲುವಾದಕ ಕೃಷ್ಣ ರೂಪದಲ್ಲಿ ವೇಷಬೂಷಣ ಧರಿಸಿ ನೆರೆದ ಜನಮನ ಸೂರೆಗೊಂಡರು.

ವಿಜಯಪುರದಲ್ಲಿ ನಡೆದ ಕೃಷ್ಣ-ರಾಧೆಯರ ಫ್ಯಾನ್ಸಿಡ್ರ್ಸೆಸ್ ಸ್ಪರ್ಧೆಯಲ್ಲಿ ಪಾಲ್ಗೋಂಡ ಬಾಲಕ.

ಮುಸ್ಲಿಂ ಕುಟುಂಬದವರೊಬ್ಬರು ತಮ್ಮ ಮಗಳಿಗೆ ಶ್ರೀಕೃಷ್ಣನ ವೇಷದಲ್ಲಿ ಕರೆತಂದರು. ಆಗ ಅಲ್ಲಿ ನೆರೆದಿದ್ದ ಎಲ್ಲರೂ ಪ್ರೋತ್ಸಾಹಿಸಿ ಗೌರವಿಸಿದರು. ಲಂಡನ್ ನಿಂದ ಬಂದ ಬಾಲಕನೋರ್ವ ಕೂಡ ಶ್ರೀಕೃಷ್ಣನ ವೇಷದಲ್ಲಿ ಕಂಗೊಳಿಸಿದ.

ವಿಜಯಪುರದಲ್ಲಿ ನಡೆದ ಕೃಷ್ಣ-ರಾಧೆಯರ ಫ್ಯಾನ್ಸಿಡ್ರ್ಸೆಸ್ ಸ್ಪರ್ಧೆಯಲ್ಲಿ ಪಾಲ್ಗೋಂಡ ಬಾಲಕ.

ಈ ಸ್ಪರ್ಧೆಯ ನಿರ್ಣಾಯಕರಾಗಿ ಬಾಬುರಾಜೇಂದ್ರ ನಾಯಕ, ಶಶಿಕಲಾ ಇಜೇರಿ ಮತ್ತು ಶ್ರವಣಕುಮಾರ ಮಹೀಂದ್ರಕರ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಹಲವಾರು ಪುಟಾಣಿಗಳು ಕೃಷ್ಣ ಮತ್ತು ರಾಧೆಯರ ವೇಷ ದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಈ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

Leave a Reply

ಹೊಸ ಪೋಸ್ಟ್‌