ಗಣೇಶೋತ್ಸವಕ್ಕೆ ಸರಕಾರದ ಅನುಮತಿ ವಿಷಯದಲ್ಲಿ ಕ್ರೆಡಿಟ್ ಬೇಡ- ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ

ವಿಜಯಪುರ: ಗಣೇಶೋತ್ಸವಕ್ಕೆ ಅನುಮತಿ ಮತ್ತು ಈ ಸಂಬಂಧ ಶಾಸಕ‌ ಯತ್ನಾಳ ನೀಡಿರುವ ಹೇಳಿಕೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಟಾಂಗ್ ನೀಡಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶೊತ್ಸವಕ್ಕೆ ಷರತ್ತುಬದ್ಧ ಅನುಮತಿ ನೀಡುವಂತೆ ವಿಜಯಪುರ ಗಣೇಶ ಮಹಾಮಂಡಳ ಜಿಲ್ಲಾಧಿಕಾರಿ ಮತ್ತು ಮುಖ್ಯಮಂತ್ರಿಗಳಿಗೆ ಮೊದಲು ಮನವಿ ಮಾಡಿದೆ. ತಮ್ಮ ಪರಿಶ್ರಮಕ್ಕೆ ಪ್ರತಿಫಲದಿಂದಾಗಿ
ಸರಕಾರದಿಂದ ಮಾರ್ಗಸೂಚಿ ಸಡಿಲಿಕೆ ಮಾಡಿದೆ. ಆದರೆ, ಈ ವಿಷಯದಲ್ಲಿ ಕೆಲವರು ರಾಜಕೀಯ ದುರುದ್ದೇಶದಿಂದ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ‌ ಯತ್ನಾಳ ಅವರ ಹೆಸರು ಹೇಳದೆ ಟಾಂಗ್ ನೀಡಿದರು.

 

ಗಣೇಶೋತ್ಸವದಲ್ಲಿ ಕ್ರೆಡಿಟ್ ರಾಜಕಾರಣ ಬೇಡ

ಕಳೆದ ಆರು ತಿಂಗಳಿಂದ ವಿಜಯಪುರ ಗಣೇಶ ಮಹಾಮಂಡಳ ಗಣೇಶೋತ್ಸವ ಈ ಬಾರಿ ಗಣೇಶೋತ್ಸವ ಆಚರಣೆಗೆ ಸಿದ್ಧತೆ ನಡೆಸಿತ್ತು. ಈ ಆಚರಣೆಗೆ ನಿರ್ಬಂಧ ವಿಧಿಸದಂತೆ ಸರಕಾರದ ಮೇಲೆ ಒತ್ತಡ ಹೇರಿತ್ತು. ಅದ ಫಲವಾಗಿ ಸರಕಾರ ಈಗ ಷರತ್ತುಬದ್ಧ ಅನುಮತಿ ನೀಡಿದೆ. ನಾವು ಮಾಡಿದ ಪ್ರಯತ್ನದಿಂದಾಗಿ ರಾಜ್ಯಾದ್ಯಂತ ಗಣೇಶೋತ್ಸವಕ್ಕೆ ಅವಕಾಶ ಸಿಕ್ಕಿದೆ. ಆದರೆ, ಇದನ್ನೇ ಕೆಲವರು ಕ್ರೆಡಿಟ್ ತೆಗೆದುಕೊಳ್ಳುತ್ತಿರುವುದು ಇದು ಸರಿಯಲ್ಲ ಎಂದು ಯತ್ನಾಳ ಹೆಸರು ಹೇಳದೆ ಟೀಕಿಸಿದರು.

ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಜೊತೆ ಸುದ್ದಿಗೋಷ್ಠಿಯಲ್ಲಿ ಪಾಲ್ಗೋಂಡಿದ್ದ ಬಿಜೆಪಿ ಮುಖಂಡರು.

ನಿನ್ನೆ ಸಿಎಂ‌ ತಮ್ಮ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದು, ನನ್ನ ಮನವಿಗೆ ಸ್ಪಂದಿಸಿ ನಿರ್ಬಂಧ ಸಡಿಲಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ ಎಂದು ಯತ್ನಾಳ ಪೇಸ್ ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಟಾಂಗ್ ನೀಡಿದ ಅಪ್ಪು ಪಟ್ಟಣಶೆಟ್ಟಿ, ನನಗೂ ಸಿಎಂ ಫೋನಿನಲ್ಲಿ ಮಾತನಾಡುತ್ತಾರೆ. ನಮ್ಮ ಪಕ್ಷದವರೆ ಮುಖ್ಯಮಂತ್ರಿ ಉದ್ದಾರೆ. ಅವರು ಮಾತನಾಡುವುದು ಸಹಜ. ಗಣೇಶೋತ್ಸವ ಆಚರಣೆಗೆ ಅನುಮತಿ ಕೋರಿ ಮೊದಲು ನಾನೇ ಮನವಿ ಸಲ್ಲಿಸಿದ್ದೇನೆ. ಹಾಗಂತ ನಾನು ಕ್ರೆಡಿಟ್ ತೆಗೆದುಕೊಳ್ಳುವುದರಲ್ಲಿ ಅರ್ಥವಿಲ್ಲ. ಕೆಲವರಿಗೆ ಅದು ಪ್ರಚಾರದ ವಸ್ತುವಾಗಿದೆ. ಮುಖ್ಯಮಂತ್ರಿಗಳು ಮಾತನಾಡಿದ್ದಾರೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳುವಷ್ಟು ಕೆಳಮಟ್ಟಕ್ಕೆ ನಾನು ಇಳಿದಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. 20 ವರ್ಷ ಗಣೇಶ ಚತುರ್ಥಿ ಸಂದರ್ಭದಲ್ಲಿ ಊರಲ್ಲಿ ಇರುತ್ತಿರಲಿಲ್ಲ. ಯುವಕರು ಗಣೇಶ ಚತುರ್ಥಿಯಲ್ಲಿ ಹೆಚ್ಚಿಗೆ ಪಾಲ್ಗೊಳ್ಳುವುದರಿಂದ ಮುಂದಿನ ಚುನಾವಣೆ ಹಿನ್ನೆಲೆಯಲ್ಲಿ ಈಗ ಅವರಿಗೆ ಜ್ಞಾನೋದಯವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಗಣೇಶೋತ್ಸವದ ಕುರಿತು ಆಸಕ್ತಿ ತೋರಿಸುತ್ತಿದ್ದಾರೆ. ತಪ್ಒಉ ಮಾಡಿ ಕಾಶಿಗೆ ಹೊದರೆ ಪಾಪ ತೊಳೆಯುವುದಿಲ್ಲ ಎಂದು ತಮ್ಮ ಪಕ್ಷದವರೇ ಆದ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಅಪ್ಪು ಪಟ್ಟಣಶೆಟ್ಟಿ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.

ಸರಕಾರ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಯವಲ್ಲಿ ಮಾಧ್ಯಮಗಳ ಪಾತ್ರವೂ ಪ್ರಮುಖವಾಗಿದೆ. ಪ್ರಮೋದ ಮುತಾಲಿಕ, ಬಿಜೆಪಿ ನಾಯಕರಾದ ಅಭಯ ಪಾಟೀಲ, ಹಿಂದೂಪರ ಸಂಘಟನೆಗಳ ಮುಖಂಡರ ಒತ್ತಡದ ಫಲವಾಗಿ ಗಣೇಶೋತ್ಸವ ಆಚರಣೆಗೆ ಅವಕಾಶ ಸಿಕ್ಕಿದೆ. ಆದರೆ, ಅಭಿಯಾನ ಆರಂಭವಾಗಿದ್ದು ಮಾತ್ರ ವಿಜಯಪುರದಿಂದ ಎಂದು ತಿಳಿಸಿದ ಅಪ್ಪು ಪಟ್ಟಣಶೆಟ್ಟಿ, ನಾವು ಈಗಾಗಲೇ ಒಂಭತ್ತು ದಿನ ಮಹಾಮಂಡಳದ ಗಣೇಶ ಪ್ರತಿಷ್ಟಾಪಿಸಲಾಗುತ್ತಿದ್ದೇವೆ.‌‌ ಬಾರಿ ನಮ್ಮ ಉತ್ಸವ ನಮ್ಮ ಗಣಪ ಘೋಷವಾಕ್ಯದೊಂದಿಗೆ ಉತ್ಸವ ನೆರವೇರಲಿದೆ. ಪ್ರತೀ ವರ್ಷ ಒಂದಿಲ್ಲ ಒಂದು ಉಪಯುಕ್ತ ಕಾರ್ಯಕ್ರಮಗಳ ಮೂಲಕ ಉತ್ಸವ ಆಚರಿಸುತ್ತಿದ್ದೇವೆ. ಕಳೆದ ವರ್ಷ ಉತ್ಸವದ ಅಂಗವಾಗಿ 10 ಸಾವಿರ ಸಸಿ ಹಂಚಿದ್ದೇವೆ. ಸಾವಯವ ಕೃಷಿಕರಿಗೆ, ಪೌರ ಕಾರ್ಮಿಕರಿಗೆ, ಪರಿಸರ ಸಂರಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದೇವೆ. ಈ ಬಾರಿ ಜನಸಂಘದಲ್ಲಿ ಸೇವೆ ಸಲ್ಲಿಸಿದ್ದ ಡಾ. ಮಹೇಂದ್ರಕರ ಅವರ ಹೆಸರಿನಲ್ಲಿ ಸಮಾಜ ಮುಖಿ ಕಾರ್ಯ ನಿರ್ವಹಿಸಿದವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತೇವೆ ಎಂದು ಮಾಜಿ ಸಚಿವರು ತಿಳಿಸಿದರು.

ಮಣ್ಣಿನ ಗಣೇಶ ಪ್ರತಿಷ್ಟಾಪನೆಗೆ ಆದ್ಯತೆ ನೀಡಿದ್ದೇವೆ. ‌ಫೈಬರ್ ಗಣೇಶ ಪ್ರತಿಷ್ಟಾಪಿಸಿದವರು ಅದನ್ನು ವಿಸರ್ಜನೆ ಮಾಡದೆ ಸಾಂಕೇತಿಕವಾಗಿ ಮಣ್ಣಿನ ಗಣೇಶನನ್ನು ವಿಸರ್ಜನೆ ಮಾಡಲಿದ್ದಾರೆ. ಈ ಮೂಲಕ ಪರಿಸರ ಸ್ನೇಹಿ ಗಣೇಶ ಉತ್ಸವ ಆಚರಿಸುತ್ತೇವೆ ರಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಗಣೇಶ ಮಹಾಮಂಡಳದ ಮುಖಂಡರಾದ ಶಿವಾನಂದ ಮಾನಕರ, ಪ್ರಭಾಕರ ಬೋಸ್ಲೆ ಸತೀಶ ಪಾಟೀಲ, ಭರತ ಕೋಳಿ, ವಿಜಯ ಜೋಷಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌