ಗಣೇಶ ಮೂರ್ತಿ ವಿಸರ್ಜನೆ ಕಾಲಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳನ್ನು ನೇಮಕ ಮಾಡಿದ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಸಪ್ಟೆಂಬರ್ 14, 16, 18 ಮತ್ತು 20 ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಆದೇಶ ಹೊರಡಿಸಿದ್ದಾರೆ.

ಗಣೇಶ ಮೂರ್ತಿಗಳ ವಿಸರ್ಜನೆ ದಿನಗಳಂದು ಈ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ಸೂಚನೆ ನೀಡಿದ್ದಾರೆ.

ನಗರ, ಪಟ್ಟಣಗಳ ಹೆಸರು ಮತ್ತು ನೇಮಿಸಲಾದ ಅಧಿಕಾರಿಗಳ ಮಾಹಿತಿ

ವಿಜಯಪುರ ನಗರ- ವಿಜಯಪುರ ಉಪವಿಭಾಗಾಧಿಕಾರಿ, ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡುಗಳ ಉಪವಿಭ ಉಪವಿಭಾಗಾಧಿಕಾರಿಗಳು

ವಿಜಯಪುರ ಗ್ರಾಮೀಣ ಭಾಗ- ವಿಜಯಪುರ ತಹಸೀಲ್ದಾರರು

ಇಂಡಿ ನಗರ- ಇಂಡಿ ಉಪವಿಭಾಗಾಧಿಕಾರಿಗಳು

ಇಂಡಿ ಗ್ರಾಮೀಣ- ಇಂಡಿ ತಹಸೀಲ್ದಾರರು

ಬಬಲೇಶ್ವರ- ಬಬಲೇಶ್ವರ ತಹಸೀಲ್ದಾರರರು

ತಿಕೋಟಾ- ತಿಕೋಟಾ ತಹಸೀಲ್ದಾರರು

ಸಿಂದಗಿ- ಸಿಂದಗಿ ತಹಸೀಲ್ದಾರರು

ದೇವರ ಹಿಪ್ಪರಗಿ- ದೇವರ ಹಿಪ್ಪರಗಿ ತಹಸೀಲ್ದಾರರು

ನಿಡಗುಂದಿ- ನಿಡಗುಂದಿ ತಹಸೀಲ್ದಾರರು

ಕೊಲ್ಲಾರ- ಕೊಲ್ಹಾರ ತಹಸೀಲ್ದಾರರು

ಚಡಚಣ- ಚಡಚಣ ತಹಸೀಲ್ದಾರರು

ಬಸವನ ಬಾಗೇವಾಡಿ- ಬಸವನ ಬಾಗೇವಾಡಿ ತಹಸೀಲ್ದಾರರು

ಮುದ್ದೇಬಿಹಾಳ- ಮುದ್ದೇಬಿಹಾಳ ತಹಸೀಲ್ದಾರರು

ತಾಳಿಕೋಟೆ- ತಾಳಿಕೋಟೆ ತಹಸೀಲ್ದಾರರು

ಈ ಅಧಿಕಾರಿಗಳು ಗಣೇಶ ವಿಸರ್ಜನೆಯ ದಿನ ಕಾನೂನು ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪಾಲಿಸರು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಆದೇಶದಲ್ಲಿ ಸೂಚನೆ ನೀಡಿದ್ದಾರೆ.

 

Leave a Reply

ಹೊಸ ಪೋಸ್ಟ್‌