ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಶಾಲಾವರಣ ಸ್ವಚ್ಛಗೊಳಿಸಿದ ಉಕ್ಕಲಿ ಯುವಕರು

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಯುವಕರು ಶಾಲೆ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ವಿನೂತನವಾಗಿ ಪ್ರಧಾನಿಯ ಜನ್ಮದಿನ ಆಚರಿಸಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಗ್ರಾಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಸರಕಾರಿ ಕನ್ನಡ ಗಂಡು ಹಾಗೂ ಹೆಣ್ಣು ಮಕ್ಕಳ ಶಾಲೆ ಮತ್ತು ಉರ್ದು ಶಾಲೆಗಳ ಆವರಣವನ್ನು ಯುವಕರು ಕಸಗೂಡಿಸಿ ಸ್ವಚ್ಚಗೊಳಿಸಿದರು.

ಈ ಸ್ವಚ್ಛತಾ ಅಭಿಯಾನದಲ್ಲಿ ಉಕ್ಕಲಿ ಗ್ರಾಮದ ಯುವಕರಾದ ಸಿದ್ದರಾಮ ಕಾಖಂಡಕಿ, ಪ್ರಶಾಂತ ಬಡಿಗೇರ, ರಾಹುಲ ಕಲಗೊಂಡ, ಜಾವು ಮಸಳಿ, ನಾಥು ರಾಠೋಡ, ಮಹಾಂತೇಶ ಹಿರೇಮಠ, ರಾಜು ಮಸಳಿ, ಮೌಲಾಲಿ ಪಾಂಡುಗೋಳ, ಶರಣು ಯಾತದ, ಅಪ್ಪು ಇಟ್ಟಂಗಿಹಾಳ, ಭೀಮು ಹಡಪದ, ದುಳೇಶ ಮಸಳಿ, ಉಮೇಶ ಹಡಪದ, ಜಕ್ಕು ಕೊಂಡಗೂಳಿ, ಪರಸು ಸಾಲೆ, ಬಸು ಟಪಾಲ ಮತ್ತು ಇತರರು ಪಾಲ್ಗೋಂಡಿದ್ದರು.

Leave a Reply

ಹೊಸ ಪೋಸ್ಟ್‌