ಯು ಪಿ ಎಸ್ ಸಿ ಯಲ್ಲಿ 326ನೇ ಸ್ಥಾನ- ಯುವತಿಯನ್ನು ಅಭಿನಂದಿಸಿ ಸಂತಸಪಟ್ಟ ವಿವೇಕ ನಗರ ಬಡಾವಣೆ ಜನ

ವಿಜಯಪುರ: ಯು ಪಿ ಎಸ್ ಸಿ ಯಲ್ಲಿ ವಿಜಯಪುರ ಜಿಲ್ಲೆಯ ನೇತ್ರಾ ಮೇಟಿ ಎಂಬ ಯುವತಿ 326ನೇ ಸ್ಥಾನ ಪಡೆಯುವ ಮೂಲಕ ಯುವ ಜನತೆಯ ಕಣ್ಮಣಿಯಾಗಿ ಹೊರ ಹೊಮ್ಮಿದ್ದಾರೆ.

 

ಈ ಯುವತಿಯ ಸಾಧನೆಯನ್ನು ಮೆಚ್ಚಿದ ವಿಜಯಪುರ ನಗರದ ವಿವೇಕ ನಗರ ಬಡಾವಣೆ ಜನರು ನಗರಸಭೆ ಮಾಜಿ ಸದಸ್ಯ ರವಿಕಾಂತ ಬಗಲಿ ನೇತೃತ್ವದಲ್ಲಿ ಯುವತಿಯನ್ನು ಸನ್ಮಾನಿಸಿ ಸಂಭ್ರಮ ಪಟ್ಟಿದ್ದಾರೆ.

ಯುವತಿ ನೇತ್ರಾ ನಿವಾಸಕ್ಕೆ ತೆರಳಿದ ರವಿಕಾಂತ ಬಗಲಿ, ವಿವೇಕ ನಗರದ ಗಜಾನನ ತರುಣ ಮಂಡಳಿ, ಜೈ ಸಂತೋಷ ಮಾತಾ ಯುವಕ ಮಂಡಳಿ ಪದಾಧಿಕಾರಿಗಳು ಯುವತಿಯನ್ನು ಸನ್ಮಾನಿಸಿದರು. ಯುವತಿಯ ಸಾಧನೆಯನ್ನು ಕೊಂಡಾಡಿದ ಅವರು ಇದು ಕೇವಲ ಯುವತಿ ಮತ್ತು ಆಕೆಯ ಕುಟುಂಬ ಮಾತ್ರವಲ್ಲ ಇಡೀ ವಿವೇಕ ನಗರ ಮತ್ತು ಸುತ್ತಮುತ್ತಲಿನ ಜನತೆ ಹಾಗೂ ವಿಜಯಪುರ ಜಿಲ್ಲೆ ಮತ್ತು ಕರ್ನಾಟಕಕ್ಕೆ ಹೆಮ್ಮೆ ತಂದಿದೆ ಎಂದು ಅಭಿಮಾನದಿಂದ ಹೇಳಿ ಸಂತಸಪಟ್ಟರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರಾಜಶೇಖರ ವಿಲಿಯಮ್ಸ್, ನಾಗೇಶ ಸಾರವಾಡ, ಶಂಕರ ಚವ್ಹಾಣ, ಯುವತಿಯ ತಂದೆ ಬಾಲಚಂದ್ರ ಮೇಟಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌