ಗುಮ್ಮಟ ನಗರಿಯಲ್ಲಿ 2014ರ ಕೋಮು ಗಲಭೆ ಪ್ರಕರಣ- ಯತ್ನಾಳ ಸೇರಿ ಎಲ್ಲ ಆರೋಪಿಗಳ ಖುಲಾಸೆ

ವಿಜಯಪುರ: ವಿಜಯಪುರ ನಗರದಲ್ಲಿ 2014 ಮೇ 26 ರಂದು ನಡೆದಿದ್ದ ಕೋಮು ಗಲಭೆ ಪ್ರಕರಣದ ತೀರ್ಪು ಪ್ರಕಟವಾಗಿದ್ದು ಎಲ್ಲ ಆರೋಪಿಗಳನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಖುಲಾಸೆ ಮಾಡಿ ತೀರ್ತು ನೀಡಿದೆ.

2014ರ ಮೇ 26 ರಂದು ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಮಯದಲ್ಲಿ ಬಸನಗೌಡ ಪಾಟೀಲ ಯತ್ನಾಳ ವಿಜಯಪುರ ಮಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಿದ್ದರು. ಈ ಮೆರವಣಿಗೆ ಗಾಂಧಿಚೌಕಿಗೆ ಬರುತ್ತಿದ್ದಂತೆ ಕಲ್ಲು ತೂರಾಟ ಮತ್ತು ಗಲಾಟೆ ನಡೆದಿತ್ತು. ಅಲ್ಲದೇ, ಉದ್ರಿಕ್ತ ಪರಿಸ್ಥಿತಿ ಉಂಟಾಗಿತ್ತು. ಘಟನೆ ನಡೆದ ದಿನ ಅಂದಿನ ಎಸ್ಪಿ ರಾಮ್ ನಿವಾಸ್ ಸೆಪಟ್ ರಜೆಯಲ್ಲಿದ್ದುದರಿಂದ ಬಾಗಲಕೋಟೆ ಎಸ್ಪಿ ಎಡಾ ಮಾರ್ಟಿನ್ ಗಲಾಟೆ ಘಟನೆಯ ಬಳಿಕ ವಿಜಯಪುರಕ್ಕೆ ಬಂದು ಪರಿಸ್ಥಿತಿ ನಿಭಾಯಿಸಿದ್ದರು.


ಈ ಘಟನೆಯ ಹಿನ್ನೆಲೆಯಲ್ಲಿ ಎರಡೂ ಕೋಮುಗಳ ಹಲವಾರು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದವು.

ಈ ಪ್ರಕರಣಗಳ ಕುರಿತು ವಿಚಾರಣೆ ನಡೆಸಿದ ಬೆಂಗಳೂರಿನ‌ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ವಿಜಯಪುರ ನಗರದ ಗಾಂಧಿಚೌಕ್ ಪೊಲೀಸರು ದಾಖಲಿಸಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಈ ಪ್ರಕರಣಗಳಲ್ಲಿ‌ ಎಲ್ಲಾ ಆರೋಪಿಗಳು ಖುಲಾಸೆ
ಎಲ್ಲರೂ ನಿರಪರಾಧಿಗಳು ಎಂದು ತೀರ್ಪು ನೀಡಿದೆ. ಇದರಿಂದಾಗಿ ವಿಜಯಪುರ ‌ನಗರ‌ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಎರಡುಊ ಕೋಮುಗಳ 134 ಜನರ ಮೇಲೆ ದಾಖಲಾಗಿದ್ದ ಪ್ರಕರಣವನ್ನು
ನ್ಯಾಯಾಧೀಶ ಡಿ ಜಯಂತಕುಮಾರ ವಿಚಾರಣೆ ನಡೆಸಿ ಎಲ್ಲರೂ ನಿರ್ದೋಷಿಗಳು ಎಂದು ತೀರ್ಪು ನೀಡಿದ್ದಾರೆ.

ಸುದೀರ್ಘ ಏಳು ವರ್ಷಗಳ ವಿಚಾರಣೆ

ಈ ಎರಡೂ ಪ್ರಕರಣಗಳ ವಿಚಾರಣೆ ಏಳೂವರೆ ವರ್ಷಗಳ ಕಾಲ ನಡೆದಿದೆ. ಕೇಸ್ ಸಂಖ್ಯೆ 884/18 ಹಾಗೂ 885/18 ನಂಬರಿನ ಕೇಸ್ ಗಳನ್ನು ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ‌ ವಿಚಾರಣೆ ನಡೆದಿದೆ. ಕೊರೊನಾ ಮಾರ್ಗಸೂಚಿ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆಯ ತೀರ್ಪುನ್ನು ನ್ಯಾಯಾಧೀಶರು ಪ್ರಕಟ ಮಾಡಿದರು.

ತೀರ್ಪಿನ ಹಿನ್ನೆಲೆಯಲ್ಲಿ ವಿಜಯಪುರದ ಎಸ್ ಪಿ ಕಚೇರಿ ಹಿಂಭಾಗದಲ್ಲಿರುವ ಚಿಂತನ್ ಹಾಲ್ ವಿಶೇಷ ನ್ಯಾಯಾಲಯವಾಗಿ ಪರಿವರ್ತನೆ ಮಾಡಲಾಗಿತ್ತು. ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಇತರೆ ಎಲ್ಲ ಆರೋಪಿಗಳು ತೀರ್ಪು ಪ್ರಕಟವಾದ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನ್ಯಾಯಾಲಯದ ತೀರ್ಪಿನ ಬಳಿಕ ಮಾತನಾಡಿದ ಯತ್ನಾಳ, ತೀರ್ಪುನ್ನು ಸ್ವಾಗತಿಸಿದರು.

ಮುಂದೆ ಸಹೋದರತೆಯಿಂದ ಇರುತ್ತೇವೆ
ಕೆಲ ಕಿಡಿಗೇಡಿಗಳಿಂದ ನಡೆದ ಗಲಾಟೆಯಲ್ಲಿ ಅಮಾಯಕರು ಕಷ್ಟ ಅನುಭವಿಸುವಂತಾಗಿತ್ತು
ನ್ಯಾಯಾಲಯದ ತೀರ್ಪಿನಿಂದ ಸಂತಸವಾಗಿದೆ ಎಂದು ಎರಡೂ ಸಮುದಾಯದ ಕಡೆಯವರು ಹೇಳಿ ಪರಸ್ಪರ ಸಂತಸ ಹಂಚಿಕೊಂಡರು.

 

Leave a Reply

ಹೊಸ ಪೋಸ್ಟ್‌