ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ- ಮಸೂತಿ ಬಳಿ ಕಂಪಿಸಿದ ಭೂಮಿ- ರಿಕ್ಚರ್ ಮಾಪಕದಲ್ಲಿ ತೀವ್ರತೆ ದಾಖಲು

ವಿಜಯಪುರ: ಐತಿಹಾಸಿಕ ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪ ದಾಖಲಾಗಿದೆ.  ಕಳೆದ ಎರಡು ವಾರಗಳಿಂದ ಜಿಲ್ಲೆಯ ಅಲ್ಲಲ್ಲಿ ಭೂಮಿ ಒಳಗಿನಿಂದ ಶಬ್ದ ಹೊರ ಬರುತ್ತಿದ್ದು, ಭೂಮಿ ಕಂಪಿಸಿದ ಅನುಭವವೂ ಆಗುತ್ತಿದೆ. ಈ ಬಾರಿ ಮಟಮಟ ಮಧ್ಯಾಹ್ನ ಭೂಮಿ ಕಂಪಿಸಿದ್ದು, ಇದು ಭೂಕಂಪನ ಎಂದು ಜಿಲ್ಲಾಡಳಿತ ದೃಢಪಡಿಸಿದೆ.  ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಮುಳವಾಡ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಭೂಮಿ ಕಂಪಿಸಿದ್ದರಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ.  ಮಧ್ಯಾಹ್ನ 3.09 ನಿಮಿಷಕ್ಕೆ ಜೋರಾದ ಶಬ್ದ ಕೇಳಿ ಬಂದಿದ್ದು, ಭೂಕಂಪನದಿಂದ ಶಾಲೆಯಲ್ಲಿ ನಡೆಯುತ್ತಿದ್ದ ತರಗತಿಗಳಿಂದ […]

ಸಂಸದ ರಮೇಶ ಜಿಗಜಿಣಗಿ ನಮಗೆಲ್ಲ ಗುರುವಿನ ಸ್ಥಾನದಲ್ಲಿದ್ದಾರೆ- ನಳೀನಕುಮಾರ ಕಟೀಲ

ವಿಜಯಪುರ: ರಮೇಶಣ್ಣ ನಮಗೆಲ್ಲ ಗುರುವಿನ ಸ್ಥಾನದಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಇಲ್ಲಿ ನಡೆಯುತ್ತಿರುವ ಬಿಜೆಪಿ ಓಬಿಸಿ ರಾಜ್ಯ ಕಾರ್ಯಕಾರಿಣಿಗೆ ಸಂಸದ ಜಿಗಜಿಣಗಿ ಗೈರು ವಿಚಾರ ಕುರಿತು ಪ್ರತಿಕ್ರಿಯೆ ನೀಡಿದತು. ರಮೇಶಣ್ಣ ಅವರ ಜೊತೆಗೆ ಮಾತುಕತೆ ಮಾಡಿದ್ದೇವೆ. ಇಂದು ನಮಗೆ ಹೇಳಿಯೇ ಹೊರಗಡೆ ಹೋಗಿದ್ದಾರೆ.‌‌‌‌ ನಾಲ್ಕೈದು ಬಾರಿ ಸಂಸದರಾಗಿ, ಕೇಂದ್ರ ಮತ್ತು ರಾಜ್ಯದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ನಮಗೆ […]

ಡಾ. ಬಾಂಗಿ ಆಸ್ಪತ್ರೆ ವೈದ್ಯರ ಆರೈಕೆ- 5 ತಿಂಗಳ ಬಳಿಕ ಕೊರೊನಾದಿಂದ ಗುಣಮುಖನಾದ ದೇವೇಂದ್ರ ಕೂಸಪ್ಪ ಚಲವಾದಿ ಇಚ್ಛಾಶಕ್ತಿಗೊಂದು ಸಲಾಂ

ವಿಜಯಪುರ: ಇದು ನಂಬಲು ಕಷ್ಟವಾದರೂ ಸತ್ಯ.  ಇಲ್ಲಿ ರೋಗಿಯ ಇಚ್ಛಾಶಕ್ತಿಯ ಜೊತೆ ಆಸ್ಪತ್ರೆಯ ವೈದ್ಯರ ಅಕ್ಕರೆಯ ಆರೈಕೆ ಬಡವನಿಗೆ ಹೊಸ ಬದುಕು ನೀಡಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ವಿಜಯಪುರ ನಗರದ ವಾರ್ಡ್ ಸಂಖ್ಯೆ 2 ರಲ್ಲಿ ಬರುವ ಅಫಜಲಪುರ ಟಕ್ಕೆ ನಿವಾಸಿ ದೇವೇಂದ್ರ ಕೂಸಪ್ಪ ಚಲವಾಸಿ(50) ಅನಾರೋಗ್ಯದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ದರು.  ಮೇ 3 ರಂದು ಕರೆ ಮಾಡಿದ ಆರೋಗ್ಯ ಇಲಾಖೆ ಸಿಬ್ಬಂದಿ ಕೊರೊನಾ ಸೋಂಕು ತಗುಲಿರುವುದನ್ನು ದೃಢಪಡಿಸಿದ್ದರು. ಆಗ ಕೂಡಲೇ ವಿಜಯಪುರ ನಗರದ […]

ವಿಜಯಪುರದಲ್ಲಿ ಬಿಜೆಪಿ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಆರಂಭ

ವಿಜಯಪುರ: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯಕಾರಣಿ ಬಸವ ನಾಡು ವಿಜಯಪುರದಲ್ಲಿ ಆರಂಭವಾಗಿದೆ. ವಿಜಯಪುರ ನಗರದ ಬಳಮಕರ ಪಂಕ್ಷನ್ ಹಾಲ್ ನಲ್ಲಿ ನಡೆಯಿತ್ತಿರುವ ರಾಜ್ಯ ಕಾರ್ಯಕಾರಿಣಿಯಲ್ಲಿ ರಾಜ್ಯ ಬಿಜೆಪಿ ಹಿರಿಯ ಮುಖಂಡರು ಪಾಲ್ಹೊಂಡಿದ್ದಾರೆ. ಕಾರ್ಯಕಾರಿಣಿ ಆರಂಭಕ್ಕೂ ಮುನ್ನ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ, ಸಚಿವ ಕೆ. ಎಸ್. ಈಶ್ವರಪ್ಪ ಮತ್ತು ಇರರರ ಮೇಲೆ ಬಿಜೆಪಿ ಕಾರ್ಯಕರ್ತರು ಹೂವಿನ ಪಕಳೆಗಳನ್ನು ಹಾಕಿ ಸ್ವಾಗತಿಸಿದರು. ) ಬಳಿಕ ಆರಂಭವಾದ ಕಾರ್ಯಕಾರಿಣಿಯಲ್ಲಿ ಬಿಜೆಪಿಯ ಹಿರಿಯ ನಾಯಕರಿಗೆ […]

ಅ. 20,21 ರಂದು ರಾಜ್ಯ ಮಟ್ಟದ 12ನೇ ರೋಡ್ ಸೈಕ್ಲಿಂಗ್ ಚಾಂಪಿಯನ್ ಶಿಪ್- ಧನಸಹಾಯಕ್ಕೆ ಮನವಿ ಮಾಡಿದ ರಾಜು ಬಿರಾದಾರ

ವಿಜಯಪುರ: ರಾಜ್ಯದ ಸೈಕ್ಲಿಷ್ಟ್ ಗಳ ಕಣಜ ವಿಜಯಪುರದಲ್ಲಿ ಅ. 20 ಮತ್ತು 21 ರಂದು ರಾಜ್ಯ ಮಟ್ಟದ 12ನೇ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ನಡೆಯಲಿದೆ.  14 ಮತ್ತು 16 ಹಾಗೂ 18 ವರ್ಷದ ಬಾಲಕ ಮತ್ತು ಬಾಲಕಿಯರಿಗಾಗಿ ಈ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ ನ್ನು ವಿಜಯಪುರ ಜಿಲ್ಲಾ ಅಮೆಚ್ಯೂರ್ ಸೈಕ್ಲಿಂಗ್ ಅಸೋಸಿಯೇಶನ್ ಈ ಪಂದ್ಯಾವಳಿ ಆಯೋಜಿಸಿದೆ ಎಂದು ಸೈಕ್ಲಿಂಗ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ರಾಜು ಬಿರಾದಾರ ತಿಳಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐತಿಹಾಸಿಕ ಗುಮ್ಮಟ ನಗದರಿ ವಿಜಯಪುರದಲ್ಲಿ […]