ಸಂಸದ ರಮೇಶ ಜಿಗಜಿಣಗಿ ನಮಗೆಲ್ಲ ಗುರುವಿನ ಸ್ಥಾನದಲ್ಲಿದ್ದಾರೆ- ನಳೀನಕುಮಾರ ಕಟೀಲ

ವಿಜಯಪುರ: ರಮೇಶಣ್ಣ ನಮಗೆಲ್ಲ ಗುರುವಿನ ಸ್ಥಾನದಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಇಲ್ಲಿ ನಡೆಯುತ್ತಿರುವ ಬಿಜೆಪಿ ಓಬಿಸಿ
ರಾಜ್ಯ ಕಾರ್ಯಕಾರಿಣಿಗೆ ಸಂಸದ ಜಿಗಜಿಣಗಿ ಗೈರು ವಿಚಾರ ಕುರಿತು ಪ್ರತಿಕ್ರಿಯೆ ನೀಡಿದತು.

ರಮೇಶಣ್ಣ ಅವರ ಜೊತೆಗೆ ಮಾತುಕತೆ ಮಾಡಿದ್ದೇವೆ. ಇಂದು ನಮಗೆ ಹೇಳಿಯೇ ಹೊರಗಡೆ ಹೋಗಿದ್ದಾರೆ.‌‌‌‌ ನಾಲ್ಕೈದು ಬಾರಿ ಸಂಸದರಾಗಿ, ಕೇಂದ್ರ ಮತ್ತು ರಾಜ್ಯದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ನಮಗೆ ಹಿರಿಯರು. ಅನುಭವಿಗಳು‌ ಎಲ್ಲ ಕಿರಿಯರಿಗೂ ಗುರು ಸ್ಥಾನದಲ್ಲಿ ಇರುವವರು ಎಂದು ಹೇಳಿದರು. ಈ ಮೂಲಕ ಬಿಜೆಪಿ ಹಿರಿಯ ಮತ್ತು ದಲಿತ ಸಂಸದ ರಮೇಶ ಜಿಗಜಿಣಗಿ ಅವರನ್ನು ಬಿಜೆಪಿ ಕಡೆಗಣಿಸುತ್ತಿಲ್ಲ ಎಂದು ಸಂದೇಶ ರವಾನಿಸಿದರು.

ಕಳೆದ ಕೆಲವು ದಿನಗಳ ಹಿಂದೆ ತಾವು ಬಿಜೆಪಿಗೆ ಬಂದು 17 ವರ್ಷ ಕಳೆದರೂ ಪಕ್ಷ ಯಾವುದೇ ಜವಾಬ್ದಾರಿ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ, ವಿಜಯಪುರದಲ್ಲಿಯೇ ರಾಜ್ಯ ಬಿಜೆಪಿ ಕಾರ್ಯಕಾರಿಣಿಗೆ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ನಳೀಕಕುಮಾರ ಕಟೀಲ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ಬೈ ಎಲೆಕ್ಷನ್ ಟಿಕೆಟ್ ವಿಚಾರ

ಇದೇ ವೇಳೆ, ವಿಜಯಪುರ ಜಿಲ್ಲೆಯ ಸಿಂದಗಿ ಮತ್ತು ಹಾವೇರಿ ಜಿಲ್ಲೆಯ ಹಾನಗಲ ಬೈ ಎಲೆಕ್ಷನ್ ಬಿಜೆಪಿ ಟಿಕೇಟ್ ಘೋಷಣೆ ವಿಳಂಬ ಕುರಿತು ಪ್ರತಿಲ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷರು, ಟಿಕೆಟ್ ಗಳನಗನು ರಾಷ್ಟ್ರೀಯ ನಾಯಕರು ಘೋಷಿಸಲಿದ್ದಾರೆ. ‌ಬಿಜೆಪಿ ರಾಷ್ಟ್ರೀಯ ನಾಯಕರು ಅಭ್ಯರ್ಥಿಗಳ ಘೋಷಣೆ ಮಾಡುತ್ತಾರೆ ಎಂದು ತಿಳಿಸಿದರು.

ಕೆಲವು ಅಭ್ಯರ್ಥಿಗಳ ಹೆಸರುಗಳನ್ನು ಹೈಕಮಾಂಡಿಗೆ ಕಳುಹಿಲಾಗಿದೆ. ಅವರು ಆದಷ್ಟು ಬೇಗ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಈಗಾಗಲೇ‌ ಬಿಜೆಪಿ ರಾಜ್ಯ ಕೋರ್ ಕಮಿಟಿ ಮೂಲಕ ಹೆಸರುಗಳನ್ನ ಕಳುಹಿಸಿದ್ದೇವೆ. ‌ಹೆಸರು ಘೋಷಣೆ ವಿಳಂಬದಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ನಳೀನ‌‌ ಕುಮಾರ ಕಟೀಲ ತಿಳಿಸಿದರು.

ಚುನಾವಣೆ ಘೋಷಣೆಯಾದ ಮೇಲೆ ನಮ್ಮ ತಯಾರಿ ಇರಲ್ಲ. ಚುನಾವಣೆ ಘೋಷಣೆಗೂ ಮೊದಲೇ ನಮ್ಮ ತಯಾರಿ ಸದಾ ಇರುತ್ತದೆ. ಈಗಾಗಲೇ ಚುನಾವಣೆ ಕೆಲಸಗಳು ಆರಂಭವಾಗಿವೆ. ನಾನು ಕೂಡ ಸಿಂದಗಿಯಲ್ಲಿ ಸಭೆ ಮಾಡುವೆ ಎಂದು ಅವರು ತಿಳಿಸಿದರುಮ

ನಮ್ಮ ಚುನಾವಣೆ ಕಾರ್ಯ ಈಗಾಗಲೇ ಆರಂಭವಾಗಿವೆ. ಅಭ್ಯರ್ಥಿ ಘೋಷಣೆಗೂ ನಮಗೂ ಸಂಬಂಧ ಇಲ್ಲ ಎಂದ ನಳಿನ ಕುಮಾರ್ ಕಟೀಲ್ ಸ್ಪಷ್ಟಪಡಿಸಿದರು.

ಹಾನಗಲ್ ಉಸ್ತುವಾರಿ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಲ್ಲಿಯೂ ಉಸ್ತುವಾರಿ ಬದಲಾವಣೆ ಮಾಡಿಲ್ಲ.‌‌ ಇನ್ನು ನಾಲ್ಕು ಜನರನ್ನ ಸೇರಿಸುವುದು ಬಾಕಿ ಇದೆ. ‌ಇನ್ನೂ ಚುನಾವಣೆ ನಿರ್ವಹಣೆ ಸಮಿತಿ ರಚಿಸಬೇಕಿದೆ. ಸ್ಟಾರ್ ಕ್ಯಾಂಪೆನೇರ್ ಪಟ್ಟಿ ಮಾಡಬೇಕಿದೆ. ವ್ಯವಸ್ಥೆಯ ಭಾಗವಾಗಿ ಒಂದೊಂದೇ ಪಟ್ಟಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಬಿಜೆಪಿ ವಿಜಯಪುರ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಮುಂತಾದವರು ಉಪಸ್ಥಿತರಿದ್ದರು‌.

Leave a Reply

ಹೊಸ ಪೋಸ್ಟ್‌