ಅ. 20,21 ರಂದು ರಾಜ್ಯ ಮಟ್ಟದ 12ನೇ ರೋಡ್ ಸೈಕ್ಲಿಂಗ್ ಚಾಂಪಿಯನ್ ಶಿಪ್- ಧನಸಹಾಯಕ್ಕೆ ಮನವಿ ಮಾಡಿದ ರಾಜು ಬಿರಾದಾರ

ವಿಜಯಪುರ: ರಾಜ್ಯದ ಸೈಕ್ಲಿಷ್ಟ್ ಗಳ ಕಣಜ ವಿಜಯಪುರದಲ್ಲಿ ಅ. 20 ಮತ್ತು 21 ರಂದು ರಾಜ್ಯ ಮಟ್ಟದ 12ನೇ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ನಡೆಯಲಿದೆ.  14 ಮತ್ತು 16 ಹಾಗೂ 18 ವರ್ಷದ ಬಾಲಕ ಮತ್ತು ಬಾಲಕಿಯರಿಗಾಗಿ ಈ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ ನ್ನು ವಿಜಯಪುರ ಜಿಲ್ಲಾ ಅಮೆಚ್ಯೂರ್ ಸೈಕ್ಲಿಂಗ್ ಅಸೋಸಿಯೇಶನ್ ಈ ಪಂದ್ಯಾವಳಿ ಆಯೋಜಿಸಿದೆ ಎಂದು ಸೈಕ್ಲಿಂಗ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ರಾಜು ಬಿರಾದಾರ ತಿಳಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐತಿಹಾಸಿಕ ಗುಮ್ಮಟ ನಗದರಿ ವಿಜಯಪುರದಲ್ಲಿ ಈ ಕ್ರೀಡಾಕೂಟ ಆಯೋಜಿಸಲಾಗಿದೆ. ಸಂಸ್ಥೆಯಲ್ಲಿ ಕಳೆದ 28 ರಿಂದ 30 ವರ್ಷಗಳಲ್ಲಿ ತರಬೇತಿ ಪಡೆದ ಸುಮಾರು 300ಕ್ಕೂ ಸೈಕ್ಲಿಷ್ಟಗಳನ್ನು ಹೆಚ್ಚು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಬಸವ ನಾಡಿನ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ತಿಳಿಸಿದರು.

ಅ. 20 ಮತ್ತು 21 ರಂದು ನಡೆಯಲಿರುವ ಈ ಬಾರಿಯ ಚಾಂಪಿಯನಶಿಫ್‍ನಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಸುಮಾರು 250 ಸ್ಪರ್ಧಾಳುಗಳು ಹಾಗೂ 50 ಜನ ಕ್ರೀಡಾಧಿಕಾರಿಗಳು ಭಾಗವಹಿಸುವ ನಿರೀಕ್ಷಿಸಲಾಗಿದೆ ಎಂದು ಅವರು ತಿಳಿಸಿದು.

ಧನ ಸಹಾಯಕ್ಕೆ ಮನವಿ

ಇದೇ ವೇಳೆ, ಈ ಪಂದ್ಯಾವಳಿಗೆ ಸುಮಾರು ರೂ 6 ರಿಂದ 7 ಲಕ್ಷ ವೆಚ್ಚವಾಗಲಿದೆ.  ಈ ಹಿನ್ನೆಲೆಯಲ್ಲಿ ಈ ಚಾಂಪಿಯನ್ ಶಿಫ್‍ನ ಯಶಸ್ವಿಗೆ ಸಹಾಯ ಸಹಕಾರಿ ಅಗತ್ಯವಾಗಿದೆ.  ನಾನಾ ಸಂಘಟನೆಗಳು ಮತ್ತು ಗಣ್ಯ ವ್ಯಕ್ತಿಗಳು ಧನ ಸಹಾಯ ಮಾಡಬೇಕು ಎಂದು ರಾಜು ಬಿರಾದಾರ ಮನವಿ ಮಾಡಿದ್ದಾರೆ.

ಈ ಸುದ್ದಿಗೋಷ್ಠಿಯಲ್ಲಿ  ಸೈಕ್ಲಿಂಗ್ ಅಸೋಸಿಯೇಶನ್ ಪದಾಧಿಕಾರಿಗಳಾದ ಸಂಜು ಪಡತಾರೆ, ಸಂತೋಷ ಕತಕನಹಳ್ಳಿ,  ಶ್ರೀಕಾಂತ್ ಭಟ ಮುಂತಾದವರು ಉಪಸ್ಥಿತರಿದ್ದರು.

ದಾನಿಗಳು ಧನ ಸಹಾಯ ಮಾಡಲು ಅಗತ್ಯವಿರುವ ಮಾಹಿತಿ.

Bank Details : Karnataka Vikas Gramin Bank, Shastri Nagar, Vijayapura

A/c No: 89111163174,

IFSC : KVGB0003114.

Leave a Reply

ಹೊಸ ಪೋಸ್ಟ್‌