ಅ.7ರಂದು ಮಾಜಿ ಸಚಿವ ಎಂ. ಬಿ. ಪಾಟೀಲ‌ ಜನ್ಮದಿನ- ಹೂವು, ಹಾರ, ಕೇಕ್, ಪಟಾಕಿ ಬಳಕೆ ಬೇಡ- ಎಂ. ಬಿ. ಪಾಟೀಲ ಫೌಂಡೇಶನ್ ಮನವಿ

ವಿಜಯಪುರ: ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಹಾಗೂ ಬಿ‌ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷರಾದ ಎಂ. ಬಿ. ಪಾಟೀಲ ಅವರ ಜನ್ಮ ದಿನ ಅ. 7ರಂದು ನಾಡಿನಾದ್ಯಂತ ಹಲವಾರು ಅಭಿಮಾನಿಗಳು ರಕ್ತದಾನ, ವೃದ್ಧಾಶ್ರಮಗಳಲ್ಲಿ, ಅನಾಥಾಶ್ರಮಗಳಲ್ಲಿ ಆಸ್ಪತ್ರೆಗಳಲ್ಲಿ, ಆಹಾರ ವಿತರಣೆ, ಸಸಿಗಳನ್ನು ಹಂಚುವುದು, ಸ್ವಚ್ಚತಾ ಕಾರ್ಯಕ್ರಮ, ದೇವಾಲಯಗಳಲ್ಲಿ ವಿಶೇಷ ಪೂಜೆಗಳ ಮೂಲಕ ನಾನಾ ಕಾರ್ಯಕ್ರಮಗಳ ಮೂಲಕ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಕೇಕ್ ಕತ್ತರಿಸುವುದು, ಹೂ ಹಾರ ಹಾಕುವುದು ಇತ್ಯಾದಿ ಅದ್ದೂರಿ ಆಚರಣೆಗಳನ್ನು ಹಲವರು ಮಾಡುತ್ತಿದ್ದಾರೆ.

ಕೊರೊನಾ ಮಹಾಮಾರಿಯ ಈ ಸಂಕಷ್ಟದ ಸಮಯದಲ್ಲಿ ಸಾಧ್ಯವಾದಷ್ಟು ನಾನಾ ಕಾರ್ಯಕ್ರಮಗಳ ಮೂಲಕ ನಾವು ಜನ್ಮದಿನ ಆಚರಿಸಿದರೆ ಅದಕ್ಕೆ ವಿಶೇಷ ಅರ್ಥವಿದೆ. ಆದ್ದರಿಂದ ದಯವಿಟ್ಟು ಯಾರೂ ಅನಗತ್ಯ ಆಚರಣೆಗಳಾದ ಕೇಕ್ ಕತ್ತರಿಸುವುದು, ಪಟಾಕಿ ಹಾರಿಸುವುದು, ಹೂ ಹಾರ ಹಾಕುವುದು,ಹೂಗುಚ್ಛ ವಿತರಣೆ ಮಾಡಬಾರದು ಎಂದು ಎಂ. ಬಿ. ಪಾಟೀಲ ಫೌಂಡೇಶನ್ ಪರವಾಗಿ ಪ್ರಕಟಣೆಯಲ್ಲಿ ವಿನಂತಿ ಮಾಡಲಾಗಿದೆ.

Leave a Reply

ಹೊಸ ಪೋಸ್ಟ್‌