ಬಸವ ನಾಡಿನ ಶ್ರೀ ನರಸಿಂಹ ದೇವಸ್ಥಾನ ಕಂದಕ ಸ್ವಚ್ಛಗೊಳಿಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು

ವಿಜಯಪುರ: ಪೂಜೆಯ ತ್ಯಾಜ್ಯ ವಸ್ತುಗಳಿಂದ ತುಂಬಿಕೊಂಡಿದ್ದ ವಿಜಯಪುರ ನಗರದ ಶ್ರೀ ನರಸಿಂಹ ದೇವಸ್ಥಾನದ ಕಂದಕದಲ್ಲಿದ್ದ ಕಸಕಡ್ಡಿಗಳನ್ನು ಸ್ವಚ್ಛಗೊಳಿಸುವ ಮೂಲಕ ಬಿಜೆಪಿ ಯುವ ಮೋರ್ಚಾ ನಗರ ಮಂಡಲ ಕಾರ್ಯಕರ್ತರು ಗಮನ ಸೆಳೆದಿದ್ದಾರೆ.

ಬೆಳಿಗ್ಗೆ 11ಕ್ಕೆ ಆರಂಭವಾದ ಈ ಸ್ವಚ್ಛತಾ ಅಭಿಯಾನ ಸತತ ಐದು ಗಂಟೆಗಳ ಕಾಲ ನಡೆಯಿತು.  ಸ್ಥಳೀಯವಾಗಿ ತಯಾರಿಸಲಾಗಿದ್ದ ಬೋಟಿನಲ್ಲಿ ಕೆಳಗಿಳಿದ ಕೆಲವು ಜನ ಯುವಕರು ಅಲ್ಲಿ ನೀರಿನಲ್ಲಿ ತೇಲಾಡುತ್ತಿದ್ದ ಕಸಕಡ್ಡಿಗಳನ್ನು ಒಂದೆಡೆ ಸೇರಿಸಿದರು.  ನಂತರ ಈ ಕಂದಕಕ್ಕೆ ಅಂಟಿಕೊಂಡಿರುವ ಗೋಡೆಯ ಮೇಲ್ಭಾಗದಲ್ಲಿರುವ ಇತರರು ಬಟ್ಟೆಯಿಂದ ಮತ್ತು ಹಗ್ಗದಿಂದ ಅಲ್ಲಿ ಸಂಗ್ರಹವಾಗಿದ್ದ ಕಸವನ್ನು ಮೇಲಕ್ಕೆ ಎತ್ತುವ ಮೂಲಕ ಸ್ವಚ್ಛತಾ ಕಾರ್ಯ ಕೈಗೊಂಡರು.

ಸೇವೆ ಮತ್ತು ಸಮರ್ಪಣೆ ಅಭಿಯಾನದ ಕೊನೆಯ ದಿನ ನಡೆದ ಈ ಸ್ವಚ್ಛತಾ ಸ್ನೇಹಿ ಅಭಿಯಾನದಲ್ಲಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿಜೆಪಿ ಬೆಳಗಾವಿ ವಿಭಾಗ ಪ್ರಭಾರಿ ಪ್ರಕಾಶ ಅಕ್ಕಲಕೋಟ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ಬಿಜೆಪಿ ಮುಖಂಡರಾದ ಉಮೇಶ ಕಾರಜೋಳ, ಸುರೇಶ ಬಿರಾದಾರ, ಮಳುಗೌಡ ಪಾಟೀಲ, ಗೋಪಾಲ ಘಟಕಾಂಬಳೆ, ಪಾಪುಸಿಂಗ್ ರಜಪೂತ, ಬಿಜೆಪಿ ನಗರ ಯುವಮೋರ್ಚಾ ಅಧ್ಯಕ್ಷ ಸತೀಶ ಪಾಟೀಲ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌