ಬಸವ ನಾಡಿನಲ್ಲಿ ಮತ್ತೆ 3.1 ತೀವ್ರತೆ ಭೂಕಂಪ- ಎಲ್ಲಿ ಗೊತ್ತಾ?

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಸಂಜೆ ಮಧ್ಯಾಹ್ನ ಭೂಕಂಪ ಉಂಟಾಗಿದೆ.

ಸಂ. 6.22ಕ್ಕೆ ಬಸವನ ಬಾಗೇವಾಡಿ ಮತ್ತು ವಿಜಯಪುರ ತಾಲೂಕಿನ ಕೆಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ.

ಹಿಟ್ಟಿನಹಳ್ಳಿ, ಮನಗೂಳಿ ಮತ್ತು ಇತರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಭೂಕಂಪದ ಅನುಭವಾಗಿದೆ.

ವಿಜಯಪುರ ಜಿಲ್ಲೆಯ ಹಿಟ್ಟಿನಹಳ್ಳಿಯ ಗ್ರಾಮದ ನೈರುತ್ಯಕ್ಕೆ 2.60 ಕಿ. ಮೀ. ದೂರದಲ್ಲಿ ಈ ಭೂಕಂಪದ ಕೇಂದ್ರ ಬಿಂದು ದಾಖಲಾಗಿದೆ. ಅಲ್ಲದೇ, ಈ ಭೂಕಂಪದ ತೀವ್ರತೆ 3.1 ರಷ್ಟು ದಾಖಲಾಗಿದೆ.

ಇದು ಲಘು ಭೂಕಂಪವಾಗಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌