ಡಬಲ್ ಎಂಜಿನ ಸರಕಾರದಿಂದಾಗಿ ಜನಸಾಮಾನ್ಯರು ಹೈರಾಣಾಗಿದ್ದಾರೆ- ಬೆಲೆ ಏರಿಕೆ ಜನಜೀವನವನ್ನು ಮತ್ತೆ ಹಳೆಯ ದಿನಗಳಿಗೆ ತಳ್ಳುತ್ತಿದೆ- ಎಂ ಎಲ್ ಸಿ ಸುನೀಲಗೌಡ ಪಾಟೀಲ

ವಿಜಯಪುರ: ಡಬಲ್ ಎಂಜಿನ್ ಸರಕಾರದಿಂದ ದೇಶ ಮತ್ತು ರಾಜ್ಯದಲ್ಲಿ ಜನಸಾಮಾನ್ಯರು ಹೈರಾಣಾಗಿದ್ದು, ಜನತೆಯ ಬದುಕನ್ನು ಹಳೆಯ ದಿನಗಳತ್ತ ತಳ್ಳುತ್ತಿದೆ ಎಂದು ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನೀಲಗೌಡ ಪಾಟೀಲ ಆರೋಪಿಸಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಪ್ರಚಾರದಲ್ಲಿರುವ ಅವರು, ಆಲಮೇಲ ತಾಲೂಕಿನ ರಾಮನಳ್ಳಿ, ಗುಡ್ಡಳ್ಳಿ, ತೋಂಟಾಪುರ, ವಿಭೂತಿಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ನಡೆಸಿ ಮಾತನಾಡಿದರು.     ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನ ಹಳ್ಳಿ ಹಳ್ಳಿಗೂ ತಲುಪಿದೆ.  ಪ್ರತಿಯೊಬ್ಬರ ಬೆರಳ ತುದಿಯಲ್ಲಿ ವ್ಯವಹಾರ […]