ಬೈ ಎಲೆಕ್ಷನ್ ನಿಂದ ಬಿಜೆಪಿ ಅವನತಿ ಶುರವಾಗಿದೆ- ಆಲಮೇಲದಲ್ಲಿ ಡಿ ಕೆ ಶಿವಕುಮಾರ ಹೇಳಿಕೆ

ವಿಜಯಪುರ: ಬೈ ಎಲೆಕ್ಷನ್ ನಿಂದ ಬಿಜೆಪಿ ಅವನತಿ ಶುರುವಾಗಿದೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ. ಕೆ. ಶಿವಕುಮಾರ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಪ್ರಚಾರದಲ್ಲಿರುವ ಅವರು ಆಲಮೇಲ ಪಟ್ಟಣದಲ್ಲಿ ಬಹಿರಂಗ ಪ್ರಚಾರ ಸಂದರ್ಭದಲ್ಲಿ ಮಾತನಾಡಿದರು.

ಆಲಮೇಲ‌ ಪಟ್ಟಣಕ್ಕೆ ಆಗಮಿಸಿದ ಡಿ. ಕೆ. ಶಿವಕುಮಾರ ಮತ್ತು ಮಾಜಿ ಸಚಿವ ಶಿವಾನಂದ ಪಾಟೀಲ, ಈಶ್ವರ ಖಂಡ್ರೆ, ವಿಧಾನ ಪರಿಷತ ಪ್ರತಿಪಕ್ಷದ ನಾಯಕ ಎಸ್. ಆರ್. ಪಾಟೀಲ, ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಅವರನ್ನು ಕಾರ್ಯಕರ್ತರು ಹೂಮಳೆ ಸುರಿಸುವ ಮೂಲಕ ಸ್ವಾಗತಿಸಿದರು.  ಅಲ್ಲದೇ, ಮೈಸೂರು ಪೇಟಾ ಸುತ್ತಿ, ಶಾಲು ಹೊದಿಸಿ ಸನ್ಮಾನಿಸಿದರು.  ಈ ಸಂದರ್ಭದಲ್ಲಿ ಡಿ. ಕೆ. ಶಿವಕುಮಾರ, ಆಲಮೇಲ ಪಟ್ಟಣದಲ್ಲಿರುವ ಟಿಪ್ಪು ಸುಲ್ತಾನ ಮತ್ತು ಡಾ. ಬಿ. ಆರ್. ಅಂಬೇಡ್ಕರ ಚೌಕಿನಲ್ಲಿ ಧ್ವಜಗಳಿಗೆ ಹೂವಿನ ಹಾರ ಹಾಕಿದರು.  ಬಳಿಕ ಆಲಮೇಲ ಪಟ್ಟಣದ ಬಸ್ ನಿಲ್ದಾಣದಿಂದ ಬಸವೇಶ್ವರ ವೃತ್ತದ ಅವರು ಪಾದಯಾತ್ರೆ ನಡೆಸಿದರು.

ಬಳಿಕ ತೆರೆದ ವಾಹನದಲ್ಲಿ ಪ್ರಚಾರ ನಡೆಸಿದ ಡಿ. ಕೆ. ಶಿವಕುಮಾರ, ಈ ಬೈ ಎಲೆಕ್ಷನ್ ನಿಂದ ಬಿಜೆಪಿ ಅವನತಿ ಶುರವಾಗಿದೆ.  ಕಾಂಗ್ರೆಸ್ಸಿಗರಿಗೆ ಜಾತಿ, ಧರ್ಮ ಎಂಬುದು ಇಲ್ಲ.  ನಮಗೆ ಎಲ್ಲರೂ ಸಮಾನರು ಎಂದು ಹೇಳಿದರು.  ಬಿಜೆಪಿ ಆಲಮೇಲನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿಲ್ಲ.  ಆಲಮೇಲನ್ನು ದಿ. ಶಾಸಕ ಎಂ. ಸಿ. ಮನಗೂಳಿ ಅವರು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿದ್ದಾರೆ.  ಅವರ ಪುತ್ರ ಅಶೋಕ ಮನಗೂಳಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.  ಹೀಗಾಗಿ ಅಶೋಕ ಮನಗೂಳಿ ಅವರನ್ನು ಬೆಂಬಲಿಸಿ ಮತ ಹಾಕಬೇಕು ಎಂದು ಮನವಿ ಮಾಡಿದರು.

Leave a Reply

ಹೊಸ ಪೋಸ್ಟ್‌