ಬರಡು ಭೂಮಿಯಲ್ಲಿ ಬೆಳೆದ ಪ್ರಥಮ ಫಲವನ್ನು ನಿರೋದಗಿಸಿದ ಆಧುನಿಕ ಭಗೀರಥನಿಗೆ ನೀಡಿ ಕೃತಜ್ಞತೆ ಸಲ್ಲಿಸಿದ ರೈತ

ವಿಜಯಪುರ: ರೈತರು ತಾವು ಬೆಳೆಯುವ ಮೊದಲ ಬೆಳೆ ಮತ್ತು ಫಲವನ್ನು ದೇವರಿಗೆ ಅರ್ಪಿಸುವ ಮೂಲಕ ಕೃತಜ್ಞತೆ ಸಲ್ಲಿಸುವುದು ಸಾಮಾನ್ಯ.  ಆದರೆ, ಇಲ್ಲೋಬ್ಬ ರೈತ ತನ್ನ ಹೊಲದಲ್ಲಿ ಬೆಳೆದ ಪ್ರಥಮ ಹಣ್ಣನ್ನು ತನ್ನ ಜಮೀನಿಗೆ ನೀರು ಬರಲು ಕಾರಣರಾದ ಮತ್ತು ಆಧುನಿಕ ಭಗೀರಥ ಎಂದೇ ಕರೆಯಿಸಿಕೊಳ್ಳುವ ತನ್ನ ಅಚ್ಚುಮೆಚ್ಚಿನ ನಾಯಕನಿಗೆ ನೀಡಿ ಪ್ರೀತಿ ತೋರಿಸಿದ ಪ್ರಸಂಗ ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಈ ಪ್ರಸಂಗ ನಡೆದಿದ್ದು, ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸಿದ್ದಾಪುರ ಕೆ. ಗ್ರಾಮದಲ್ಲಿ.  ನೀರಿನ […]

ನನ್ನ ಚರಿತ್ರೆ ರಹಸ್ಯ ಬಹಿರಂಗ ಪಡಿಸಿ- ಯತ್ನಾಳ ಗೆ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಸವಾಲು

ವಿಜಯಪುರ: ಕುಮಾರಸ್ವಾಮಿ ಅವರ ರಹಸ್ಯ ತಮಗೆ ಗೊತ್ತಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೀಡಿರುವ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ನನ್ನ ಚರಿತ್ರೆ ಇದ್ದರೆ ಹೊರಗೆ ತಂದುಬಿಡಿ ಎಂದು ಸವಾಲು ಹಾಕಿದ ಅವರು ನನ್ನ ಬಗ್ಗೆ ಏನೇನು ಗೊತ್ತಿದೇ ಎಲ್ಲವನ್ನು ಹೊರಗೆ ತಂದು ಬಿಡಿ. ಪಾಪ ನನ್ನ ಜೊತೆಗೆ ಜೆಡಿಎಸ್ ನಲ್ಲಿ ಎರಡು ವರ್ಷ ಇದ್ದರು. ಅದಕ್ಕಾಗಿ ನನ್ನ ಬಗ್ಗೆ ಇರುವ ಚರಿತ್ರೆ ಹೊರಗೆ ತರಲಿ […]

ಬೈ ಎಲೆಕ್ಷನ್ ಬಳಿಕ ರಾಜ್ಯಾದ್ಯಂತ ಪ್ರವಾಸ ಮಾಡುವೆ- ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ

ವಿಜಯಪುರ: ಬೈ ಎಲೆಕ್ಷನ್ ಬಳಿಕ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನಾಗಲಿ ಪ್ರಧಾನಿ ನರೇಂದ್ರ ಮೋದಿಯಾಗಲಿ ಅಲ್ಪಸಂಖ್ಯಾತರಿಗೆ ಎಂದೂ ಅನ್ಯಾಯ ಮಾಡಿಲ್ಲ. ಎಲ್ಲ ಜನರ ಪರ ಯೋಜನೆ ಜಾರಿ ಮಾಡಿದ್ದೇವೆ ತಿಳಿಸಿದರು ಇಂದು ವಿಜಯಪುರದ ಸಿಂದಗಿ ಮತಕ್ಷೇತ್ರದಲ್ಲಿ ಪ್ರಚಾರ ಮುಗಿಸಿ ಶುಕ್ರವಾರದಿಂದ ಹಾನಗಲ್ ನಲ್ಲಿ ಪ್ರಚಾರ ಮಾಡುತ್ತೇನೆ‌ ಎಂದು ತಿಳಿಸಿದರು. ಮೋದಿಜೀ ಮತ್ತು ಬೊಮ್ಮಾಯಿ ಮಾಡಿರುವ ಕೆಲಸವನ್ನು ಎಲ್ಲರೂ ನೆನಪಿನಲ್ಲಿ […]

ತ್ರಿವರ್ಣ ವಿದ್ಯುತ್ ದೀಪಾಲಂಕಾರದಲ್ಲಿ ಝಗಮಗಿಸುತ್ತಿರುವ ಐತಿಹಾಸಿಕ ಗೋಳಗುಮ್ಮಟ

ವಿಜಯಪುರ: ಐತಿಹಾಸಿಕ ವಿಜಯಪುರ ನಗರದಲ್ಲಿರುವ ಗೋಳಗುಮ್ಮಟ ಪ್ರಾಚೀನ ಸ್ಮಾರಕಕ್ಕೆ ತ್ರಿವರ್ಣ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ರಾತ್ರಿ ವೇಳೆ ಝಗಮಗಿಸುತ್ತಿದೆ.  ಆಜಾದಿ ಕಾ ಅಮೃತ ಮಹೋತ್ಸವ ಮತ್ತು ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ 100 ಕೋಟಿ ತಲುಪಿದ ಹಿನ್ನೆಲೆಯಲ್ಲಿ ಈಗ ಐತಿಹಾಸಿಕ ಗೋಳಗುಮ್ಮಟಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.  ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಹಾಗೂ ಎಸ್ಪಿ ಎಚ್. ಡಿ. ಆನಂದ ಕುಮಾರ ಐತಿಹಾಸಿಕ […]

ಮುಸ್ಲಿಂ ಮತದಾರರತ್ತ ಈದ್ ಮೀಲಾದ್ ದಿನ ಚಿತ್ತ ಹರಿಸಿದ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ- ಮೊರಟಗಿ, ಗೊಲಗೇರಿಯಲ್ಲಿ ಭರ್ಜರಿ ಪ್ರಚಾರ

ವಿಜಯಪುರ: ಈದ್ ಮಿಲಾದ್ ದಿನ ಮುಸ್ಲಿಂ ಮತದಾರರತ್ತ ಚಿತ್ತ ಹರಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ನಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಈ ಮೂಲಕ ಬೈ ಎಲೆಕ್ಷನ್ ಪ್ರಚಾರಕ್ಕೆ ಧುಮುಕರಿರುವ ಯಡಿಯೂರಪ್ಪ, ಮೊದಲಿಗೆ ಮೊರಟಗಿ ಮತ್ತು ನಂತರ ಗೊಲಗೇರಿಯಲ್ಲಿ ಬಿರುಸಿನ ಪ್ರಚಾರ ನಡೆಸಿದರು.  ಗೊಲಗೇರಿಯಲ್ಲಿ ಚಿತ್ರನಟಿ ತಾರಾ ಮತ್ತು ಸಚಿವ ಸಿ. ಸಿ. ಪಾಟೀಲ ಹಾಗೂ ಇತರ ಮುಖಂಡರೊಂದಿಗೆ ಯಡಿಯೂರಪ್ಪ ರೋಡ್ ಶೋ ನಡೆಸುವ ಮೂಲಕ ಮತ […]