ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಮುಸ್ಲಿಮರು, ಸಿದ್ಧರಾಮಯ್ಯರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದಾರೆ- ಮಾಜಿ ಸಚಿವ ಜಮೀರ್ ಅಹ್ಮದಖಾನ್ ವಾಗ್ದಾಳಿ

ವಿಜಯಪುರ: ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಅವರ ಒಂದು ಕಾಲದ ಶಿಷ್ಯ ಮತ್ತು ಮಾಜಿ ಸಚಿವ ಜಮೀರ್ ಅಹ್ಮದಖಾನ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಕೇವಲ ಮುಸ್ಲಿಮ್ ಮಾತ್ರವಲ್ಲ ಸಿದ್ಧರಾಮಯ್ಯ ಅವರ ವಿರೋಧಿಯೂ ಆಗಿದ್ದಾರೆ.  ಕುಮಾರಸ್ವಾಮಿಗೆ ಅಲ್ಪ ಸಂಖ್ಯಾತರನ್ನು ಬಲಿ ಮಾಡುವುದೊಂದೆ ಟಾರ್ಗೆಟ್ ಆಗಿದೆ.  ಮುಸ್ಲಿಮರನ್ನು ಮುಗಿಸುವುದು ಅವರ ದುರುದ್ದೇಶವಾಗಿದೆ ಎಂದು ಆರೋಪಿಸಿದರು.

ಅಲ್ಪ ಸಂಖ್ಯಾತರ ಜೊತೆ ಸಿದ್ದರಾಮಯ್ಯ ಅವರಿಗೂ ಕುಮಾರಸ್ವಾಮಿ ಟಾರ್ಗೆಟ್ ಮಾಡುತ್ತಿದ್ದಾರೆ.  ಸಿದ್ದರಾಮಯ್ಯ ಕಾಂಗ್ರೆಸ್ ನಿಂದ ಹೊರ ಹೋದರೆ ಮುಂದೆ ತಮ್ಮದೆ ನಡೆಯುತ್ತದೆ ಎಂದು ಕುಮಾರಸ್ವಾಮಿ ಎಂದು ತಿಳಿದುಕೊಂಡಿದ್ದಾರೆ ಎಂದು ಆಕೋಪಿಸಿದ ಅವರು, ಕುಮಾರಸ್ವಾಮಿ ಎಷ್ಟು ಜನರನ್ನು ಮುಸ್ಮಿಮರನ್ನು ಎಂ ಎಲ್ ಎ ಮಾಡಿದ್ದಾರೆ? ಎಷ್ಟು ಅಲ್ಸಸಂಖ್ಯಾತರನ್ನು ಮಂತ್ರಿ ಮಾಡಿದ್ದಾರೆ? ಇದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಜಮೀರ ಅಹ್ಮದಖಾನ್ ಹೇಳಿದರು.

ನಾನು ಕುಮಾರಸ್ವಾಮಿ ಅವರಿಗೆ ಬಹಳ ಆತ್ಮಿಯನಾಗಿದ್ದೆ.  ಆದರೂ ನನಗೆ ಕೇವಲ ವಕ್ಫ ಮತ್ತು ಹಜ್ ಖಾತೆ ನೀಡಿದರು.  ಈಗ ಹಾನಗಲನಲ್ಲೂ ಮುಸ್ಲಿಂ ಅಭ್ಯರ್ಥಿ ಹಾಕಿದ್ದಾರೆ.  ಈ ಹಿಂದೆ ಬಸವ ಕಲ್ಯಾಣದಲ್ಲೂ ಮುಸ್ಲಿಂ ಅಭ್ಯರ್ಥಿ ಹಾಕಿದ್ದರು.  ಅಲ್ಲಿ ಜೆಡಿಎಸ್ ಗೆ ಸುಮಾರು 11 ಸಾವಿರ ಮತಗಳು ಬಂದಿದ್ದವು.  ಆ ಮತಗಳು ಎಚ್. ಡಿ. ಕುಮಾರಸ್ವಾಮಿ ಅವರಿಂದ ಬಂದಿಲ್ಲ.  ಬದಲಾಗಿ, ಜೆಡಿಎಸ್ ಅಭ್ಯರ್ಥಿಯಾಗಿದ್ದ ದರ್ಗಾವೊಂದರ ಪೀಠಾದಿಪತಿಗಳ ವೈಯಕ್ತಿಕ ವರ್ಚಸ್ಸಿನಿಂದ ಓಟುಗಳು ಬಂದಿವೆ ಎಂದು ಜಮೀರ ಅಹ್ಮದಖಾನ ಸ್ಪಷ್ಟಪಡಿಸಿದರು.

ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಾರ್ವತ್ರಿಕ ಚುನಾವಣೆಯಲ್ಲಿ ಯಾಕೆ ಮುಸ್ಲಿಂ ಅಭ್ಯರ್ಥಿಯನ್ನು ಹಾಕುವುದಿಲ್ ಎಂದು ಪ್ರಶ್ನಿಸಿದ ಅವರು, ಹೈ ಎಲೆಕ್ಷನನಲ್ಲಿ ಮಾತ್ರ ಮುಸ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾರಣವೇನು ಎಂದು ಕೇಳಿದರು.

ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಮುಸ್ಲಿಂ ಸಮುದಾಯದ ಮೇಲೆ ಬಹಳ ಪ್ರೀತಿ ಬಂದಿದೆ.  ಸಿದ್ಧರಾಮಯ್ಯ ಮುಸ್ಲಿಮರ ವಿರೋಧಿಯಲ್ಲ.  ಆದರೆ, ಎಚ್. ಡಿ. ಕುಮಾರಸ್ವಾಮಿ ಅಲ್ಸಸಂಖ್ಯಾತರ ವಿರೋಧಿಯಾಗಿದ್ದಾರೆ. ಈಗ ಬೈ ಎಲೆಕ್ಷನ್ ಗೆ ಮುಸ್ಲಿಮರ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಆರ್ ಎಸ್ ಎಸ್ ಗೆ ಬೈಯ್ಯುತ್ತಿದ್ದಾರೆ.  ಮುಮರ ಮತಗಳಿಗಾಗಿ ಕುಮಾರಸ್ವಾಮಿ ಆರ್ ಎಸ್ ಎಸ್ ಗೆ ಬೈಯುತ್ತಿದ್ದಾರೆ ಎಂದು ಜಮೀರ ಅಹ್ಮದಖಾನ್ ಮಾಜಿ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.

Leave a Reply

ಹೊಸ ಪೋಸ್ಟ್‌