ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ ನಂಬರ್ ಒನ್- ಪ್ರಧಾನಿ ನರೇಂದ್ರ ಮೋದಿ ಸಂಗೊಳ್ಳಿ ರಾಯಣ್ಣನ ಪ್ರತಿರೂಪ- ಸಚಿವ ಕೆ. ಎಸ್. ಈಶ್ವರಪ್ಪ

ವಿಜಯಪುರ: ಕಾಂಗ್ರೆಸ್ ಸುಳ್ಳು ಹೇಳುವುದರಲ್ಲಿ ನಂಬರ್ ಒನ್.  ಪ್ರಧಾನಿ ನರೇಂದ್ರ ಮೋದಿ ಅವರು ಸಂಗೊಳ್ಳಿ ರಾಯಣ್ಣನ ಪ್ರತಿರೂಪವಾಗಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಪ್ರಚಾರದಲ್ಲಿರುವ ಅವರು ಭೀಮಾ ತೀರದ ಬಗಲೂರು ಗ್ರಾಮದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ ನಂಬರ್ ಒನ್ ಸ್ಥಾನದಲ್ಲಿದೆ.  ಗೋಣಿ ಚೀಲದಲ್ಲಿ ಯಾರಾದರೂ ದುಡ್ಡು ಹಂಚಿದ್ದಾರೆ ಎಂದು ಸಿದ್ಧರಾಮಯ್ಯ ಮತ್ತು ಡಿ. ಕೆ. ಶಿವಕುಮಾರ ಹೇಳುತ್ತಿರುವುದನ್ನು ನೀವು ನಂಬಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ದುಡ್ಡಿಗಾಗಿ ವೋಟು ಮಾರಿಕೊಳ್ಳುವ ಜನ ಹಳ್ಳಿ ಜನಗಳಲ್ಲ.  ಸ್ವಾಭಿಮಾನದಿಂದ ಬದುಕಲು ಕಷ್ಟಪಟ್ಟು ದುಡಿದು ನರೇಂದ್ರ ಮೋದಿಗೆ ಮತ ಹಾಕುವ ಜನ ಇಲ್ಲಿದ್ದಾರೆ ಎಂದು ಹೇಳಿದರು.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ, ಕೊಲೆ ಘಟನೆಗಳೂ ನಡೆಯುತ್ತಿವೆ.  ಪಾಕಿಸ್ತಾನದಲ್ಲಿಯೂ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿವೆ.  ಪಾಕಿಸ್ತಾನದಲ್ಲಿ ಹಿಂದೂಗಳು ಸತ್ತರೆ ಇವರಿಗೆ ಏನೂ ನೋವಾಗಲ್ಲ.  ಆದರೆ, ಭಾರತದಲ್ಲಿ ಯಾರಾದರೂ ಮುಸ್ಸಿಮರು ಸತ್ತರೆ ಅವರ ಮನೆಗೆ ಕಾಂಗ್ರೆಸ್ಸಿಗರು ಗುಂಪು ಕಟ್ಟಿಕೊಂಡು ಹೋಗುತ್ತಾರೆ.  ಡಿ. ಕೆ. ಶಿವಕುಮಾರ, ಜಮೀರ ಅಹ್ಮದ, ಎಸ್. ಸಿದ್ಧರಾಮಯ್ಯ ಅವರ ಮನೆಗೆ ಹೋಗುತ್ತಾರೆ.  ಅವರು ಹೋಗುವುದಕ್ಕೆ ನಾನು ಬೇಡ ಎನ್ನುವುದಿಲ್ಲ.  ಭಾರತದಲ್ಲಿ ಯಾವ ಮುಸ್ಲಿಮರ ಮೇಲೂ ಹಲ್ಲೆಯಾಗುವುದನ್ನು ನಾವು ಬಯಸುವುದಿಲ್ಲ. ಆದರೆ, ಸುಮ್ಮಸುಮ್ಮನೆ ಪಾಕಿಸ್ತಾನದಲ್ಲಿ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ಕೊಲೆಯಾಗುತ್ತಿವೆಯಲ್ಲ ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಪ್ರತಿಪಕ್ಷಗಳು ಈ ಬೈ ಎಲೆಕ್ಷನ್ ನಲ್ಲಿ ಅಭಿವೃದ್ಧಿ ವಿಚಾರಗಳನ್ನು ಪ್ರಸ್ತಾಪಿಸಬೇಕಿತ್ತು.  ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ನಾವು ಏನು ಮಾಡಿದ್ದೇವೆ.  ನಿಮ್ಮ ಸರಕಾರ ಇದ್ದಾ ನೀವು ಏನು ಮಾಡಿದ್ದೀರಿ ಎಂಬುದನ್ನು ಪ್ರಸ್ತಾಪಿಸಿ ಉತ್ತಮ ಕೆಲಸ ಮಾಡಿದವರಿಗೆ ಮತ ಹಾಕಿ ಎಂದು ಕೇಳಬೇಕಿತ್ತು.  ಆದರೆ, ಅವರು ಪ್ರಸ್ತಾಪಿಸುತ್ತಿರುವ ವಿಚಾರಗಳು ಸರಿಯಿಲ್ಲ.  ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೆಬ್ಬೆಟ್ಟು ಗಿರಾಕಿ ಎಂದು ಆರೋಪಿಸುತ್ತಾರೆ.  ಆದರೆ, ಪ್ರಧಾನಿ ನರೇಂದ್ರ ಮೋದಿ ಬೇಟಿ ಬಚಾವೋ, ಬೇಟಿ ಪಡಾವು ಯೋಜನೆ ಜಾರಿಗೆ ತರುವ ಮೂಲಕ ಮಹಿಳೆಯರು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಉಚಿತ ಶಿಕ್ಷಣವನ್ನು ಜಾರಿಗೆ ತಂದಿದ್ದಾರೆ ಎಂದು ಅವರು ಹೇಳಿದರು.

ಗೋಣಿ ಚೀಲದಲ್ಲಿ ತಂದು ದುಡ್ಡು ಹಂಚಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ.  ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಏನಾದರೂ ದುಡ್ಡು ಹಂಚಿದ್ದಾರಾ? ಪ್ರಶ್ನಿಸಿದ ಅವರು, ನಮ್ಮ ಅಭ್ಯರ್ಥಿಯ ಅವರಿಗೆ ಯಾರಾದರೂ ದುಡ್ಡು ನೀಡಿದರೆ ಸಾಕಾಗಿದೆ ಎಂದು ಹಾಸ್ಯ ಚಚಾಕಿ ಹಾರಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸಂಗೊಳ್ಳಿ ರಾಯಣ್ಣನ ಪ್ರತಿರೂಪವಾಗಿ ಭಾರತಕ್ಕೆ ಸಿಕ್ಕಿದ್ದಾರೆ.  ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡುವ ಮೂಲಕ ಜನಪ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಎಸ್. ಸಿದ್ಧರಾಮಯ್ಯ ಮುಖ್ಯಮಂತ್ರಿ ಮುಖ್ಯಮಂತ್ರಿಯಾಗಿದ್ದಾಗ ಗೋಹತ್ಯೆ, ಗೋವುಗಳ ಕಳ್ಳತನ ವ್ಯಾಪಕವಾಗಿತ್ತು ಎಂದು ಕೆ. ಎಸ್. ಈಶ್ವರಪ್ಪ ಆರೋಪಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಿಂದಗಿ ಬೈ ಎಲೆಕ್ಷನ್ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ, ಮುಖಂಡರಾದ ರಾಜು ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌