ಎಂ ಎಲ್ ಸಿ ಅರುಣ ಶಹಾಪುರ, ಸಿ. ಟಿ. ರವಿ, ಅಪ್ಪು ಪಟ್ಟಣಶೆಟ್ಟಿ ಅವರಿಂದ ಸಿಂದಗಿ ಮತಕ್ಷೇತ್ರದಲ್ಲಿ ಬಿರುಸಿನ ಪ್ರಚಾರ

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಪ್ರಚಾರ ಬಿರುಸಿನಿಂದ ಸಾಗಿದ್ದು, ಬಿಜೆಪಿ ಮುಖಂಡರ ದಂಡು ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿದೆ. ಸಿಂದಗಿ ಪಟ್ಟಣದಲ್ಲಿ ನಡೆದ ಬೃಹತ್ ರೋಡ್ ಶೋ ನಲ್ಲಿ ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ, ಮಾಜಿ ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿಸೇರಿದಂತೆ ನಾನಾ ಮುಖಂಡರು ತೆರೆದ ವಾಹನದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಸಿಂದಗಿ ಪಟ್ಟಣದಲ್ಲಿರುವ ಶ್ರೀ ಸಂಗಮೇಶ್ವರ ದೇವಸ್ಥಾನದಿಂದ […]

ಕಾಂಗ್ರೆಸ್ ನಾಯಕರಾದ ಕಾಂತಾ ನಾಯಕ, ಬಾಪುಗೌಡ ಪಾಟೀಲ ಮುಂತಾದವರಿಂದ ಸಿಂದಗಿ ಮತಕ್ಷೇತ್ರದಲ್ಲಿ ಬಿರುಸಿನ ಪ್ರಚಾರ

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಪ್ರಚಾರ ಬಿರುಸಿನಿಂದ ಸಾಗಿದ್ದು, ಕಾಂಗ್ರೆಸ್ ನಾಯಕರು ಸಿಂದಗಿ ಮತಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಮಾಜಿ ಸಚಿವ ಮತ್ತು ಹೂವಿನ ಹಡಗಲಿ ಶಾಸಕ ಪಿ. ಟಿ. ಪರಮೇಶ್ವರ ನಾಯಕ, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯಕ, ವಿಧಾನ ಪರಿಷತ ಸದಸ್ಯ ಪ್ರಕಾಶ ರಾಠೋಡ, ಶಿವಕಾಂತಮ್ಮ ನಾಯಕ ಸೇರಿದಂತೆ ನಾನಾ ಮುಖಂಡರು ಸಿಂದಗಿ.ತಾಂಡಾ ಮತ್ತು ದೇವರ ನಾವದಗಿ ತಾಂಡಾಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ವಿಜಯಪುರ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಾಪುಗೌಡ ಎಂ. […]

ಬುದ್ದಿ ಇಲ್ಲದ ಹುಂಬರು, ಒಂದು ಕುಟುಂಬದ ಗುಲಾಮರು ಮಾತ್ರ ಮುಳುಗುತ್ತಿರುವ ಕಾಂಗ್ರೆಸ್ ಎಂಬ ಹಡಗಿನಲ್ಲಿದ್ದಾರೆ- ಸಿ. ಟಿ. ರವಿ ವ್ಯಂಗ್ಯ

ವಿಜಯಪುರ: ಬುದ್ದಿ ಇಲ್ಲದ ಹುಂಬರು, ಒಂದು ಕುಟುಂಬದ ಗುಲಾಮರು ಮಾತ್ರ ಮುಳುಗುತ್ತಿರುವ ಕಾಂಗ್ರೆಸ್ ಎಂಬ ಹಡಗಿನಲ್ಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ವ್ಯಂಗ್ಯವಾಡಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿಗೆ ಬೈ ಎಲೆಕ್ಷನ್ ಪ್ರಚಾರಕ್ಕೆ ಆಗಮಿಸಿರುವ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಮುಳಗುತ್ತಿರುವ ಹಡಗು.  ಮುಳುಗುತ್ತಿರುವ ಹಡಗನ್ನು ಬುದ್ದಿವಂತರೆಲ್ಲ ಬಿಡುತ್ತಿದ್ದಾರೆ.  ದಡ್ಡರೆಲ್ಲ ಬಿಡುತ್ತಿದ್ದಾರೆ.  ಸಿದ್ಧರಾಮಯ್ಯ ಅವರಿಗೆ ಬುದ್ಧಿ ಇದೆ ಎಂದು ಭಾವಿಸುತ್ತೇನೆ.  ಬುದ್ದಿ ಇರುವವರು ಯಾರೂ ಮುಳಗುವ ಹಡಗಿನಲ್ಲಿ ಇರಲ್ಲ.  ಇನ್ನು ಮುಂದಿನದು ನಿಮಗೆ […]

ವಿಧಾನಸೌಧಕ್ಕೆ ಬೀಗ ಹಾಕಿಲ್ಲ ಸಚಿವರು ಮೂರು ಮೂರು ದಿನ ಸಚಿವರು ಬಂದು ಹೋಗುತ್ತಿದ್ದಾರೆ- ಸಿಎಂ ಬಸವರಾಜ ಬೊಮ್ಮಾಯಿ

ವಿಜಯಪುರ: ವಿಧಾನಸೌಧಕ್ಕೆ ಬೀಗ ಜಡಿದು ಸಿಎಂ ಮತ್ತು ಪ್ರಚಾರಕ್ಕೆ ಬರುತ್ತಿದ್ದಾರೆ ಎಂದು ಕಾಂಗ್ರೆಸ್ ಮಾಡಿರುವ ಆರೋಪಕ್ಕೆ ಮುಖ್ಯಮಂತ್ರಿ ಎಸ್. ಆರ್. ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗಡ ಮಾತನಾಡಿದ ಅವರು, ಆ ಥರ ಏನಿಲ್ಲ. ಸಚಿವರು ಎರಡೆರಡು ಮೂರು ಮೂರು ದಿನ ವಿಧಾನಸೌಧಕ್ಕೆ ಬಂದು ಕೆಲಸ ಮಾಡಿ ಹೋಗುತ್ತಿದ್ದಾರೆ ಎಂದು ತಿಳಿಸಿದರು. ಬೈ ಎಲೆಕ್ಷನ್ ಚುನಾವಣೆ ಪ್ರಚಾರ ಹಿನ್ನೆಲಡಯಲ್ಲಿ ಯಾವುದೇ ಸರಕಾರಿ ಕೆಲಸಗಳು ನಿಂತಿಲ್ಲ. ಈ ಹಿಂದೆ ಕಾಂಗ್ರೆಸ್ಸಿನವರು ಏನೇಲ್ಲ ಮಾಡಿದ್ದಾರೆ ಎಂಬುದು ನಮಗೂ ಗೊತ್ತಿದೆ […]

ಅವನು ಕುರುಬರಲ್ಲಿ ಹುಟ್ಟಿದ್ದಾನಾ? ನಾನು ಕುರುಬರಲ್ಲಿ ಹುಟ್ಟಿದ್ದೇನೆ- ಸಿದ್ಧರಾಮಯ್ಯ

ವಿಜಯಪುರ: ಅವನು ಕುರುಬರಲ್ಲಿ ಹುಟ್ಟಿದ್ದಾನಾ? ನಾನು ಕುರುಬರಲ್ಲಿ ಹುಟ್ಟಿದ್ದೇನೆ ರಂದು ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಾವ್ಯಾಕೆ ಪ್ರಾದೇಶಿಕ ಪಕ್ಷಗಳನ್ನು ಮುಗಿಸಬೇಕು. ಅವರ ನಡವಳಿಕೆಗಳಿಂದ, ಅವುಗಳ ತತ್ವ ಸಿದ್ಧಾಂತಗಳಿಂದ ಅವರೇ ಮುಗಿದು ಹೋಗ್ತಾರೆ ಎಂದು ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು. ಎರಡು ರಾಷ್ಟ್ತೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಾದೇಶಿಕ‌ ಪಕ್ಷಗಳನ್ನು ಮುಗಿಸಲು […]

ಕಾಂಗ್ರೆಸ್ ತಾನಾಗಿಯೇ ನಶಿಸಿ ಹೋಗುವ ಕಾಲ ಬಂದಿದೆ- ಮಾಜಿ ಸಚಿವ ಎಚ್. ಡಿ. ರೇವಣ್ಣ

ವಿಜಯಪುರ: ಇಂದು ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ಸನ್ನು ನಾವ್ಯಾರು ತೆಗೆಯಬೇಕಾಗಿಲ್ಲ.  ಅದು ತಾನಾಗಿಯೆ ನಶಿಸಿ ಹೋಗುವ ಕಾಲ ಬಂದಿದೆ ಎಂದು ಮಾಜಿ ಸಚಿವ ಎಚ್. ಡಿ. ರೇವಣ್ಣ ಭವಿಷ್ಯ ನುಡಿದಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಪ್ರಚಾರದಲ್ಲಿರುವ ಅವರು ಸಿಂದಗಿಯಲ್ಲಿ ಸುದ್ದಿಗೋಷ್ಛಿಯಲ್ಲಿ ಮಾತನಾಡಿ, ಇಡೀ ದೇಶದಲ್ಲಿ ನಂಬಿಕೆದ್ರೋಹ ಪಕ್ಷವೆಂದರೆ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು. ಈ ಬೈ ಎಲೆಕ್ಷನ್ ನಲ್ಲಿಯೂ ಕೂಡ ಕಾಂಗ್ರೆಸ್ ಮತ್ತು ಬಿಜೆಪಿ ಒಳಒಪ್ಪಂದ ಮಾಡಿಕೊಂಡಿವೆ.  ಆದರೆ, ಜೆಡಿಎಸ್ ನವರು ಹಣ ಪಡೆದು […]

ಸೋಲಿನ ಹತಾಶೆಯಿಂದಾಗಿ ಬಿಜೆಪಿ ಬೈ ಎಲೆಕ್ಷನ್ ನಲ್ಲಿ ಹಣದ ಹೊಳೆ ಹರಿಸುತ್ತಿದೆ-ಎಂ ಎಲ್ ಸಿ ಪ್ರಕಾಶ ರಾಠೋಡ

ವಿಜಯಪುರ: ಬಿಜೆಪಿ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳಾಗಿವೆ.  ಈ ಬೈ ಎಲೆಕ್ಷನ್ ನಲ್ಲಿ ಸೋಲಿನ  ಹತಾಶೆಯಿಂದಾಗಿ ಬಿಜೆಪಿ ಹಣದ ಹೊಳೆ ಹರಿಸುತ್ತಿದೆ ಎಂದು ವಿಧಆನ ಪರಿಷತ ಕಾಂಗ್ರೆಸ್ ಸದಸ್ಯ ಪ್ರಕಾಶ ರಾಠೋಡ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಬಿ. ವೈ. ವಿಜಯೇಂದ್ರ ವ್ಯಾಪಕ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗಡೌ ಪಾಟೀಲ ಯತ್ನಾಳ ಅವರೇ ಆರೋಪಿಸುತ್ತಿದ್ದಾರೆ.  ಈಗ ಆ ಹಣದ ಪ್ರಭಾವದಿಂದ […]