ಬುದ್ದಿ ಇಲ್ಲದ ಹುಂಬರು, ಒಂದು ಕುಟುಂಬದ ಗುಲಾಮರು ಮಾತ್ರ ಮುಳುಗುತ್ತಿರುವ ಕಾಂಗ್ರೆಸ್ ಎಂಬ ಹಡಗಿನಲ್ಲಿದ್ದಾರೆ- ಸಿ. ಟಿ. ರವಿ ವ್ಯಂಗ್ಯ

ವಿಜಯಪುರ: ಬುದ್ದಿ ಇಲ್ಲದ ಹುಂಬರು, ಒಂದು ಕುಟುಂಬದ ಗುಲಾಮರು ಮಾತ್ರ ಮುಳುಗುತ್ತಿರುವ ಕಾಂಗ್ರೆಸ್ ಎಂಬ ಹಡಗಿನಲ್ಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ವ್ಯಂಗ್ಯವಾಡಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿಗೆ ಬೈ ಎಲೆಕ್ಷನ್ ಪ್ರಚಾರಕ್ಕೆ ಆಗಮಿಸಿರುವ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಮುಳಗುತ್ತಿರುವ ಹಡಗು.  ಮುಳುಗುತ್ತಿರುವ ಹಡಗನ್ನು ಬುದ್ದಿವಂತರೆಲ್ಲ ಬಿಡುತ್ತಿದ್ದಾರೆ.  ದಡ್ಡರೆಲ್ಲ ಬಿಡುತ್ತಿದ್ದಾರೆ.  ಸಿದ್ಧರಾಮಯ್ಯ ಅವರಿಗೆ ಬುದ್ಧಿ ಇದೆ ಎಂದು ಭಾವಿಸುತ್ತೇನೆ.  ಬುದ್ದಿ ಇರುವವರು ಯಾರೂ ಮುಳಗುವ ಹಡಗಿನಲ್ಲಿ ಇರಲ್ಲ.  ಇನ್ನು ಮುಂದಿನದು ನಿಮಗೆ ಬಿಟ್ಟಿದ್ದು.  ಅದರ ಜೊತೆ ಸೇರಿ ಮುಳಗುತ್ತೀರೋ ಅಥವಾ ಲೈಫ್ ಜಾಕೆಟ್ ತೆಗೆದುಕೊಂಡು ಹೊರಗೆ ಬರುತ್ತೀರೋ ನಿಮಗೆ ಬಿಟ್ಟಿದ್ದು.  ತಕ್ಕಡಿ ಮೇಲೆ ಏಳುತ್ತಿಲ್ಲ ಎಂದು ನಾನು ಹೇಳಿಲ್ಲ.  ಇಲ್ಲಿ ಏನು ತಿಪ್ಪರಲಾಗ ಹಾಕಿದರೂ ಪ್ರಯೋಜನವಾಗುತ್ತಿಲ್ಲ.  ಏಕವಚನ ಪ್ರಯೋಗ, ಹೊಸ ಹೊಸ ವರಸೆ ಏನು ಮಾತನಾಡಿದರೂ ಕಾಂಗ್ರೆಸ್ ತಕ್ಕಡಿ ಮೇಲೇಳಲು ಸಾಧ್ಯನೇ ಇಲ್ಲ.  ಏನು ಮಾಡಿದರೂ ನಿಮ್ಮ ತಕ್ಕಡಿ ಮೇಲೆ ಏಳುವುದೇ ಇಲ್ಲ.  ನಿಮ್ಮದೇ ಪಕ್ಷದ :ಮಿಡಿಯಾ ಇನಚಾರ್ಜ್ ವಕ್ತಾರರು ಹೇಳಿರುವ ಮಾತು ಸತ್ಯವಿದೆ.  ಏನು ಮಾಡಿದರೂ ನಿಮ್ಮ ತಕ್ಕಡಿ ಮೇಲೇಳಲ್ಲ.  ನಿಮ್ಮ ಮಾತುಗಳು ಜನರಿಗೆ ಮನರಂಜನೆ ಉಂಟು ಮಾಡುತ್ತವೆ.  ನಾನು ಕೊಟ್ಟೆ ಅನ್ನಭಾಗ್ಯ ಎಂಬುದು ಹಾಸ್ಯಾಸ್ಪದ.  ಕೇಂದ್ರ ಸರಕಾರ ರೂ. 37 ಪ್ರತಿ ಕೆಜಿಯಂತೆ ಅಕ್ಕಿಯನ್ನು ಖರೀದಿ ಮಾಡಿ ರಾಜ್ಯ ರೂ. 3ಕ್ಕೆ ರಾಜ್ಯ ಸರಕಾರಕ್ಕೆ ಕೊಡುತ್ತದೆ.  ಅದನ್ನು ತಮ್ಮ ಯೋಜನೆ ಎಂದು ಹೇಳಿಕೊಳ್ಳುವುದು ಹಾಸ್ಯಾಸ್ಪದ ಎಂದು ವಾಗ್ದಾಳಿ ನಡೆಸಿದರು.

ರಾಜೀವ ಗಾಂಧಿ ಕಾದಲ್ಲಿ ಕೇಂದ್ರದಿಂದ ರೂ. 100 ಕಳುಹಿಸಿದರೆ ಕಟ್ಟಕಡೆಯ ಮನುಷ್ಯನಿಗೆ ತಲುಪುವುದು ಕೇವಲ ರೂ. 17 ಮಾತ್ರ ತಲುಪುತ್ತಿತ್ತು ಎಂದು ರಾಜೀವ ಗಾಂಧಿ ಅವರೇ ಹೇಳಿದ್ದರು.  ಅಂದು ಪಂಚಾಯಿತಿಯಿಂದ ಪಾರ್ಲಿಮಂಟ್ ವರೆಗೂ ಅಧಿಕಾರದಲ್ಲಿ ಇದ್ದದ್ದು ಕಾಂಗ್ರೆಸ್ಸಿಗರೇ.  ಅದಕ್ಕೆ ರಾಜೀವ ಗಾಂಧಿ ಅದನ್ನು ನಿಲ್ಲಿಸುವ ಪ್ರಯತ್ನ ಮಾಡಿರಲಿಲ್ಲ.  ಇಂದು ಸುಮಾರು 300ಕ್ಕೂ ಹೆಚ್ಚು ಯೋಜನೆಗಳ ಪ್ರತಿಯೊಂದು ಪೈಸ ಕಟ್ಟಕಡೆಯ ಮನುಷ್ಯನಿಗೆ ತಲುಪುತ್ತದೆ.  ಮಧ್ಯವರ್ತಿಗಳ ಹಾವಳಿಯಿಲ್ಲ.  ಈಗ ಇಚ್ಛಾಶಕ್ತಿ ಇರುವ ಪ್ರಧಾನ ಮಂತ್ರಿ ಇದ್ದಾರೆ ಎಂದು ಸಿ. ಟಿ. ರವಿ ಹೇಳಿದರು.

ಕಾಂಗ್ರೆಸ್ ಬಗ್ಗೆ ನಾನೇನು ಹೇಳುವ ಅವಶ್ಯಕತೆ ಇಲ್ಲ.  ಬುದ್ದಿವಂತರೆಲ್ಲ ಮುಳಗುವ ಹಡಗನ್ನು ಬಿಟ್ಟು ಸುರಕ್ಷಿತ ಹಡಗು ಬಿಟ್ಟು ಸುರಕ್ಷಿತ ಜಾಗಗಳಿಗೆ ಹೋಗುತ್ತಿದ್ದಾರೆ. ಬುದ್ದಿ ಕಡಿಮೆ ಇರುವವರು, ಹುಂಬತನ ಇರುವವರು ಮಾತ್ರ ಅಲ್ಲಿಯೇ ಉಳಿದುಕೊಂಡಿದ್ದಾರೆ.  ಜ್ಯೋತಿರಾದಿತ್ಯ ಸಿಂಧ್ಯ, ರಿಟಾ ಬಹುಗುಣ, ಜಿತೇಂದ್ರ ಸಿಂಗ್ ಹೀಗೆ ಸಾಲು ಸಾಲು ಜನ ಹೆಚ್ಚು ಕಡಿಮೆ 400ಕ್ಕೂ ಹೆಚ್ಚು ಶಾಸಕರು, ಮಾಜಿ ಶಾಸಕರು, ಸಂಸದರು, ಮಾಜಿ ಸಂಸದರು ಹೀಗೆ ಪಕ್ಷದ ಪ್ರುಮಖ ಜವಾಬ್ದಾರಿ ಹೊತ್ತಿದ್ದವರು ಕಾಂಗ್ರೆಸ್ ಬಿಟ್ಟು ಹೋಗುತ್ತಿದ್ದಾರೆ.  ಯಾರಿಗೂ ಕಾಂಗ್ರೆಸ್ ನೇತೃತ್ವದ ಮೇಲೆ ವಿಶ್ವಾಸವಿಲ್ಲ.  ಸ್ವಲ್ಪ ಬುದ್ದಿ ಇದ್ದವರು ಯಾರೂ ಕಾಂಗ್ರೆಸ್ಸಿನಲ್ಲಿ ಇರಲ್ಲ.  ಒಂದು ಮೂರ್ಖರು ಇಲ್ಲವೇ ಗುಮಾಮರು ಇರುತ್ತಾರೆ. ಒಂದು ಕುಟುಂಬದ ಗುಲಾಮಗಿರಿಗೆ ತಮ್ಮನ್ನು ತಾವು ಮಾರಿಕೊಂಡವರು ಮಾತ್ರ ಇರುತ್ತಾರೆ ಅಥವಾ ಮೂರ್ಖರು ಮಾತ್ರ ಇರುತ್ತಾರೆ.  ಪ್ರಜಾಪ್ರಭುತ್ವಕ್ಕೂ ಕಾಂಗ್ರೆಸ್ಸಿಗೂ ಏನೂ ಸಂಬಂಧವಿಲ್ಲ ಎಂದು ಕಿಡಿ ಕಾರಿದರು.

ಸಿದ್ಧರಾಮಯ್ಯ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ.  ಅವರಿಗೆ ಸಮೀಪ ದೃಷ್ಠಿ ತಮಗೆ ಚೆನ್ನಾಗಿದೆ ಎಂದುಕೊಳ್ಳುತ್ತೇನೆ.  ದೆಹಲಿಯಲ್ಲಿ ಏನು ನಡೆಯುತ್ತಿದೆ ಎಂಬುದು ಕಾಣುತ್ತಿಲ್ಲವಾ? ದೆಹಲಿಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ದೂರದರ್ಶಕ ಹಾಕಿ ನೋಡಬೇಕಾ? ದೆಹಲಿಯಲ್ಲಿಯೂ ಅದೇ ಕುಟುಂಬ ರಾಜಕಾರಣವೇ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಹಾಸ್ಯಾಸ್ಪದ ಸಂಗತಿ ಎಂದರೆ ತಮ್ಮನ್ನು ತಾವೇ ನಾನೇ ಅಧ್ಯಕ್ಷೆ ಎಂದು ಡಿಕ್ಲೇರ್ ಮಾಡಿಕೊಳ್ಳುವ ಉದಾಹರಣೆ  ಡೆಮಾಕ್ರಸಿಯಲ್ಲಿ ಇಲ್ಲ.  ಇತ್ತೀಚೆಗೆ ಕಾಂಗ್ರೆಸ್ಸಿನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮನ್ನು ತಾವೇ ಅಧ್ಯಕ್ಷೆ ಎಂದು ಹೇಳಿಕೊಂಡಿದ್ದು ಪ್ರಜಾಪ್ರಭುತ್ವದ ವ್ಯಂಗವಾಗಿದೆ ಎಂದು ಅವರು ಆರೋಪಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ ಮುಂತಾದವರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌