ಸಿಂದಗಿ ಬೈ ಎಲೆಕ್ಷನ್- ಮಸ್ಟರಿಂಗ್, ಡಿ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಇಂಡಿ ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ, ಸಿಂದಗಿ ತಹಸೀಲ್ದಾರ ಸಂಜೀವಕುಮಾರ ದಾಸರ ಭೇಟಿ, ಪರಿಶೀಲನೆ

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಸಂಬಂಧಿಸಿದಂತೆ ಸಿಂದಗಿ ಪಟ್ಚಣದ ಆರ್. ಡಿ  ಪಾಟೀಲ ಕಾಲೇಜಿನ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಈ ಚುನಾವಣೆಯಲ್ಲಿ ಸುವ್ಯವಸ್ಥಿತವಾಗಿ ಮತದಾನ ಪ್ರಕ್ರಿಯೆ ನಡೆಸಲು ಸಕಲ ರೀತಿಯಿಂದ ಸಿದ್ಧತೆ ಕೈಗೊಳ್ಳಲಾಗಿದ್ದು, ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಮತಗಟ್ಟೆ ಸಿಬ್ಬಂದಿಗಳಿಗೆ ಕಲ್ಪಿಸಲಾಗಿರುವ ಊಟ ಮತ್ತು ಉಪಹಾರದ ವ್ಯವಸ್ಥೆ ಸೇರಿದಂತೆ ಇತರ ವ್ಯವಸ್ಥೆಗಳ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಚುನಾವಣೆಗೆ […]

ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಿ. ರಂದೀಪ ಅವರಿಂದ ನಾನಾ ಇಲಾಖೆಗಳ ಪ್ರಗತಿ ಪರಿಶೀಲನೆ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸದಂತೆ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ. ರಂದೀಪ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ನಾನಾ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜು, ಜಲಧಾರೆ ಯೋಜನೆ ಅಡಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಶಾಶ್ವತ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.  ಈ ಹಿನ್ನೆಲೆಯಲ್ಲಿ ನೀರಿನ […]

ಪ. ಗು. ಹಳಕಟ್ಟಿ ಸಂಶೋಧನಾ ಕೇಂದ್ರದಿಂದ ಶುಕ್ರವಾರ ವೆಬಿನಾರ್- ಡಾ. ಸ್ಯಾಮ್ ಪಿತ್ರೊಡ ಭಾಗಿ

ವಿಜಯಪುರ: ಭಾರತದ ಸಂಪರ್ಕ ವ್ಯವಸ್ಥೆಯಲ್ಲಿ ಅಭೂತಪೂರ್ವ ಕ್ರಾಂತಿ ಮಾಡಿದವರು ಅಂತಾರಾಷ್ಟ್ರೀಯ ಖ್ಯಾತಿಯ ವಿಜ್ಞಾನಿ ಡಾ. ಸ್ಯಾಮ್ ಪಿತ್ರೋಡಾ. ಅವರು ಇತ್ತೀಚೆಗೆ ರಚಿಸಿರುವ ಕನ್ವರ್ಶೇಷನ್ ಆನ್ ರಿಡಿಸೈನಿಂಗ್ ದಿ ವರ್ಲ್ಡ್: ಗ್ಲೋಬಲ್ ಕಾಲ್ ಟು ಆ್ಯಕ್ಷನ್ ಪುಸ್ತಕದ ಕುರಿತು ವೆಬಿನಾರ ಆಯೋಜಿಸಲಾಗಿದೆ. ವಿಜಯಪುರದ ಪ್ರತಿಷ್ಟಿತ ಬಿ ಎಲ್ ಡಿ ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನೆ ಕೇಂದ್ರ ಈ ವೆಬಿನಾರ ಆಯೋಜಿಸಿದೆ. ಶುಕ್ರವಾರ ಸಂ. 5 ಕ್ಕೆ ಈ ವೆಬಿನಾರ ನಡೆಯಲಿದ್ದು, ಭಾರತದಲ್ಲಿ ಇದೇ […]

ನನ್ನ ತಲೆಯಲ್ಲಿ ಎನಸೈಕ್ಲೋಪೀಡಿಯಾ ಇದೆ ಎಂದ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹೇಳಿದ್ದೇನು ಗೊತ್ತಾ?

ವಿಜಯಪುರ: ಸಿಂದಗಿ ಬೈ ಎಲೆಕ್ಷನ್ ಭರ್ಜರಿ ಪ್ರಚಾರದ ಬಳಿಕ ಮಾಜಿ ಪ್ರಧಾನ ಮಂತ್ರಿ ಎಚ್. ಡಿ. ದೇವೇಗೌಡ ವಿಜಯಪುರ ನಗರದಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ಮಧ್ಯೆ ಮಾಧ್ಯಮ ಪ್ರತಿನಿಧಿಗಳೊಂದಿ ಮಾತನಾಡಿದ ಅವರು, ತಮ್ಮ ಸುದೀರ್ಘ ರಾಜಕೀಯ ಜೀವನದ ಅನೇಕ ಘಟನೆಗಳನ್ನು ಬಹಿರಂಗ ಪಡಿಸಿದ್ದಾರೆ. ತಮ್ಮ ಜೀವನದ ಯಶೋಗಾಥೆ, ಅನುಭವಿಸಿದ ಕಷ್ಟಗಳನ್ನು ಅವರು ಎಳೆಎಳೆಯಾಹಿ ಬಿಚ್ಚಿಟ್ಟಿದ್ದಾರೆ. ಜೀವನದಲ್ಲಿ ಹಂತಹಂತವಾಗಿ ಕಷ್ಟಪಟ್ಟು ಮೇಲೆ ಬಂದಿದ್ದೇನೆ. ‌ಜೀವನದಲ್ಲಿ ಯಾರಿಗೂ ನಾನು ದ್ರೋಹ ಮಾಡಿಲ್ಲ. ನನಗೆ ದೇವರ ಮೇಲೆ ಭಕ್ತಿ ಇದೆ. ಅದಕ್ಕೆ […]

ಕಂಬಳಿ ಹಾಕಿಕೊಂಡ ಸಿಎಂ ಅವರನ್ನು ನೀನೇನು ಕುರುಬನಾ? ಎಂದಿರುವ ಸಿದ್ಧರಾಮಯ್ಯ ತಾವು ಹಿಂದೆ ಟೋಪಿ ಹಾಕಿಕೊಂಡಿದ್ದನ್ನು ನೆನಪಿಸಿಕೊಳ್ಳಲಿ- ಸಚಿವ ಸಿ. ಸಿ. ಪಾಟೀಲ ತಿರುಗೇಟು

ವಿಜಯಪುರ: ಕಂಬಳಿ ಹಾಕಿಕೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅವರೇನು ಕುರುಬನಾ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.  ಈ ಹಿಂದೆ ಅಲ್ಪಸಂಖ್ಯಾತ ಬಂಧುಗಳ ಕಾರ್ಯಕ್ರಮದಲ್ಲಿ ಇದೇ ಸಿದ್ಧರಾಮಯ್ಯ ಟೋಪಿ ಹಾಕಿದ್ದನ್ನು ನೆನಪಿಸಿಕೊಳ್ಳಲಿ ಎಂದು ಲೋಕೋಪಯೋಗಿ, ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ. ಸಿ. ಪಾಟೀಲ ತಿರುಗೇಟು ನೀಡಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಆಡಿರುವ ಮಾತುಗಳಿಗೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ.  ನ. 2 ರಂದು ಫಲಿತಾಂಶ […]

ಪ್ರತಿಪಕ್ಷಗಳ ನಾಯಕರ ಪದಬಳಕೆ ಬಗ್ಗೆ ಬೇಸರವಾಗಿದೆ- ವಸತಿ ಸಚಿವ ವಿ. ಸೋಮಣ್ಣ

ವಿಜಯಪುರ: ಬೈ ಎಲೆಕ್ಷನ್ ನಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ವಾಗ್ದಾಳಿಗಾಗಿ ಬಳಸಿರುವ ಪದಗಳ ಬಗ್ಗೆ ವಸತಿ ಸಚಿವ ವಿ. ಸೋಮಣ್ಣ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸಿಂದಗಿ ಮತ್ತು ಹಾನಗಲ್ ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ದೇಶದಲ್ಲಿ, ವಿದೇಶಗಳಲ್ಲೊ, ಡಿಕ್ಷನರಿ ಯಲ್ಲಿ ಇಲ್ಲದೇ ಇರುವ ಎಲ್ಲ ಪದಗಳನ್ನು ಬಳಸಿದ್ದಾರೆ. ಬೈ ಎಲೆಕ್ಷನಗ ಗಾಗಿ ಏನೇಲ್ಲಾ ಮಾತನಾಡಿದ್ದಾರೆ. ‌ರಾಜ್ಯದ ಬಗ್ಗೆ, ರಾಷ್ಟ್ರದ ಬಗ್ಗೆ ಇರೋದು ಇಲ್ದೆ ಇರೋದು ಎಲ್ಲವನ್ನು‌ ಮಾತನಾಡಿದ್ದಾರೆ ಎಂದು ಆಕ್ರೋಶ […]