ಸ್ವಂತ ಖರ್ಚಿನಲ್ಲಿ ಒಳಚರಂಡಿ ದುರಸ್ತಿಗೆ ಸಹಾಯ ಮಾಡಿದ ಮಾಜಿ ಕಾರ್ಪೋರೇಟರ್ ಗೆ ಬಡಾವಣೆಗಳ ನಿವಾಸಿಗಳಿಂದ ಸನ್ಮಾನ

ವಿಜಯಪುರ: ವಿಜಯಪುರ ನಗರದ ವಿದ್ಯಾನಗರ ಮತ್ತು ರಹೀಮ ನಗರ ಪ್ರದೇಶದಲ್ಲಿ ಸಮಸ್ಯೆಗೆ ಕಾರಣವಾಗಿದ್ದ ಒಳಚರಂಡಿ ದುರಸ್ಥಿಗೆ ಮಾಜಿ ಕಾರ್ಪೋರೇಟರ್ ಅಬ್ದುಲ್ ರಜಾಕ್ ಹೊರ್ತಿ ವೈಯಕ್ತಿವಾಗಿ ಸಹಾಯ ಮಾಡಿದ್ದರು. 

ಈ ಸಮಸ್ಯೆ ಬಗೆಹರಿಸಿದ ಹಿನ್ನೆಲೆಯಲ್ಲಿ ವಿದ್ಯಾನಗರ ಮತ್ತು ರಹೀಮ ನಗರ ನಿವಾಸಿಗಳು ಅಬ್ದುಲ್ ರಜಾಕ್ ಹೊರ್ತಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮನೋವೈದ್ಯ ಡಾ. ಎಸ್. ಎನ್. ಅತ್ತಾರ, ಕುಲಕರ್ಣಿ ಮತ್ತು ವಿದ್ಯಾನಗರ ಹಾಗೂ ರಹೀಮ ನಗರ ಬಡಾವಣೆ ನಿವಾಸಿಗಳು ಉಪಸ್ಥಿತರಿದ್ದು, ಹೊರ್ತಿಯವರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

Leave a Reply

ಹೊಸ ಪೋಸ್ಟ್‌