ರಾಜ್ಯಪಾಲರನ್ನು ಭೇಟಿ ಮಾಡಿ ಗೌರವಿಸಿದ ರಾಷ್ಟ್ರ ಯುವ ಪ್ರಶಸ್ತಿ ವಿಜೇತರ ಸಂಘದ ಅಧ್ಯಕ್ಷ ಜಾವೇದ ಜಮಾದಾರ

ವಿಜಯಪುರ: ವಿಜಯಪುರಕ್ಕೆ ಭೇಟಿ ನೀಡಿದ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರನ್ನು ನ್ಯಾಷನಲ್ ಅವಾರ್ಡಿ ಫೆಡರೇಷನ್ ಆಫ ಇಂಡಿಯಾದ ಅಧ್ಯಕ್ಷ ವಿಜಯಪುರದ ಜಾವೇದ ಜಮಾದಾರ ಭೇಟಿ ಮಾಡಿದರು. ಈ ವೇಳೆ ಗಣೇಶನ ಪ್ರತಿಮೆ, ಮೈಸೂರು ಪೇಟ ತೊಡಿಸಿ ರಾಜ್ಯಪಾಲರನ್ನು ಹೃದಯಸ್ಪರ್ಶಿಯಾಗಿ ಸನ್ಮಾನಿಸಿದರು.

 

ಈ ಹಿಂದೆ 2017 ರಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಸಚಿವರಾಗಿದ್ದ ಸಂದರ್ಭದಲ್ಲಿ ಥಾವರಚಂದ ಗೆಹ್ಲೋಟ್ ಅವರು ಯುವ ಸಶಕ್ತೀಕರಣ ಅಭಿಯಾನಕ್ಕಾಗಿ ನ್ಯಾಷನಲ್ ಅವಾರ್ಡಿ ಫೆಡರೇಷನ್ ಆಫ ಇಂಡಿಯಾಕ್ಕೆ ರೂ. 50 ಲಕ್ಷ ಅನುದಾನ ನೀಡಿ ಅಭಿಯಾನದ ಯಶಸ್ವಿಯಾಗಿ ಶ್ರಮಿಸಿದ್ದರು.  ಈ ಅಭಿಯಾನ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಜಯಪುರದ ಡಾ. ಜಾವೇದ ಜಮಾದಾರ ಅವರು ಸಹ ಶ್ರಮಿಸಿದ್ದರು.

Leave a Reply

ಹೊಸ ಪೋಸ್ಟ್‌