ಪಿಯು ಮಂಡಳಿಯಲ್ಲಿ ತುಘಲಕ ದರ್ಬಾರ ನಡೆಯುತ್ತಿದೆ- ಸಿಎಂ, ಶಿಕ್ಷಣ ಸಚಿವರು ಗಮನ ಹರಿಸಲಿ- ಆಡಳಿತಾರೂಢ ಬಿಜೆಪಿ ಎಂ ಎಲ್ ಸಿ ಅರುಣ ಶಹಾಪುರ ಆಗ್ರಹ

ವಿಜಯಪುರ: ಪಿಯು ಮಂಡಳಿಯ ಏಕಪಕ್ಷೀಯ ನಿರ್ಣಯದಿಂದ ಬೇಸತ್ತಿರುವ ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಯು ಮಂಡಳಿಯಲ್ಲಿ ತುಘಲಕ ದರ್ಬಾರ ನಡೆಯುತ್ದೆ.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವ ನಾಗೇಶ ಅವರು ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಮದ್ಯಂತರ ಪರೀಕ್ಷೆಯನ್ನು ಬೋರ್ಡ ನಿಂದ ನಡೆಸುತ್ತೇವೆ ಎಂಬ ನಿರ್ಧಾರ ಮಾಡಿದೆ.  ಹಾಗಿದ್ದರೆ ಮಿಡ್ ಟರ್ಮ ಮತ್ತು ಪ್ರಿಪರೇಟರಿ […]

ವಿಜಯಪುರ ನಗರದಲ್ಲಿ ಕೈಗೊಳ್ಳಲಾಗಿರುವ ಅಭಿವೃಧ್ಧಿ ಕಾಮಗಾರಿ ವೀಕ್ಷಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ

ವಿಜಯಪುರ: ವಿಜಯಪುರ ನಗದರಲ್ಲಿ ನಾನಾ ಯೋಜನೆಗಳ ಅಡಿಯಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳನ್ನು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವೀಕ್ಷಿಸಿದರು.  ಲೋಕೋಪಯೋಗಿ ಇಲಾಖೆಯಿಂದ ಮಂಜೂರಾಗಿರುವ ರೂ, 2.25 ಕೋ. ವೆಚ್ಚದ ಡಾ.ಬಾಬು ಜಗಜೀವನರಾಮ ವೃತ್ತದಿಂದ ಇಬ್ರಾಹಿಂ ರೋಜಾ ವರೆಗಿನ ಚರಂಡಿ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದ ಅವರು, ರೂ. 14.80 ಕೋ. ವೆಚ್ಚದಲ್ಲಿ ಡಾ. ಬಾಬು ಜಗಜೀವನರಾಮ ವೃತ್ತದಿಂದ ಸೈನಿಕ ಶಾಲೆ, ಜಿಲ್ಲಾಸ್ಪತ್ರೆ, ನೇತಾಜಿ ಸುಭಾಸಚಂದ್ರ ಭೋಸ್ ವೃತ್ತದವರೆಗಿನ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಈ ಎರಡೂ […]

ಎಂ ಎಲ್ ಸಿ ಷರತ್ತು-ಕಾಂಗ್ರೆಸ್ಸಿಗೆ ಇಕ್ಕಟ್ಟು-ಮುಗಿಯುತ್ತಿಲ್ಲ ಟಿಕೆಟ್ ಬಿಕ್ಕಟ್ಟು

ವಿಜಯಪುರ: ವಿಜಯಪುರ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ದ್ವಿಸದಸ್ಯ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಎಂ ಎಲ್ ಸಿ ಯೊಬ್ಬರ ಹಠಮಾರಿ ದೋರಣೆಯಿಂದಾಗಿ ಕಾಂಗ್ರೆಸ್ಸಿಗೆ ಇಕ್ಕಟ್ಟು ತಂದಿದ್ದು, ಹಾಲಿ ಇಬ್ಬರು ಸದಸ್ಯರನ್ನು ಹೊಂದಿದ್ದರೂ ಟಿಕೆಟ್ ಹಂಚಿಕೆ ಬಿಕ್ಕಟ್ಟು ಮುಂದುವರೆದಿದೆ. ಸದ್ಯಕ್ಕೆ ಮಾಜಿ ಸಚಿವ ಮತ್ತು ಹಾಲಿ ಸದಸ್ಯ ಎಸ್. ಆರ್. ಪಾಟೀಲ್ ಮತ್ತು ಸುನೀಲಗೌಡ ಪಾಟೀಲ್ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಇಬ್ಬರಿಗೂ ಟಿಕೆಟ್ ನೀಡಬೇಕು ಎಂಬ ಕೂಗು ಕಾಂಗ್ರೆಸ್ ನಾಯಕರಲ್ಲಿದೆ. ಆದರೆ ಕೇವಲ ಒಬ್ಬರಿಗೆ ಟಿಕೆಟ್ ನೀಡಬೇಕು. ಅದು […]