ನೇತ್ರ ಶಸ್ತ್ರಚಿಕಿತ್ಸೆಗೊಳಗಾಗಿದ್ದರೂ ವೈದ್ಯರ ಸಲಹೆ ಮೀರಿ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೋಂಡ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ

ಬಾಗಲಕೋಟೆ: ನೇತ್ರ ಶಸ್ತ್ರಚಿಕಿತ್ಸೆಗೊಳಗಾಗಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವೈದ್ಯರ ಸಲಹೆ ಮೀರಿ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದಾರೆ.

ಶುಗರ್ ಕಾಯಿಲೆ ಇರುವ ಸಚಿವ ಗೋವಿಂದ ಕಾರಜೋಳ ಅವರ ಎಡಗಣ್ಣಿಗೆ ಪೊರೆ ಬಂದಿದೆ.  ಹೀಗಾಗಿ ಇದೇ ತಿಂಗಳು ಅಂದರೆ ನ. 12 ರಂದು ಬೆಂಗಳೂರಿನಲ್ಲಿರುವ ನೇತ್ರಧಾಮ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಈ ಶಸ್ತ್ರಚಿಕಿತ್ಸೆಯ ಬಳಿಕ ವೈದ್ಯರು 15 ದಿನಗಳ ಕಾಲ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ.  ಆದರೆ, ವೈದ್ಯರ ಸಲಹೆಯನ್ನು ಮೀರಿ ಗೋವಿಂದ ಕಾರಜೋಳ ಬಾಗಲಕೋಟೆಗೆ ಜನಸ್ವರಾಜ್ ಯಾತ್ರೆಗೆ ಆಗಮಿಸಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಜೊತೆ ಸುದ್ದಿಗೋಷ್ಠಿಯಲ್ಲಿ ಪಾಲ್ಗೋಂಡಿದ್ದಾರೆ.  ಅಷ್ಟೇ ಅಲ್ಲ, ನಂತರ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿಯೂ ಪಾಲ್ಗೋಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

Leave a Reply

ಹೊಸ ಪೋಸ್ಟ್‌