ಕಸಾಪ ಚುನಾವಣೆ: ಹಾಸಿಂಪೀರ ವಾಲಿಕಾರಗೆ 629 ಮತಗಳ ಭಾರಿ ಅಂತರದ ಗೆಲುವು

ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ವಿಜಯಪುರ ನೂತನ ಜಿಲ್ಲಾಧ್ಯಕ್ಷರಾಗಿ ಹಾಸಿಂಪೀರ ವಾಲಿಕಾರ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಮಲ್ಲಿಕಾರ್ಜುನ ಬೆಂಡಿಗೇರಿ ಅವರನ್ನು 629 ಮತಗಳು ಭಾರಿ ಅಂತರದಿಂದ ಸೋಲಿಸಿದ್ದಾರೆ.

ಹಾಸಿಂಪೀರ ವಾಲಿಕಾರ ಅವರ ಪರವಾಗಿ 2490 ಮತಗಳು ಬಂದರೆ, ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ 1861 ಮತಗಳನ್ನು ಪಡೆದರು. ಮತ್ತೋರ್ವ ಅಭ್ಯರ್ಥಿ  ಅಭ್ಯರ್ಥಿ ಮಲ್ಲಿಕಾರ್ಜುನ  ಭೃಂಗಿಮಠ 1176 ಮತಗಳನ್ನು ಪಡೆದರೆ, ಉಳಿದ ಅಭ್ಯರ್ಥಿಗಳಾದ ಕಲ್ಲಪ್ಪ ಯಲ್ಲಪ್ಪಶಿ ವಶರಣ 30 ಮತ್ತು ಶ್ರೀಶೈಲ ಸಿದ್ದಪ್ಪ ಆಳೂರ 15 ಮತಗಳನ್ನು ಪಡೆದರು.  48 ಮತಗಳು ತಿರಸ್ಕೃತವಾಗಿವೆ.

ಬೆಳಿಗ್ಗೆ ನಡೆದ ಚುನಾವಣೆಯಲ್ಲಿ ಒಟ್ಟು 9745 ಮತದಾರರಲ್ಲಿ 5620 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.  ಶೇ. 57.67 ರಷ್ಟು ಮತದಾನವಾಗಿತ್ತು.

Leave a Reply

ಹೊಸ ಪೋಸ್ಟ್‌