ಬುದ್ಧ, ಬಸವ, ಅಂಬೇಡ್ಕರ್, ಮಹಾವೀರರು ಕಾಲಾತೀತರು: ಸಿಎಂ ಬೊಮ್ಮಾಯಿ

ಬೆಂಗಳೂರು: ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಮಹಾವೀರರು ಸಾರ್ವಕಾಲಿಕರು. ಇವರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಹೀಗಾಗಿ ಇವರು ಕಾಲಾತೀತರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿಲ್ಲಿ ವಿಶ್ವ ಬುದ್ಧ ಧಮ್ಮ ಸಂಘ ಮತ್ರಯ ನಾಗಸೇನಾ ಬುದ್ಧ ವಿಹಾರ ವತಿಯಿಂದ 72 ನೇ ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಬೌದ್ಧ ದಾಂಮಾಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.

ಬುದ್ಧನ ಶಕ್ತಿ ಪ್ರಭಾವ, ಶಾಂತಿ ಮತ್ತು ಸಾಧನೆ ಬಹಳ ಮುಖ್ಯ. ಇವರೆಲ್ಲರೂ ಸಾಧಕರು.‌‌ ಸಾವಿನ ನಂತರವೂ ಬದುಕುತ್ತಿದ್ದಾರೆ. ಅವರದ್ದು ತ್ಯಾಗ ಮತ್ತು ಆದರ್ಶದ ಗುಣ ಎಂದು ಸಿಎಂ ಹೇಳಿದರು.

‌‌ನಮ್ಮದು ಪ್ರಜಾಸತ್ತಾತ್ಮಕ ದೇಶ ಎಂದು ಘೋಷಿಸಿಕೊಂಡಿದ್ದೇವೆ. ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ದೇಶಕ್ಕೆ ಅಪಾರ ಕೊಡುಗೆಯನ್ನು ಕೊಟ್ಟಿದ್ದಾರೆ. ಶಾಂತಿ, ಸಮಾನತೆ ಪ್ರಗತಿಯ ಬದುಕನ್ನು ಕೊಟ್ಟಿದ್ದಾರೆ. ಇಂದು ಸ್ವತಂತ್ರವಾಗಿ ವಿಚಾರಗಳ ಅಭಿವ್ಯಕ್ತಿಸುತ್ತಿರುವುದು, ಸರಕಾರಗಳನ್ನು ಆಯ್ಕೆ ಮಾಡುವ ಹಕ್ಕು ಕೊಟ್ಟಿದ್ದು ಬಾಬಾಸಾಹೇಬ ಅಂಬೇಡ್ಕರ ಎನ್ನುವುದನ್ನು ಯಾರೂ ಮರೆಯಬಾರದು ಎಂದು ಹೇಳಿದರು.

 

ಭಗವಾನ್ ಬುದ್ಧ ಪ್ರಪಂಚ ಕಂಡ ಶ್ರೇಷ್ಠ ತತ್ವಜ್ಞಾನಿ. ರಾಜಸತ್ವ ಬಿಟ್ಟು, ಜ್ಞಾನೋದಯ ಪಡೆದು, ಇಡೀ ಪ್ರಪಂಚಕ್ಕೆ ತತ್ವಗಳ ಪ್ರಚಾರ ಮಾಡಿ, ಜಗತ್ತು ಮಾನವ ಕುಲದ ಅಭಿವೃದ್ಧಿಗಾಗಿ ಬದುಕಿ, ಮತ್ತೊಬ್ಬರನ್ನು ಗೌರವಿಸಿ ಸಮಾನತೆಯಿಂದ ಕಂಡು, ಆಸೆಗೆ ಅವಕಾಶವಿಲ್ಲ, ಸೇವೆಗಿದೆ ಇದೆ ಎಂದು ಸಾರಿದ ಪುಣ್ಯಪುರುಷ ಎಂದು ಮುಖ್ಯಮಂತ್ರಿ ಬಣ್ಣಿಸಿದರು.

ಆಧ್ಯಾತ್ಮ, ಲೌಕಿಕ, ವೈಜ್ಞಾನಿಕ, ಸಂಶೋಧನೆಗಳು ವ್ಯಕ್ತಿ ಆಧಾರಿತವಾದದ್ದು. ಜಗತ್ತನ್ನು ಬದಲಾಯಿಸಲು ಏಕೀಕೃತ ಪ್ರಯತ್ನ ಮಾಡಿದ ವ್ಯಕ್ತಿಯಿಂದ ಮಾತ್ರ ಸಾಧ್ಯ. ಅಂಥ ಶ್ರೇಣಿಗೆ ಭಗವಾನ ಬುದ್ಧ ಸೇರಿದ್ದಾರೆ. ಅದೇ ರೀತಿ ಸ್ವತಂತ್ರ ಭಾರತದಲ್ಲಿ ಶಾಶ್ವತವಾಗಿ ಅಶ್ಪ್ರಷ್ಯತೆಯನ್ನು ತೊಡೆದು ಹಾಕಲು ಪಣತೊಟ್ಟು, ಸಂವಿಧಾನದಲ್ಲಿ ಅದಕ್ಕೆ ಅವಕಾಶವನ್ನು ಕಲ್ಪಿಸಿ ಮತ್ತೊಮ್ಮೆ ಬುದ್ಧನ ವಿಚಾರವನ್ನು ಭಾರತದ ಮಣ್ಣಿನಲ್ಲಿ ಬೇರೂರಿಸಿದ್ದು ಡಾ
ಅಂಬೇಡ್ಕರ. ಅವರು ಸಂವಿಧಾನ ಬರೆಯದಿದ್ದರೆ ಈ ದೇಶದಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿತ್ತು. ಶಾಂತಿಯ ಕ್ರಾಂತಿ ಮಾಡಿ ವೈಚಾರಿಕವಾಗಿ, ಅಸಮಾನತೆ ದೂರ ಮಾಡಿದ, ಆಧುನಿಕ ಭಗವಾನ ಬುದ್ಧನ ಮತ್ತೊಂದು ಅವತಾರ ಡಾ. ಅಂಬೇಡ್ಕರ ಎಂದು ಮುಖ್ಯಮಂತ್ರಿಗಳು ಬಣ್ಣಿಸಿದರು.

 

ಅವರ ವಿಚಾರಗಳನ್ನು ಓದಿದಾಗ ಹೆಮ್ಮೆಯಾಗುತ್ತದೆ. ದೂರದೃಷ್ಟಿ, ಆಳವಾದ ಮಾನವೀಯ ಗುಣಗಳು, ಅಬಲರನ್ನು ರಕ್ಷಿಸುವ ಶಕ್ತಿ, ಖಡ್ಗದ ಶಕ್ತಿಗಿಂತ ಅಂಬೇಡ್ಕರ್ ಅವರ ಪೆನ್ ಗಿದ್ದ ಶಕ್ತಿ ಸಾವಿರಾರು ಪಟ್ಟು ಹೆಚ್ಚು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ದೇಶದ ಅಖಂಡತೆ, ಸಮಾನತೆ, ಏಕತೆ, ಎಲ್ಲ ಧರ್ಮಗಳಿಗೆ ಸಮಾನ ಅವಕಾಶಗಳು ಸಂವಿಧಾನದ ಪೀಠಿಕೆಯಲ್ಲಿದೆ. ‌ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಂವಿಧಾನ ನನ್ನ ಧರ್ಮ ಗ್ರಂಥ ಎಂದು ಹೇಳಿದರು. ಸಂವಿಧಾನ ದಿನಾಚಾರಣೆಯನ್ನು ಘೋಷಣೆ ಮಾಡುವ ಮೂಲಕ ಸಂವಿಧಾನದ ಕುರಿತು ಅವರಿಗಿರುವ ಬದ್ಧತೆಯನ್ನು ತೋರುತ್ತದೆ. ಡಾ.‌ ಬಾಬಾಸಾಹೇಬ ಅಂಬೇಡ್ಕರ್ ಅವರ ಜನ್ಮಸ್ಥಳ, ಕರ್ಮಭೂಮಿ, ಧರ್ಮಭೂಮಿಗಳು ಸೇರಿದಂತೆ ಅವರ ಸ್ಮಾರಕಗಳನ್ನು ನಿರ್ಮಿಸಿ ಗೌರವ ಹೆಚ್ಚಿಸಿದ್ದಾರೆ. ಅಲ್ಲದೇ, ಅಂಬೇಡ್ಕರ್ ಜಾಲವನ್ನು ರಚಿಸಿ ಅಲ್ಲಿಗೆ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸಿ ಸಾವಿರಾರು ಭಕ್ತರು ಭೇಟಿ ಕೊಡಲು ಪ್ರಧಾನಿಗಳು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.

ಅಂಬೇಡ್ಕರ ವಿಚಾರಧಾರೆಯನ ಅನುಷ್ಠಾನ

ಪ್ರತಿಯೊಬ್ಬ ನಾಗರಿಕರೂ ಬಾಬಾಸಾಹೇಬ್ಲ ಅಂಬೇಡ್ಕರ್ ಅವರಿಗೆ ಋಣಿಯಾಗಿರಬೇಕು. ಪ್ರತಿಯೊಬ್ಬ ಭಾರತದ ನಾಗರಿಕನೂ ಅವರ ವಿಚಾರಧಾರೆಯನ್ನು ಅನುಷ್ಠಾನ ಮಾಡುವ ಮೂಲಕ ಅಂಬೇಡ್ಕರ್ ಅವರನ್ನು ಸದಾಕಾಲ ಹೃದಯಮಂದಿರದಲ್ಲಿ ಇಟ್ಟುಕೊಂಡಾಗ ಋಣ ತೀರಿಸಿದಂತಾಗುತ್ತದೆ.‌ ದಲಿತ ಸಮಾಜಕ್ಕೆ ಇಂದಿಗೂ ಪೂರ್ಣ ಪ್ರಮಾಣದ ನ್ಯಾಯ ದೊರೆತಿಲ್ಲ. ರಾಜಕೀಯವಾಗಿ ಸಾಮಾಜಿಕವಾಗಿ ಅಂಬೇಡ್ಕರ್ ಅವರು ತೋರಿದ ಬದ್ಧತೆಯ ಕೊರತೆ ಅಸಮಾನತೆ ಮುಂದುವರೆಯಲು ಕಾರಣವಾಗಿದೆ. ನಮಗೆ ರಾಜಕೀಯ, ಸ್ವಾತಂತ್ರ್ಯ ದೊರಕಿದೆ. ಆದರೆ, ಶೈಕ್ಷಣಿಕ ಹಾಗೂ ಆರ್ಥಿಕ ಸ್ವತಂತ್ರ ದೊರಕುವವರೆಗೂ ನ್ಯಾಯ ಸಿಗುವುದಿಲ್ಲ. ಶಿಕ್ಷಣ, ಉದ್ಯೋಗ ಹಾಗೂ ಸಬಲೀಕರಣದ ಸಾಧನೆಯನ್ನು ಸಮಾಜ ಸರಕಾರ ಎರಡೂ ಮಾಡಬೇಕಿದೆ. ಈ ದಿಕ್ಕಿನಲ್ಲಿ ದಾಪುಗಾಲಿನ ಹೆಜ್ಜೆಗಳನ್ನಿಡಬೇಕಿದೆ. ಈ ಕೆಲಸ ಕೇವಲ ಮಾತಿನಿಂದಲ್ಲ, ಕೃತಿಯಲ್ಲಿ ಆಗಬೇಕು. ‌ಇಂದಿನ ಅಗತ್ಯಗಳಿಗೆ ತಕ್ಕಂತೆ ಯುವಕರನ್ನು ಸಿದ್ದಗೊಳಿಸಬೇಕು. ಆದ್ದರಿಂದ ಶಿಕ್ಷಣಕ್ಕೆ ಅತಿ ಹೆಚ್ಚು ಪ್ರೋತ್ಸಾಹ ನೀಡಿ, ಮಕ್ಕಳನ್ನು ವಿದ್ಯಾವಂತರಾಗಿಸಿ ಶೈಕ್ಷಣಿಕ ಕ್ರಾಂತಿ ತರಲು ನಮ್ಮ ಸರಕಾರ ಬದ್ಧವಾಗಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಕಾರ್ಯಕ್ರಮಗಳಿಗೆ ಇನ್ನಷ್ಟು ಶಕ್ತಿಯನ್ನು ತುಂಬಿ, ಹೊಸ ಯೋಜನೆಗಳನ್ನು ಜಾರಿಗೆ ತಂದು ಈ ಸಮುದಾಯದ ಮಕ್ಕಳು ವಿಶ್ವಮಟ್ಟದಲ್ಲಿ ಎಲ್ಲರೊಂದಿಗೆ ಪೈಪೋಟಿ ಮಾಡಲು ಅವರನ್ನು ಸಿದ್ಧಗೊಳಿಸಿ, ಆರ್ಥಿಕತೆ, ಕೌಶಲ್ಯ,‌ ಉದ್ಯೋಗಾವಕಾಶಗಳನ್ನು ಸೃಜಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಅಮೃತ ಕೌಶಲ್ಯ ಯೋಜನೆ

ಖಾಸಗಿ ವಲಯದಲ್ಲಿ ಉದ್ಯೋಗ ದೊರಕಲು ಅಗತ್ಯವಿರುವ ಕೌಶಲ್ಯ ಅಭಿವೃದ್ಧಿಗೆ ಸರಕಾರ ಯೋಜನೆ ರೂಪಿಸಿದೆ. 75000 ಎಸ್.ಸಿ ಮತ್ತಿಲು ಎಸ್.‌ ಟಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಒಂದೇ ವರ್ಷದಲ್ಲಿ ಕೌಶಲ್ಯ ಪಡೆದು ಉದ್ಯೋಗಸ್ಥರಾಗಲು ಅಮೃತ ಕೌಶಲ್ಯ ಯೋಜನೆ ಘೋಷಿಸಿದೆ. ಈಗಾಗಲೇ 35 ಸಾವಿರ ಮಕ್ಕಳು ನೋಂದಣಿಯಾಗಿ ತರಬೇತಿ ಪಡೆಯುತ್ತಿದ್ದಾರೆ. ರಾಜ್ಯದ ಒಟ್ಟು ತಲಾವಾರು ಆದಾಯದಲ್ಲಿ ಎಸ್.ಸಿ ಮತ್ತಿ ಎಸ್. ಟಿ. ಸಮುದಾಯದವರು ಪಾಲ್ಗೊಳ್ಳಬೇಕು. ಹೊಲ, ಮನೆಗಳಲ್ಲಿ ಕೆಲಸ ಮಾಡುವ ಎಸ್ ಸಿ ಮತ್ತು ಎಸ್. ಟಿ. ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ನೀಡುವ ವಿಶೇಷ ಕಾರ್ಯಕ್ರಮವನ್ನು ರಾಜ್ಯ ಸರಕಾರ ರೂಪಿಸಲಿದೆ ಎಂದು ಅವರು ತಿಳಿಸಿದರು.

ಎಲ್ಲ ವಲಯಗಳಲ್ಲಿ ಅವಕಾಶಗಳು

ಲ್ಲ ವಲಯಗಳಲ್ಲಿ ಅವಕಾಶಗಳು ದೊರಕಬೇಕು. ಈ ನಿಟ್ಟಿನಲ್ಲಿ ಸರಕಾರ ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ಕೈಗೊಂಡು ಅಂಬೇಡ್ಕರ ಅವರಿಗೆ ಸರಕಾರ ಗೌರವ ಸಲ್ಲಿಸುತ್ತದೆ. ಸಂಘಟನೆ, ಶಿಕ್ಷಣ, ಹೋರಾಟ ಎಂಬ ಅಂಬೇಡ್ಕರ್ ಅವರ ಮಾರುಗಳನ್ನು ಸ್ಮರಿಸೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಡಾ. ಎಂ ವೆಂಕಟಸ್ವಾಮಿ, ಛಲವಾದಿ ನಾರಾಯಣಸ್ವಾಮಿ, ನಾನಾ ಮಠಾಧಿಪತಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌