ವಿಜಯಪುರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಹಣೆಪಟ್ಟಿಯಿಂದ ಶಾಶ್ವತವಾಗಿ ಅಳಿಸಿ ನೀರಾವರಿ ಕಲ್ಪಿಸಿ ಋಣ ತೀರಿಸುತ್ತೇನೆ- ಮಾಜಿ ಸಚಿವ ಎಂ. ಬಿ. ಪಾಟೀಲ

ವಿಜಯಪುರ: ವಿಜಯಪುರ  ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂಬ ಹಣೆಪಟ್ಟಿಯಿಂದ ಶಾಶ್ವತವಾಗಿ ತೆಗೆದುಹಾಕಿ ಜನರು ಸಮೃದ್ಧಿ ಮತ್ತು ನೆಮ್ಮದಿಯಿಂದ ಬಾಳುವಂತ ಜಿಲ್ಲೆಯನ್ನಾಗಿ ಮಾಡುವ ಸಂಕಲ್ಪ ಹೊಂದಿದ್ದೇನೆ. ಈ ಮೂಲಕ ಜನರ ಋಣ ತೀರಿಸುತ್ತೇನೆ ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರದಲ್ಲಿ ನಡೆದ ಬಬಲೇಶ್ವರ, ವಿಜಯಪುರ ಮತ್ತು ನಾಗಠಾಣ ವಿಧಾನಸಭೆ ಕ್ಷೇತ್ರದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.ಈ ಹಿಂದೆ ಈ ಭಾಗಕ್ಕೆ ಹೆಣ್ಣು ಕೊಡಲು ಬೇರೆ ಭಾಗದವರು ಹಿಂಜರಿಯುತ್ತಿದ್ದರು.  ಕುಡಿಯುವ ನೀರಿಗೆ ಅಷ್ಟೇ […]

ಕಾಣೆಯಾಗಿದ್ದ ಬಾಲಕ ನೀರಿನ ಕೆಸರಿನಲ್ಲಿ ಪತ್ತೆ- ಮುಂದೇನಾಯ್ತು ನೋಡಿ

ವಿಜಯಪುರ: ಇದು ಮನ ಮಿಡಿಯುವ ಸ್ಟೋರಿ. ತನಗಾದ ಪರಿಸ್ಥಿಯ ಬಗ್ಗೆ ಅರಿವಿಲ್ಲದೇ ಪರಿತಪಿಸುತ್ತಿದ್ದ ಬಾಲಕನ ಅಮಾಯಕ ಪರಿಸ್ಥಿತಿಗೆ ಸಾಕ್ಷಿ. ಅಷ್ಟಕ್ಕೂ ಆಗಿದ್ದೇನೆಂದರೆ, ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ಮನೆಯಿಂದ ಕಾಣೆಯಾಗಿದ್ದ. ಮನೆಯವರು ಹುಡುಕಾಡಿದರೂ ಸಿಕ್ಕಿರಲಿಲ್ಲ. ಆತನ ಪೋಷಕರು ಮತ್ತು ಸಂಬಂಧಿಕರ ಆತಂಕ ಹೆಚ್ಚಾಗಿತ್ತು. ಈ ಘಟನೆ ನಡೆದಿದ್ದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬನೋಶಿ ಗ್ರಾಮದಲ್ಲಿ. ನಿನ್ನೆ ಮಧ್ಯಾಹ್ನ ಮನೆಯಿಂದ ಹೊರ ಹೋಗಿದ್ದ ಬಾಲಕ ಸಂಜೆಯಾದರೂ ಮನೆಗೆ ಮರಳಿರಲಿಲ್ಲ. ಮೇಲಾಗಿ ಮಾನಸಿಕ ಅಸ್ವಸ್ಥ ಬೇರೆ. ಎಲ್ಲಿದ್ದಾನೋ? ಹೇಗಿದ್ದಾನೋ ಎಂಬ […]