ನೈಜಿರಿಯನ್ ಆನಲೈನ್ ವಂಚಕನನ್ನು ಗುಜರಾತಿನಲ್ಲಿ ಬಂಧಿಸಿದ ಬಸವ ನಾಡಿನ ಪೊಲೀಸರು

ವಿಜಯಪುರ: ವಿಜಯಪುರ ಸಿಇಎನ್ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಆನಲೈನ್ ಮೂಲಕ ವಂಚಿಸುತ್ತಿದ್ದ ನೈಜಿರಿಯನ್ ಪ್ರಜೆಯನ್ನು ಬಂಧಿಸಿದ್ದಾರೆ.‌‌ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ನಿವಾಸಿ ಕಿರಣ ಕಲ್ಲಪ್ಪ ದೇಸಾಯಿ ಎಂಬುವರಿಗೆ ಆಯಿಲ್ ವ್ಯವಹಾರ ಮಾಡುವುದಾಗಿ ಹೇಳಿ ಆನ್‌ಲೈನ್ ಮೂಲಕ ಲಕ್ಷಾಂತರ‌ ರೂಪಾಯಿ ವಂಚಿಸಿದ್ದ. ಈ ಕುರಿತು ತನಿಖೆ ಕೈಗೊಂಡ ವಿಜಯಪುರ ಸೈಬರ್ ಕ್ರೈಂ, ಆರ್ಥಿಕ ಅಪರಾಧ ಮತ್ತು ಮಾದಕ ದ್ರವ್ಯ ಘಟಕದ(ಸಿಇಎನ್) ಸಿಪಿಐ ಸುರೇಶ ಬೆಂಡೆಗುಂಬಳ ನೇತೃತ್ವದ ಪೊಲೀಸರ ತಂಡ ಆರೋಪಿಯನ್ನು ಗುಜರಾಜಿನ ಜಾಮನಗರದಲ್ಲಿ ಬಂಧಿಸಿ ಕರೆತಂದಿದೆ. ನೈಜೀರಿಯ […]