ಸುನೀಲಗೌಡ ಪಾಟೀಲ ಚುನಾವಣೆ ರಾಜಕೀಯಕ್ಕೆ ಬರಲು ಕಾರಣವನ್ನು ಬಿಚ್ಚಿಟ್ಟ ಮಾಜಿ ಸಚಿವ ಎಂ. ಬಿ. ಪಾಟೀಲ

ವಿಜಯಪುರ: ತಮ್ಮ ಸಹೋದರ ಮತ್ತು ವಿಧಾನ ಪರಿಷತ ಸದಸ್ಯ ಹಾಗೂ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಅವರನ್ನು ರಾಜಕೀಯಕ್ಕೆ ಕರೆತರಲು ಇಷ್ಟವಿರಲಿಲ್ಲ ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದ ವಿಧಾನ ಪರಿಷತ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಸಹೋದರ ರಾಜಕೀಯಕ್ಕೆ ಬರಲು ಏನು ಕಾರಣ ಎಂಬುದನ್ನು ಬಹಿರಂಗ ಪಡಿಸಿದರು. 2018ರಲ್ಲಿ ಯತ್ನಾಳ ರಾಜೀನಾಮೆಯಿಂದಾಗಿ ವಿಧಾನ ಪರಿಷತ್ತಿಗೆ ಬೈ ಎಲೆಕ್ಷನ್ ನಡೆದಿತ್ತು.  ಈ ಚುನಾವಣೆಯಲ್ಲಿ ಸುನೀಲಗೌಡ ಪಾಟೀಲ […]