ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ವಿಚಾರ- ಆಯೋಗದ ವರದಿ ಸಲ್ಲಿಕೆಯ ನಂತರ ಕ್ರಮ: ಸಿಎಂ

ಬೆಳಗಾವಿ: ಹಿಂದುಳಿದ ವರ್ಗಗಳ ಆಯೋಗವು ವರದಿ ನೀಡಿದ ನಂತರ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಕುರಿತಂತೆ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರುಗಳು ಮತ್ತು ಸಮಾಜದ ಶಾಸಕರೊಂದಿಗೆ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವ ಬಗ್ಗೆ ಚರ್ಚಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನ್ವಯ ಸಂವಿಧಾನಾತ್ಮಕವಾಗಿ ಪರಿಶೀಲಿಸಲಾಗುವುದು. […]

ಬಸವ ನಾಡಿನಲ್ಲಿ ಹೃದಯಸ್ಪರ್ಷಿ ಘಟನೆ- ಕಲಿಸಿದ ಗುರು ವರ್ಗಾವಣೆಯಾಗಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತು ಬೀಳ್ಕೋಟ್ಟ ಮಕ್ಕಳು

ಮಹೇಶ ವಿ. ಶಟಗಾರ ವಿಜಯಪುರ: ಗುರು-ಶಿಷ್ಯರ ಸಂಬಂಧ ಈ ಹಿಂದಿನಂತಿಲ್ಲ ಎಂಬ ಮಾತು ಆಗಾಗ ಕೇಳಿ ಬರುತ್ತಲೇ ಇರುತ್ತದೆ.  ಆದರೆ, ಗುರುಗಳೆಂದರೆ ಗುರುಗಳೇ.  ಶಿಷ್ಯಂದಿರಿಗೆ ತಮ್ಮ ಗುರುಗಳ ಬಗ್ಗೆ ಈಗಲವೂ ಅದೇಷ್ಟು ಗೌರವ, ಪ್ರೀತಿ, ಭಾವನಾತ್ಮಕ ಸಂಬಂಧ ಇದೆ ಎಂಬುದಕ್ಕೆ ಸಾಕ್ಷಿ ಎಂಬಂತಿದೆ ಬಸವ ನಾಡಿನಲ್ಲಿ ನಡೆದ ಈ ಘಟನೆ. ಶಿಕ್ಷಕರೊಬ್ಬರು ಕಾರ್ಯಕ್ರಮ ನಂತರ ಮುಂದಿನ ಪಯಣಕ್ಕೆ ಸಜ್ಜಾಗಿ ತಮ್ಮ ಬೈಕ್ ಹತ್ತಿ ಹೊರಡಲು ಸಿದ್ಧರಾಗಿದ್ದರು.  ಆಗ, ಸುತ್ತಮುತ್ತಲಿದ್ದ ವಿದ್ಯಾರ್ಥಿಗಳ ಭಾವೋದ್ವೇಗ ತಡೆಯಲಾರದೇ ಬಿಕ್ಕಿ ಬಿಕ್ಕಿ ಅಳಳಾರಂಭಿಸಿದರು.  […]