ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ನೂತನ ಪದಾಧಿಕಾರಿಗಳ ಪದಗ್ರಹಣ

ವಿಜಯಪುರ: ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವಿಜಯಪುರದಲ್ಲಿ ನಡೆಯಿತು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ‌ ಪ್ರೊ. ರಾಜು ಆಲಗೂರ ನಾನಾ ಘಟಕಗಳ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ ನೀಡಿದರು.   ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ. ರಾಜು ಆಲಗೂರ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿರ್ದೇಶನದಂತೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಅವರು ನೂತನ ಪದಾಧಿಕಾರಿಗಳ ಪಟ್ಟಿಗೆ ಅನುಮೋದನೆ ನೀಡಿದ್ದಾರೆ […]

ಹಲಸಂಗಿ ಗೆಳೆಯರ ಸಾಹಿತ್ಯವನ್ನು ವಿಶ್ವಮಟ್ಟಕ್ಕೆ ಪರಿಚಯಿಸುವ ಕೆಲಸ ಆಗಬೇಕಿದೆ- ಕಲಬುರಗಿ ವಿವಿ ಡಾ. ಎಚ್. ಟಿ. ಪೋತೆ

ವಿಜಯಪುರ: ಹಲಸಂಗಿ ಗೆಳೆಯರ ಶ್ರೇಷ್ಠ ಸಾಹಿತ್ಯವನ್ನು ವಿಶ್ವ ಮಟ್ಟಕ್ಕೆ ಪರಿಚಯಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಅವರ ಸಾಹಿತ್ಯವನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಲು ಜಿಲ್ಲಾಡಳಿತ ಹಾಗೂ ಸರಕಾರ ಪ್ರಯತ್ನಿಸಬೇಕು ಎಂದು ಕಲಬುರಗಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಮತ್ತು ನಿರ್ದೇಶಕ ಡಾ. ಎಚ್. ಟಿ. ಪೋತೆ ಹೇಳಿದ್ದಾರೆ‌. ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ವಿಚಾರ ಸಂಕಿರಣ ಮತ್ತು ಭಾವಚಿತ್ರಗಳ […]

ಭಕ್ತಿಯ ಪರಾಕಾಷ್ಠೆ- ಒಂದು ಕಿ. ಮೀ. ಉದ್ದದ ಹಗ್ಗವನ್ನು ಗದ್ದಕ್ಕೆ ತೂತು ಹಾಕಿ ಹೊರಗೆಳೆದ ಪುರವಂತಿಗ

ಮಹೇಶ ವಿ. ಶಟಗಾರ ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆ ಶರಣರ ನಾಡು, ಸೂಫಿ ಸಂತರ ಬೀಡು ಮಾತ್ರವಲ್ಲ ಧಾರ್ಮಿಕ ಆಚರಣೆ, ಪಾರಂಪರಿಕ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಬಂದಿರುವುದಕ್ಕೂ ಸಾಕ್ಷಿಯಾಗುತ್ತಲೇ ಬಂದಿದೆ.  ಇಂಥ ಪಾರಂಪರಿಕ ಆಚರಣೆಯ ಸಂದರ್ಭದಲ್ಲಿ ಅನೇಕ ಗಮನಾರ್ಹ ಸಾಧನೆಗಳೂ ಹೊರ ಬರುತ್ತಲೇ ಇವೆ.  ನಗರ ಪ್ರದೇಶಗಳ ಕ್ರೀಡೆಗಳು ಒಂದೆಡೆಯಾದರೆ, ಗ್ರಾಮೀಣ ಸೊಗಡು ಮತ್ತು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿರುವ ಶಕ್ತಿ ಪ್ರದರ್ಶನಕ್ಕೂ ಇಲ್ಲಿನ ಆಚರಣೆಗಳು ಕಾರಣವಾಗುತ್ತಿವೆ. ಇಂಥದ್ದೆ ವಿಶೇಷ ಮತ್ತು ಎಲ್ಲರೂ ಹುಬ್ಬೇರಿಸುವಂಥ ವಿಶಿಷ್ಠ ಸಾಧನೆಯೊಂದು […]

ಗುಮ್ಮಟ ನಗರಿಯಲ್ಲಿ ಎಮ್ಮೆ ಕಳ್ಳರ ಬಂಧನ- ಎಮ್ಮೆ, ಕರುಗಳ ವಶ

ವಿಜಯಪುರ: ಗುಮ್ಮಟ ನಗರಿಯಲ್ಲಿ ಇತ್ತಿಚೆಗೆ ಹೆಚ್ಚಾಗಿ ನಡೆಯತ್ತಿದ್ದ ಎಮ್ಮೆ ಕಳ್ಳತನ ಪ್ರಕರಣಗಳನ್ನು ವಿಜಯಪುರ ನಗರದ ಜಲನಗರ ಪೊಲೀಸರು ಭೇದಿಸಿದ್ದಾರೆ. ಒಟ್ಟು ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರು ಜನ ಕಳ್ಳರನ್ನು ಬಂಧಿಸಿರುವ ಜಲನಗರ ಪೊಲೀಸರು, ಆರೋಪಿಗಳಿಂದ ರೂ. 7 ಲಕ್ಷ ಮೌಲ್ಯದ 11 ಎಮ್ಮೆ ಮತ್ತು ಕರುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ವಿಜಯಪುರ ನಗರದ ಜಲನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮೂರು ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ವಿಜಯಪುರ ನಗರದ ಹೊರವಲಯದ ಬೇಗಂ ತಾಲಾಬ್ ದೊಡ್ಡಿ ನಿವಾಸಿಗಳಾದ ಶ್ರೀಕಾಂತ ತಂದೆ ಲಕ್ಷ್ಮಣ ಉರ್ಫ […]