ಟ್ರ್ಯಾಕ್ಟರ್ ಅಲ್ಲ, ಕಾರು ಬಳಸಿ ರಾಶಿ ಮಾಡಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಕಂಡುಕೊಂಡ ರೈತ

ವಿಜಯಪುರ: ಐತಿಹಾಸಿಕ ವಿಜಯಪುರ ಜಿಲ್ಲೆಯ ರೈತರು ಸದಾ ಒಂದಿಲ್ಲೋಂದು ಪ್ರಯೋಗವನ್ನು ಮಾಡುತ್ತಲೇ ಇರುತ್ತಾರೆ.  ಕಾರ್ಮಿಕರ ಸಮಸ್ಯೆ ನೀಗಿಸಲು ತರಹೇವಾರಿ ಐಡಿಯಾಗಳನ್ನೂ ಮಾಡುತ್ತಿರುತ್ತಾರೆ. ಇದೀಗ ಇಂಥದ್ದೆ ಒಂದು ವಿನೂನತ ಕಾರ್ಯದ ಮೂಲಕ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಶಿರೂರ ಗ್ರಾಮದ ರೈತ ಮುತ್ತಣ್ಣ ಪ್ಯಾಟಿಗೌಡರ ಗಮನ ಸೆಳೆದಿದ್ದಾರೆ.  ಇವರು ಕಂಡುಕೊಂಡಿರುವ ಉಪಾಯ ಮಾತ್ರ ಈಗ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.  ಅಷ್ಟೇ ಅಲ್ಲ, ಹೀಗೂ ಮಾಡಬಹುದು.  ಹಣದ ಜೊತೆಯಲ್ಲಿ ಸಮಯವೂ ಉಳಿತಾಯವಾಗುತ್ತದೆ ಎಂದು ಇತರ ರೈತರು ಭೇಷ್ ಎನ್ನುತ್ತಿದ್ದಾರೆ. ರೈತ […]