ಕಾಂಗ್ರೆಸ್ ದೇಶದ ಸರ್ವ ಜನರ ಮನದಲ್ಲಿ ಬೇರೂರಿದೆ- ಪ್ರೊ. ರಾಜು ಆಲಗೂರ

ವಿಜಯಪುರ: ಕಾಂಗ್ರೆಸ್ ದೇಶದ ದುಡಿಯುವ ವರ್ಗಗಳ, ನಿಜವಾದ ದೇಶ ಭಕ್ತರ, ಪ್ರಜಾಪ್ರಭುತ್ವವಾದಿ ಹೋರಾಟಗಾರರು, ವೀರ ಯೋಧರು, ವಿದ್ಯಾರ್ಥಿಗಳು, ಯುವಜನರ ಹೃದಯದಲ್ಲಿ ಬೇರೂರಿದೆ ಎಂದು ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ ಹೇಳಿದ್ದಾರೆ.

ವಿಜಯಪುರದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ 137ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು.

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ ಫಕ್ಷ ಕಾಂಗ್ರೆಸ್. ಇದು ಬಿಜೆಪಿಗೆ ಗೊತ್ತಿರಲಿ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ, ವೈಜನಾಥ ಕರ್ಫೂರಮಠ, ಚಾಂದಸಾಬ ಗಡಗಲಾವ, ಸುರೇಶ ಘೋಣಸಗಿ, ವಸಂತ ಹೊನಮೊಡೆ, ಜಮೀರ್ ಆಹ್ಮದ್ ಬಕ್ಷೀ, ಮಹಾದೇವಿ ಗೋಕಾಕ್, ಆರತಿ ಶಹಾಪುರ, ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌